ಆ್ಯಪ್ನಗರ

Sabarimala Temple: ಶಬರಿಮಲೆಗೆ ಹೋಗಿಯೇ ಸಿದ್ಧ - ತೃಪ್ತಿ ದೇಸಾಯಿ

ಮಹಿಳಾ ಹಕ್ಕುಗಳ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರು ಮಂಡಲ ಮಕರಜ್ಯೋತಿ ಯಾತ್ರೆ ಆರಂಭದಂದು (ನ.17 ) ದೇಗುಲ ಪ್ರವೇಶಿಸುವುದಾಗಿ ತಿಳಿಸಿದ್ದಾರೆ.

Vijaya Karnataka Web 15 Nov 2018, 9:17 am
ತಿರುವನಂತಪುರಂ/ಹೊಸದಿಲ್ಲಿ: ಶಬರಿಮಲೆ ಅಯ್ಯಪ್ಪ ಮಂಡಲ ಮಕರಜ್ಯೋತಿ ಯಾತ್ರೆ ಆರಂಭಕ್ಕೆ ದಿನಾಂಕ ಸಮೀಪಿಸುತ್ತಿರುವಂತೆಯೇ ದೇಗುಲದಲ್ಲಿ ಮಹಿಳೆಯರ ಪ್ರವೇಶ ವಿವಾದದ ಬಿಸಿ ಮತ್ತೆ ಹೆಚ್ಚತೊಡಗಿದೆ. ಮಹಿಳಾ ಕಾರ್ಯಕರ್ತರು ಮತ್ತು ಬಲಪಂಥೀಯರ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಶಬರಿಮಲೆ ಸಾಕ್ಷಿಯಾಗುವ ಆತಂಕ ಎದುರಾಗಿದೆ.
Vijaya Karnataka Web Trupti desai


ಮಹಿಳೆಯರ ಪ್ರವೇಶಾವಕಾಶ ಪ್ರಶ್ನಿಸಿ ನೀಡಿರುವ ತನ್ನದೇ ತೀರ್ಪನ್ನು ಜನವರಿಯಲ್ಲಿ ಮರುಪರಿಶೀಲನೆ ನಡೆಸಲು ಸುಪ್ರೀಂ ಕೋರ್ಟ್‌ ಸಮ್ಮತಿಸಿರುವ ನಡುವೆಯೇ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರು ಮಂಡಲ ಮಕರಜ್ಯೋತಿ ಯಾತ್ರೆ ಆರಂಭದಂದು (ನ.17 )ದೇಗುಲ ಪ್ರವೇಶಿಸುವುದಾಗಿ ತಿಳಿಸಿದ್ದಾರೆ.

ಅಯ್ಯಪ್ಪ ದರ್ಶನ ಪಡೆಯದೆ ಮಹಾರಾಷ್ಟ್ರಕ್ಕೆ ವಾಪಸಾಗುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ. 10ರಿಂದ 50 ವರ್ಷ ವಯೋಮಾನದ ಇತರ ಆರು ಮಹಿಳೆಯರನ್ನೂ ದೇಗುಲಕ್ಕೆ ಕರೆಯದೊಯ್ಯುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಬಲಪಂಥೀಯ ಸಂಘಟನೆಗಳು ಮತ್ತು ಅಯ್ಯಪ್ಪ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಮಹಿಳೆಯರ ಪ್ರವೇಶ ತಡೆಯುವುದಾಗಿ ಅವರೂ ಪ್ರತಿ ಸವಾಲು ಹಾಕಿದ್ದಾರೆ.

ಭದ್ರತೆಗೆ ಮನವಿ:
ಈ ಮಧ್ಯೆ, ದೇಸಾಯಿ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರಿಗೆ ಪತ್ರ ಬರೆದು ದೇಗುಲ ಭೇಟಿ ವೇಳೆ ಭದ್ರತೆ ಒದಗಿಸುವಂತೆ ಕೋರಿದ್ದಾರೆ.

ಕಾದು ನೋಡಲು ಸುಪ್ರೀಂ ಸೂಚನೆ
ಶಬರಿಮಲೆ ದೇಗುಲದೊಳಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಜ.22ರಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿಗೆ ತಡೆ ನೀಡಲು ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್‌ ಬುಧವಾರವೂ ತಿರಸ್ಕರಿಸಿದೆ. ಜ.22ರಂದು ಸಂವಿಧಾನ ಪೀಠ ತೀರ್ಪು ಮರುಪರಿಶೀಲನೆ ಕೋರಿರುವ ಅರ್ಜಿಗಳ ವಿಚಾರಣೆ ಆರಂಭಿಸಲಿದ್ದು, ಅಲ್ಲಿಯವರೆಗೂ ಕಾಯುವಂತೆ ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ವಕೀಲರಿಗೆ ಸೂಚಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ