ಆ್ಯಪ್ನಗರ

SC/ST ಕಾಯ್ದೆ: ಸರಕಾರ ಕಾನೂನು ರೂಪಿಸಿದರೂ ಅಮಾಯಕರನ್ನು ಬಂಧಿಸುವಂತಿಲ್ಲ ಎಂದ ಸುಪ್ರೀಂ ಕೋರ್ಟ್‌

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ಬಂಧನ ನಿಯಮ ಸರಳೀಕರಣದ ಮರುಪರಿಶೀಲನೆ ವಿರುದ್ಧ ಸುಪ್ರೀಂಕೋರ್ಟ್‌ ಕಠಿಣ ನಿಲುವು ಪ್ರಕಟಿಸಿದೆ. ಸಂಸತ್ ಕಾನೂನು ರೂಪಿಸಿದೆ ಎಂಬ ಒಂದೇ ಕಾರಣವನ್ನು ಮುಂದಿಟ್ಟುಕೊಂಡು ಅಮಾಯಕರನ್ನು ಬಂಧಿಸುವಂತಿಲ್ಲ ಎಂದು ಕೋರ್ಟ್‌ ಹೇಳಿದೆ.

TIMESOFINDIA.COM 17 May 2018, 12:41 pm
ಹೊಸದಿಲ್ಲಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ಬಂಧನ ನಿಯಮ ಸರಳೀಕರಣದ ಮರುಪರಿಶೀಲನೆ ವಿರುದ್ಧ ಸುಪ್ರೀಂಕೋರ್ಟ್‌ ಕಠಿಣ ನಿಲುವು ಪ್ರಕಟಿಸಿದೆ. ಸಂಸತ್ ಕಾನೂನು ರೂಪಿಸಿದೆ ಎಂಬ ಒಂದೇ ಕಾರಣವನ್ನು ಮುಂದಿಟ್ಟುಕೊಂಡು ಅಮಾಯಕರನ್ನು ಬಂಧಿಸುವಂತಿಲ್ಲ ಎಂದು ಕೋರ್ಟ್‌ ಹೇಳಿದೆ.
Vijaya Karnataka Web suprem


ಬಂಧನ ನಿಬಂಧನೆಯ ಮೊದಲು ವ್ಯಕ್ತಿಯ ಜೀವನ ಹಾಗೂ ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ಅರಿಯುವುದು ಅವಶ್ಯಕವಾಗಿದೆ. ಇದೇ ಸಪ್ರೀಂಕೋರ್ಟ್‌ನ ಆಜ್ಞೆ ಕೂಡ ಆಗಿದ್ದು, ಈ ವಿಧಾನವನ್ನೇ ಅನುಸರಿಸಿ ಮಾರ್ಚ್ 20ರ ತೀರ್ಪು ಪ್ರಕಟಿಸಲಾಗಿದೆ. ನ್ಯಾಯಯುತ ಪ್ರಕ್ರಿಯೆಯಿಲ್ಲದೆ ವ್ಯಕ್ತಿಯೊಬ್ಬರ ಬಂಧನಕ್ಕೆ ಆದೇಶಿಸುವ ಅಧಿಕಾರ ಇರುವುದಿಲ್ಲ. ವ್ಯಕ್ತಿಯ ಜೀವನ ಹಾಗೂ ಸ್ವಾತಂತ್ರ್ಯದ ಹಕ್ಕಿಗೆ ಇದು ವಿರುದ್ಧವಾಗಿದೆ ಎಂದು ಆದರ್ಶ ಗೋಯಲ್ ಮತ್ತು ಯು.ಯು. ಲಲಿತ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.

ಸಂಸತ್ ಜಾರಿಗೊಳಿಸಿರುವ ಕಾನೂನು ನಿಬಂಧನೆಗಳನ್ನು ಬದಲಿಸಲು ನ್ಯಾಯಾಲಯಗಳು ಆದೇಶಿಸಬಾರದು ಎಂಬ ಕೇಂದ್ರದ ವಾದದ ವಿರುದ್ಧ ನ್ಯಾಯಾಲಯ ಈ ಮೇಲಿನಂತೆ ತಿಳಿಸಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲ ಪಕ್ಷಗಳ ವಾದವನ್ನು ವಿವರವಾಗಿ ಕೇಳುವುದಾಗಿ ಹೇಳಿದ ನ್ಯಾಯಪೀಠ, ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈನಲ್ಲಿ ನಡೆಸಲಿದೆ.

ಪ್ರಾಮಾಣಿಕ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ಭಯದಿಂದ ನಿರ್ವಹಿಸಲು ಹಾಗೂ ಬ್ಲಾಕ್ ಮೇಲ್‌ಗೆ ಗುರಿಯಾಗುವುದನ್ನು ತಪ್ಪಿಸಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯ ಕಠಿಣ ನಿಬಂಧನೆಗಳನ್ನು ಕಡಿಮೆ ಮಾಡವ ಆದೇಶವನ್ನು ಸುಪ್ರೀಂಕೋರ್ಟ್ ಮಾರ್ಚ್ 20ರಂದು ಪ್ರಕಟಿಸಿತ್ತು. ಇದರಿಂದಾಗಿ ಎಸ್‌ಸಿ, ಎಸ್‌ಟಿ ಕಾಯಿದೆ ದುರ್ಬಲಗೊಳಿಸಿದಂತಾಯಿತು ಎಂದು ಭಾವಿಸಿ ದಲಿತ ಸಮಾಜದವರು ಭಾರತ ಬಂದ್‌ಗೆ ಕರೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ