ಆ್ಯಪ್ನಗರ

ರಾಣಿ ಹುಹ್‌ ಸ್ಮಾರಕದ ಉನ್ನತೀಕರಣ ಕಾಮಗಾರಿ 2 ವರ್ಷದಲ್ಲಿ ಪೂರ್ಣ

ಅಯೋಧ್ಯೆ ಮತ್ತು ಕೊರಿಯಾ ನಡುವೆ ಬಾಂಧವ್ಯ ಬೆಸೆಯಲು ಕಾರಣವಾದ ರಾಣಿ ಹುಹ್‌ನ ಸ್ಮರಣಾರ್ಥ ಅಯೋಧ್ಯೆಯ ಸರಯೂ ನದಿ ತಟದಲ್ಲಿ ಸ್ಮಾರಕವಿದೆ. ಪ್ರತಿ ಏಪ್ರಿಲ್‌ನಲ್ಲಿ ಕೊರಿಯನ್ನರು ಇಲ್ಲಿಗೆ ಭೇಟಿಕೊಟ್ಟು ಗೌರವ ಸಲ್ಲಿಸುವುದು ವಾಡಿಕೆ.

Vijaya Karnataka 17 Dec 2018, 5:00 am
ಹೊಸದಿಲ್ಲಿ: ಅಯೋಧ್ಯೆಯ ರಾಜಕುಮಾರಿಯಾಗಿ ಮುಂದೆ ಕೊರಿಯನ್ನರ ಜನಪ್ರಿಯ ರಾಣಿಯಾದ ಹುಹ್‌ ಸ್ಮರಣಾರ್ಥ ಅಯೋಧ್ಯೆಯಲ್ಲಿರುವ ಸ್ಮಾರಕದ ಉನ್ನತೀಕರಣ ಯೋಜನೆ ಇನ್ನೆರೆಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಉತ್ತರ ಕೊರಿಯಾದ ರಾಯಭಾರ ಕಚೇರಿ ತಿಳಿಸಿದೆ. ಸರಯೂ ನದಿ ತಟದಲ್ಲಿರುವ 'ಕೊರಿಯಾ ಪಾರ್ಕ್‌'ನಲ್ಲಿ ಪುಟ್ಟ ಸ್ಮಾರಕವಿದೆ. ಇದರ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ 25 ಕೋಟಿ ರೂ. ಮೊತ್ತದ ಉನ್ನತೀಕರಣ ಯೋಜನೆಗೆ ನವೆಂಬರ್‌ನಲ್ಲಿಯೇ ಚಾಲನೆ ನೀಡಲಾಗಿದೆ.
Vijaya Karnataka Web queen


ದೇವತೆಯ ಆದೇಶದಂತೆ ಅಯೋಧ್ಯೆ ರಾಜಕುಮಾರಿ ಸುರಿರತ್ನ ಕ್ರಿಸ್ತಶಕ 48ರಲ್ಲಿ ಕೊರಿಯಾಗೆ ತೆರಳಿ ಅಲ್ಲಿನ ಅರಸ ಸುರೋವನ್ನು ಮದುವೆಯಾಗಿ ಮುಂದೆ ರಾಣಿ ಹುಹ್‌ ಹ್ವಾಂಗ್‌ ಒಕೆ ಎಂದೇ ಜನಪ್ರಿಯಳಾದಳು ಎನ್ನುತ್ತದೆ ಪ್ರಾಚೀನ ಇತಿಹಾಸ. ಹೀಗೆ ಅಯೋಧ್ಯೆ ಮತ್ತು ಕೊರಿಯಾ ನಡುವೆ ಬಾಂಧವ್ಯ ಬೆಸೆಯಲು ಕಾರಣವಾದ ರಾಣಿ ಹುಹ್‌ನ ಸ್ಮರಣಾರ್ಥ ಅಯೋಧ್ಯೆಯ ಸರಯೂ ನದಿ ತಟದಲ್ಲಿ ಸ್ಮಾರಕವಿದೆ. ಪ್ರತಿ ಏಪ್ರಿಲ್‌ನಲ್ಲಿ ಕೊರಿಯನ್ನರು ಇಲ್ಲಿಗೆ ಭೇಟಿಕೊಟ್ಟು ಗೌರವ ಸಲ್ಲಿಸುವುದು ವಾಡಿಕೆ. ಕಳೆದ ನವೆಂಬರ್‌ನÜಲ್ಲಿ ಅಯೋಧ್ಯೆಯಲ್ಲಿ ನಡೆದ ದೀಪೋತ್ಸವ ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಕ್ಷಿಣ ಕೊರಿಯಾದ ಮೊದಲ ಮಹಿಳೆ ಕಿಮ್‌ ಜುಂಗ್‌ ಸೂಕ್‌ ಅವರು ಸ್ಮಾರಕದ ಉನ್ನತೀಕರಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಜುಲೈನಲ್ಲಿಯೇ ಭಾರತ- ದಕ್ಷಿಣ ಕೊರಿಯಾ ಈ ಯೋಜನೆ ಸಂಬಂಧ ಒಡಂಬಡಿಕೆಗೆ ಸಹಿ ಹಾಕಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ