ಆ್ಯಪ್ನಗರ

2892 ಕೋಟಿ ರೂ ಸಾಲ ಬಾಕಿ; ಅನಿಲ್ ಅಂಬಾನಿ ಒಡೆತನದ ಕೇಂದ್ರ ಕಚೇರಿಯನ್ನು ವಶಪಡಿಸಿಕೊಂಡ ಯೆಸ್‌ ಬ್ಯಾಂಕ್‌..!

ಮುಂಬೈನ ಉಪನಗರ ಸಾಂತಾಕ್ರೂಝ್‌ನಲ್ಲಿರುವ ರಿಲಾಯನ್ಸ್ ಸಮೂಹದ ಕೇಂದ್ರ ಕಚೇರಿಯನ್ನು ಸ್ವಾಧೀನಪಡಿಸಿಕೊಳ್ಳಲು ಯೆಸ್‌ ಬ್ಯಾಂಕ್‌ ಮುಂದಾಗಿದ್ದು, ರಿಲಾಯನ್ಸ್‌ ಇನ್ಫ್ರಾಸ್ಟ್ರಕ್ಚರ್‌ಗೆ ನೀಡಿರುವ ಸಾಲ ವಸೂಲಾತಿ ಅಂಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಯೆಸ್‌ ಬ್ಯಾಂಕ್‌ ನೀಡಿರುವ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

TIMESOFINDIA.COM 30 Jul 2020, 2:30 pm
ಹೊಸದಿಲ್ಲಿ: 2892 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿರುವ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಸಮೂಹದ ಕೇಂದ್ರ ಕಚೇರಿಯನ್ನು ಸ್ವಾಧೀನಪಡಿಸಿಕೊಳ್ಳಲು ಯೆಸ್‌ ಬ್ಯಾಂಕ್ ಮುಂದಾಗಿದೆ.
Vijaya Karnataka Web ANIL AMBANI


ಒಂದೇ ದಿನ ದೇಶದಲ್ಲಿ ದಾಖಲಾಯ್ತು 52,000 ಕೊರೊನಾ ಕೇಸ್‌, ಸಾವಿನ ಸಂಖ್ಯೆಯಲ್ಲೂ ಭಾರೀ ಏರಿಕೆ!

ಮುಂಬೈನ ಉಪನಗರ ಸಾಂತಾಕ್ರೂಝ್‌ನಲ್ಲಿರುವ ರಿಲಾಯನ್ಸ್ ಸಮೂಹದ ಕೇಂದ್ರ ಕಚೇರಿಯನ್ನು ಸ್ವಾಧೀನಪಡಿಸಿಕೊಳ್ಳಲು ಯೆಸ್‌ ಬ್ಯಾಂಕ್‌ ಮುಂದಾಗಿದ್ದು, ರಿಲಾಯನ್ಸ್‌ ಇನ್ಫ್ರಾಸ್ಟ್ರಕ್ಚರ್‌ಗೆ ನೀಡಿರುವ ಸಾಲ ವಸೂಲಾತಿ ಅಂಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಯೆಸ್‌ ಬ್ಯಾಂಕ್‌ ನೀಡಿರುವ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಅನಿಲ್ ಅಂಬಾನಿ ಗ್ರೂಪ್ ಕಂಪನಿ ಯೆಸ್‌ ಬ್ಯಾಂಕ್‌ನಿಂದ 2892 ಕೋಟಿ ರೂಪಾಯಿ ಸಾಲ ಪಡೆದುಕೊಂಡಿತ್ತು. ಆದರೆ ಸರಿಯಾದ ಸಮಯಕ್ಕೆ ಸಾಲವನ್ನು ಹಿಂತಿರುಗಿಸಲಿಲ್ಲ

ಕೊನೆಗೂ ಗೆಹ್ಲೋಟ್‌ ಮನವಿಗೆ ಅಸ್ತು ಎಂದ ರಾಜ್ಯಪಾಲರು, ರಾಜಸ್ಥಾನ ಬಲಾಬಲಕ್ಕೆ ವೇದಿಕೆ

ಹೀಗಾಗಿ ಕೇಂದ್ರ ಕಚೇರಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಅದರ ಜೊತೆಗೆ ದಕ್ಷಿಣ ಮುಂಬೈನಲ್ಲಿರುವ ರಿಲಾಯನ್ಸ್‌ ಇನ್ಫ್ರಾಸ್ಟ್ರಕ್ಚರ್‌ಗೆ ಸೇರಿದ ಎರಡು ಫ್ಲ್ಯಾಟ್‌ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಯೆಸ್‌ ಬ್ಯಾಂಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇತ್ತೀಚೆಗೆ ಅನಿಲ್ ಧೀರುಬಾಯಿ ಅಂಬಾನಿ ಗ್ರೂಪ್‌ಗೆ ಸೇರಿದ ಬಹುತೇಕ ಕಂಪನಿಗಳು ಸಾಂತಕ್ರೂಝ್ ಕಚೇರಿಯಿಂದ ಹೊರ ಬಂದು ರಿಲಾಯನ್ಸ್ ಸೆಂಟರ್ ಮೂಲಕ ಕಾರ್ಯನಿರ್ವಹಣೆ ಮಾಡುತ್ತಿದ್ದವು.

ಕೇರಳದಲ್ಲಿ ಅಬ್ಬರಿಸಿ ಬೊಬ್ಬಿರಿದ ವರುಣ: ರಸ್ತೆ ತುಂಬೆಲ್ಲ ನೀರು, ಹಲವೆಡೆ ತೀವ್ರ ಭೂಕುಸಿತ!

ರಿಲಯನ್ಸ್ ಸಮೂಹದ ಕೇಂದ್ರ ಕಚೇರಿ 21432 ಚದರ ಮೀಟರ್ ವಿಶಾಲವಾಗಿದ್ದು, ಸುಸ್ತಿ ಸಾಲದಿಂದಾಗಿ ಕಳೆದ ಮಾರ್ಚ್‌ನಲ್ಲಿ ಹಣಕಾಸು ಸಮಸ್ಯೆಗೆ ಸಿಲುಕಿದ್ದ ಯೆಸ್‌ ಬ್ಯಾಂಕ್‌ಗೆ ಅನಿಲ್ ಅಂಬಾನಿ ಸಮೂಹ ಹನ್ನೆರಡು ಸಾವಿರ ಕೋಟಿ ಸಾಲ ಮರುಪಾವತಿ ಮಾಡಬೇಕಾಗಿದೆ. ಕಳೆದ ಮೇ 6 ರಂದು ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್‌ನಿಂದ 2,892.44 ಕೋಟಿ ರೂಪಾಯಿ ಸಾಲ ಬಾಕಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಸಾಲ ಹಿಂತಿರುಗಿಸದಿದ್ದಾಗ 60 ದಿನಗಳ ಅವಧಿಯ ನೋಟಿಸ್ ನೀಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ