ಆ್ಯಪ್ನಗರ

ಆಹಾರ, ನೀರಿಲ್ಲದೆ 70ಕ್ಕೂ ಹೆಚ್ಚು ವರ್ಷ ಬದುಕುಳಿರುವುದಾಗಿ ಹೇಳಿದ ಯೋಗಿ ಇನ್ನಿಲ್ಲ!

ಅಹಮದಾಬಾದ್‌ನಲ್ಲಿ ಆಹಾರ, ನೀರಿಲ್ಲದೆ ಬರಿ ಗಾಳಿ ಸೇವಿಸುತ್ತಾ 70 ವರ್ಷಕ್ಕೂ ಹೆಚ್ಚು ಕಾಲ ಬದುಕುಳಿರುವುದಾಗಿ ಹೇಳಿಕೊಂಡಿರುವ ಯೋಗಿ ಮಂಗಳವಾರದಂದು ನಿಧನರಾದರು. ಅವರಿಗೆ 90 ವರ್ಷವಾಗಿತ್ತು.

Vijaya Karnataka Web 26 May 2020, 5:06 pm
ಅಹಮದಾಬಾದ್‌: ಇದನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟ ವಿಚಾರ. ಅಹಮದಾಬಾದ್‌ನಲ್ಲಿ ಆಹಾರ ಹಾಗೂ ನೀರಿಲ್ಲದೆ 70 ವರ್ಷಗಳಿಗೂ ಹೆಚ್ಚು ಕಾಲ ಬದುಕುಳಿದಿರುವುದಾಗಿ ಹೇಳಿರುವ ಯೋಗಿ ಮಂಗಳವಾರದಂದು ನಿಧನರಾದರು.
Vijaya Karnataka Web ಚುನ್ರಿವಾಲಾ ಮಾತಾಜಿ


ಗುಜರಾತ್ ಗಾಂಧಿನಗರ ಜಿಲ್ಲೆಯ 90 ವರ್ಷದ ಯೋಗಿ ಪ್ರಹ್ಲಾದ್ ಜಾನಿ ಅಲಿಯಾಸ್ 'ಚುನ್ರಿವಾಲಾ ಮಾತಾಜಿ' ಎಂಬವರೇ ನಿಧನರಾದವರು.

70 ವರ್ಷಗಳಿಗೂ ಹೆಚ್ಚು ಕಾಲ ಆಹಾರ ಅಥವಾ ನೀರಿಲ್ಲದೆ ಬರಿ ಗಾಳಿಯನ್ನು ಸೇವಿಸುತ್ತಾ ಬದುಕುಳಿದಿರುವುದಾಗಿ ಚರದಾದಲ್ಲಿರುವ ಅವರ ಶಿಷ್ಯರು ಹೇಳಿಕೊಂಡಿದ್ದಾರೆ.

ಚುನ್ರಿವಾಲಾ ಮಾತಾಜಿ ಎಂದೇ ಜನಪ್ರಿಯಗೊಂಡಿರುವ ಯೋಗಿ, ಅಂಬಾ ದೇವತೆಯು ತಮ್ಮನ್ನು ನೋಡಿಕೊಳ್ಳುತ್ತಿದ್ದು ಬದುಕಲು ಆಹಾರ ಅಥವಾ ನೀರಿನ ಅಗತ್ಯವಿಲ್ಲ ಎಂದು ಹೇಳಿಕೊಂಡಿದ್ದರು.

ಉತ್ತರ ಭಾರತದಲ್ಲಿ ಈಗ ರಕ್ಕಸ ಗಾತ್ರದ ಮಿಡತೆ ಚಂಡಮಾರುತ!

ಇದೀಗ ಮೃತ ಶರೀರವನ್ನು ಗುಜರಾತ್‌ನ ಬನಸ್ಕಂತ ಜಿಲ್ಲೆಯ ಅಂಬಾಜಿ ಮಂದಿರಯ ಬಳಿರುವ ಅಶ್ರಮ ಯಾ ಗುಹೆಯಲ್ಲಿ ಅಂತ್ಯ ದರ್ಶನಕ್ಕೆ ಇಡಲಾಗಿದೆ. ಬಳಿಕ ಗುರುವಾರ ಸಮಾಧಿ ಮಾಡಲಾಗುವುದು.

ದೇವತೆ ಅಂಬಾ ತರಹನೇ ಕೆಂಪು ಸೀರಿ ಧರಿಸುತ್ತಿದ್ದರು. ಹಾಗಾಗಿ ಚುನ್ರಿವಾಲಾ ಮಾತಾಜಿ ಎಂದು ಕರೆಯಲಾಗುತ್ತಿತ್ತು. ಚಿಕ್ಕವನಿಂದಲೇ ಹೆತ್ತವರ ಮನೆಯಿಂದ ದೂರ ಹೊರಟ ಯೋಗಿ, ಆಧ್ಯಾತ್ಮಿಕ ಚಿಂತನೆಯತ್ತ ವಾಲಿದ್ದರು.

ಆಹಾರ ಅಥವಾ ನೀರಿಲದೆ ಬದುಕುಳಿಯುತ್ತಾರೆ ಎಂಬ ಯೋಗಿ ಹೇಳಿಕೆಯು ಬಹಳಷ್ಟು ಕುತೂಹಲವನ್ನುಂಟು ಮಾಡಿತ್ತು. ವಿಜ್ಞಾನಿಗಳು ಈ ಬಗ್ಗೆ ಪರೀಕ್ಷೆ ಕೂಡಾ ನಡೆಸಿದ್ದರು ಎಂದು ಹೇಳುತ್ತಾರೆ.

ಗುಜರಾತ್‌ನಲ್ಲಿ ಹೈ ಡ್ರಾಮಾ ಸೃಷ್ಟಿಸಿದ ಚಿರತೆ ಜಾಲಿ ರೈಡ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ