ಆ್ಯಪ್ನಗರ

ಉ.ಪ್ರದೇಶದಲ್ಲಿ 3 ರೂ.ಗೆ ಟಿಫನ್‌, 5 ರೂ.ಗೆ ಊಟ !

ಉತ್ತರ ಪ್ರದೇಶ ಸರಕಾರ ಕಡಿಮೆ ಖರ್ಚಿನಲ್ಲಿ ಅನ್ನಪೂರ್ಣ ಭೋಜನಾಲಯವನ್ನು ಆರಂಭಿಸಲು ನಿರ್ಧರಿಸಿದೆ.

ಟೈಮ್ಸ್ ಆಫ್ ಇಂಡಿಯಾ 13 Apr 2017, 7:05 pm
ಲಖನೌ: ಉತ್ತರ ಪ್ರದೇಶ ಜನರಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಆಹಾರ ನೀಡುವ ಉದ್ಧೇಶದಿಂದ ಇಲ್ಲಿನ ಸರಕಾರ ನೂತನ ಕ್ಯಾಂಟೀನ್ ಸೌಲಭ್ಯ ನೀಡಲು ಮುಂದೆ ಬಂದಿದೆ.
Vijaya Karnataka Web yogis annapurna bhojnalaya to replace akhileshs samajwadi canteen
ಉ.ಪ್ರದೇಶದಲ್ಲಿ 3 ರೂ.ಗೆ ಟಿಫನ್‌, 5 ರೂ.ಗೆ ಊಟ !


ತಮಿಳುನಾಡಿನ ಅಮ್ಮಾ ಕ್ಯಾಂಟೀನ್‌, ಕರ್ನಾಟಕದ ಇಂದಿರಾ ಕ್ಯಾಂಟೀನ್ ಬಳಿಕ ಇದೀಗ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರವೂ ಕ್ಯಾಂಟೀನ್‌ ಸೌಲಭ್ಯ ನೀಡಲು ಮುಂದಾಗಿದ್ದು, 'ಅನ್ನಪೂರ್ಣ ಭೋಜನಾಲಯ'ವನ್ನು ಸ್ಥಾಪಿಸಲು ಮುಂದಾಗಿದೆ.

ಮಾಹಿತಿಗಳ ಪ್ರಕಾರ ಆದಿತ್ಯನಾಥ್‌ ನೇತೃತ್ವದ ಸರಕಾರ ಈಗಾಗಲೇ ತಮ್ಮ ಭವಿಷ್ಯದ ಹೋಟೆಲ್‌ನ ಮೆನು ಕೂಡಾ ಸಿದ್ಧ ಪಡಿಸಿದ್ದು, ಕೇವಲ 3 ರೂ.ಗೆ ಮುಂಜಾನೆಯ ತಿಂಡಿಗೆ ಇಡ್ಲಿ- ವಡಾ ಮತ್ತು ಸಾಂಬಾರ್, ಪೋಹಾ (ಅವಲಕ್ಕಿ ಬಾತ್‌), ಪಕೋಡಾ, ಕಚೋರಿ ಮತ್ತು ಟೀ ನೀಡಲಾಗುತ್ತದೆ.

ಅಪರಾಹ್ನದ ಊಟ ಹಾಗು ರಾತ್ರಿ ಊಟಕ್ಕೆ ಕೇವಲ 5 ರೂ. ನಿಗದಿ ಪಡಿಸಲಾಗಿದ್ದು, ದಾಲ್‌, ರೈಸ್‌, ಚಪಾತಿ ಸೇರಿದಂತೆ ಋತುವಾರು ತರಕಾರಿಗಳ ಸಾಂಬಾರ್‌ ನೀಡಲಾಗುತ್ತದೆ. ಹೋಟೆಲ್‌ಗಳಲ್ಲಿ ಸ್ಟೀಲ್‌ ತಟ್ಟೆಯಲ್ಲಿ ಊಟ, ಉಪಾಹಾರ ನೀಡಲಾಗುತ್ತದೆ.

ಕಳೆದ ವರ್ಷವಷ್ಟೇ ಸಮಾಜವಾದಿ ಪಾರ್ಟಿಯ ಅಖಿಲೇಶ್‌ ಯಾದವ್ ನೇತೃತ್ವದ ಸರಕಾರ ಸಮಾಜವಾದಿ ಕ್ಯಾಂಟಿನ್ ಮಾಡಿತ್ತಾದರೂ ಇದಕ್ಕೆ ಜನಬೆಂಬಲ ದೊರಕದ ಹಿನ್ನೆಲೆಯಲ್ಲಿ ಈ ಯೋಜನೆ ನೆಲಕಚ್ಚಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ