ಆ್ಯಪ್ನಗರ

ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರು ಜೈಲಿಗೆ: ಸಚಿವರ ಖಡಕ್ ಎಚ್ಚರಿಕೆ!

ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರನ್ನು ಅನ್ನ, ನೀರು ನೀಡದೆಯೇ ಪೊಲೀಸ್ ಠಾಣೆಯಲ್ಲಿ ಕುಡಿಹಾಕುತ್ತೇವೆ ಎಂದು ಯೋಗಿ ಆದಿತ್ಯನಾಥ್ ಸರಕಾರದ ಸಚಿವ ಓಂಪ್ರಕಾಶ್ ರಾಜ್ಭರ್ ಎಚ್ಚರಿಕೆ ನೀಡಿದ್ದಾರೆ.

PTI 9 Oct 2017, 1:10 pm
ಲಖನೌ: ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರನ್ನು ಅನ್ನ, ನೀರು ನೀಡದೆಯೇ ಪೊಲೀಸ್ ಠಾಣೆಯಲ್ಲಿ ಕೂಡಿಹಾಕುತ್ತೇವೆ ಎಂದು ಯೋಗಿ ಆದಿತ್ಯನಾಥ್ ಸರಕಾರದ ಸಚಿವ ಓಂಪ್ರಕಾಶ್ ರಾಜ್ಭರ್ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web yogis minister threatens to jail parents without food water for not sending kids to schools
ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರು ಜೈಲಿಗೆ: ಸಚಿವರ ಖಡಕ್ ಎಚ್ಚರಿಕೆ!


ವಿಕಲಚೇತನರ ಸಬಿಲೀಕರಣ ಇಲಾಖೆಯ ಸಚಿವ ಓಂಪ್ರಕಾಶ್, 'ನಾನು ನನ್ನ ಆಯ್ಕೆಯ ಕಾನೂನೊಂದನ್ನು ಜಾರಿಗೊಳಿಸಲಿದ್ದೇನೆ. ಬಡವರ ಮಕ್ಕಳು ಶಾಲೆಗೆ ಹೋಗದಿದ್ದರೆ, ಅವರ ಪೋಷಕರನ್ನು ಅನ್ನ, ನೀರು ಇಲ್ಲದೆಯೇ 5 ದಿನ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡುತ್ತೇನೆ' ಎಂದು ಎಚ್ಚರಿಸಿದ್ದಾರೆ.

ಶನಿವಾರ ಬಾಲಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಓಂಪ್ರಕಾಶ್ ರಾಜ್ಭರ್ ಈ ರೀತಿಯ ಎಚ್ಚರಿಕೆ ನೀಡಿದ್ದು, ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದುವರೆಗೂ ನಿಮ್ಮ ನಾಯಕರು, ಅಣ್ಣ-ತಮ್ಮಂದಿರುವ ನಿಮಗೆ ಅರ್ಥ ಮಾಡಿಸಲು ಪ್ರಯತ್ನಿಸಿದರು, ಆದರೆ, ಅರ್ಥವಾಗಿಲ್ಲ. ಇನ್ನೂ ಆರೇ ತಿಂಗಳಲ್ಲಿ ಎಲ್ಲ ಪೋಷಕರಿಗೂ ಸರಿಯಾದ ಪಾಠ ಕಲಿಸುವ ಪ್ರಯತ್ನ ಮಾಡುತ್ತೇನೆ' ಎಂದು ಸಚಿವರು ಹೇಳಿದ್ದಾರೆ.

ಸೀತಾ ಮಾತೆಯನ್ನು ರಕ್ಷಿಸಲು ಶ್ರೀರಾಮನು ಲಂಕೆಗೆ ತೆರಳಬೇಕಿತ್ತು. ಈ ವೇಳೆ ದಾರಿ ಮಾಡಿಕೊಡಲು ಸಮುದ್ರರಾಜ ಒಪ್ಪಲಿಲ್ಲ. ಆಗ ಶ್ರೀರಾಮ ಶಸ್ತ್ರಾಸ್ತ್ರಗಳಿಂದಲೇ ಸೇತುವೆ ನಿರ್ಮಾಣ ಮಾಡಿ ತನ್ನ ಕಾರ್ಯ ಸಾಧಿಸಿದ. ಅಂತಿಯೇ ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರಿಗೆ ಸೂಕ್ತ ಬುದ್ದಿ ಕಲಿಸಬೇಕಿದೆ. ಅಗತ್ಯ ಬಿದ್ದರೆ, ಇಂತಹ ಪೋಷಕರಿಗೆ ಕಠಿಣ ಶಿಕ್ಷೆ ವಿಧಿಸಲು ಬದ್ಧ ಎಂದು ಸಚಿವರು ಕಿಡಿಕಾರಿದ್ದಾರೆ.

ಸಚಿವರ ಹೇಳಿಕೆ ಕುರಿತು ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಿದೆ. ಏತನ್ಮಧ್ಯೆ, ಸಚಿವರು ತಮ್ಮ ಹೇಳಿಕೆ ಬದ್ಧ ಎಂದು ತಿಳಿಸಿದ್ದಾರೆ. 'ಸರಕಾರಿ ಶಾಲೆಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿದ್ದರೂ, ಪೋಷಕರೇಕೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ' ಎಂದು ಸಚಿವರು ಮರು ಪ್ರಶ್ನೆ ಹಾಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ