ಆ್ಯಪ್ನಗರ

ಪೌರತ್ವ ಕಾಯಿದೆ ವಿಚಾರ: ಜಟಾಪಟಿಗೆ ಬಿದ್ದ ಇಬ್ಬರು ಬಾಲಿವುಡ್‌ ನಟರು! ಯಾರವರು?

ಕೇಂದ್ರ ಸರಕಾರ ಜಾರಿಗೊಳಿಸಿರುವ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಕುರಿತಂತೆ ಬಾಲಿವುಡ್‌ ನಟರಾದ ಶಾ ಮತ್ತು ಅನುಪಮ್‌ ಖೇರ್‌ ಜಟಾಪಟಿಗೆ ಬಿದ್ದಿದ್ದಾರೆ. ಸಿಎಎ ಪರ ಮತ್ತು ವಿರೋಧವಾಗಿ ವಾಗ್ಯುದ್ಧ ನಡೆಸಿದ್ದಾರೆ.

Vijaya Karnataka Web 23 Jan 2020, 12:10 am
ಹೊಸದಿಲ್ಲಿ: ಕೇಂದ್ರ ಸರಕಾರ ಜಾರಿಗೊಳಿಸಿರುವ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಕುರಿತಂತೆ ದೇಶವ್ಯಾಪಿ ಪ್ರತಿಭಟನೆ ನಡೆಯುತ್ತಿದೆ. ಈ ವಿರೋಧಕ್ಕೆ ಬಾಲಿವುಡ್‌ ನಟರೂ ಪ್ರವೇಶ ಪಡೆದಿದ್ದಾರೆ. ಇದೀಗ ಇಬ್ಬರು ಬಾಲಿವುಡ್‌ ನಟರು ಸಿಎಎ ಪರ ಮತ್ತು ವಿರೋಧವಾಗಿ ಜಟಾಪಟಿಗೆ ಬಿದ್ದಿದ್ದಾರೆ.
Vijaya Karnataka Web Anupam Kher, Naseeruddin Shah




ಇತ್ತೀಚೆಗಷ್ಟೇ ಬಾಲಿವುಡ್‌ ನಟ ನಾಸಿರುದ್ಧೀನ್‌ ಶಾ ಅವರು ಕೇಂದ್ರ ಸರಕಾರ ಜಾರಿಗೆ ತಂದಿರುವ ಕಾನೂನುಗಳು ನನ್ನಲ್ಲಿ ಕತೂಹಲು ಮೂಡಿಸಿಲ್ಲ ಬದಲಿಗೆ ಸಿಟ್ಟು ತರಿಸಿವೆ ಎಂಬ ಹೇಳಿಕೆ ನೀಡಿದ್ದರು ( ದಿ ವೈರ್‌ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ). ಅಲ್ಲದೆ ಬಾಲಿವುಡ್‌ನ ಮತ್ತೊಬ್ಬ ಖ್ಯಾತ ನಟ ಅನುಪಮ್‌ ಖೇರ್‌ ಅವರು ಸಿಎಎ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದ ಪೋಸ್ಟ್‌ ಕುರಿತೂ ಪ್ರಸ್ತಾಪಿಸಿದ್ದರು.



ಇದಕ್ಕೆ ಅನುಪಮ್‌ ಖೇರ್‌ ಅವರು ಪ್ರತಿಕ್ರಿಯಿಸಿದ್ದು, ನಾಸಿರುದ್ಧಿನ್‌ ಶಾ ಅವರು ಯಶಸ್ವಿ ವೃತ್ತಿಬದುಕು ಹೊಂದಿದ್ದರೂ, ಹತಾಶೆಯ ಬದುಕು ಸಾಗಿಸುತ್ತಿದ್ದಾರೆ. ನಾನು ನಿಮ್ಮ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ