ಆ್ಯಪ್ನಗರ

ದೇಶದ ಶಾಂತಿ ನಿಮಗೆ ಬೇಕಾಗಿಲ್ಲ: ಅಯೋಧ್ಯೆ ಅರ್ಜಿದಾರನಿಗೆ ತರಾಟೆ

ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ಸುಪ್ರೀಂ ನೇಮಿಸಿರುವ ತ್ರಿ ಸದಸ್ಯರ ಸಂಧಾನ ಸಮಿತಿಯು ಮೇ 3ರೊಳಗೆ ತನ್ನ ನಿರ್ಧಾರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ.

Vijaya Karnataka 13 Apr 2019, 5:00 am
ಹೊಸದಿಲ್ಲಿ: ಅಯೋಧ್ಯೆಯ ವಿವಾದಿತವಲ್ಲದ ಪ್ರದೇಶದಲ್ಲಿ ಶ್ರೀರಾಮಚಂದ್ರನ ಪೂಜೆ ಕೈಗೊಳ್ಳಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌, ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ. 'ರಾಮಜನ್ಮಭೂಮಿ ಮಂದಿರ ನಿರ್ಮಾಣ ನ್ಯಾಸ್‌' ಟ್ರಸ್ಟ್‌ನ ಮಾಜಿ ರಾಷ್ಟ್ರೀಯ ಕಾರ‍್ಯದರ್ಶಿ ಅಮರನಾಥ್‌ ಮಿಶ್ರಾ ಅವರು ಅಯೋಧ್ಯೆಯ ವಿವಾದಿತವಲ್ಲದ 67.7 ಎಕರೆ ಪ್ರದೇಶದ ಯಾವುದಾರೂ ಒಂದು ಕಡೆ ರಾಮನ ಪೂಜೆಗೆ ಅವಕಾಶ ನೀಡಿ ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನು ವಜಾಗೊಳಿಸಿದ ಸಿಜೆಐ ರಂಜನ್‌ ಗೊಗೋಯ್‌, ''ನೀವು ಈ ದೇಶವನ್ನು ಶಾಂತಿಯಿಂದ ಇರಲು ಬಿಡುತ್ತಿಲ್ಲ. ನಿಮ್ಮಂತಹ ಕೆಲವರು ವಿವಾದವನ್ನು ಇನ್ನಷ್ಟು ಜಟಿಲಗೊಳಿಸುತ್ತಾ ಸದಾ ಜೀವಂತವಾಗಿಸುತ್ತೀರಿ,'' ಎಂದು ತರಾಟೆಗೆ ತೆಗೆದುಕೊಂಡರು. ಅಲಹಾಬಾದ್‌ ಹೈಕೋರ್ಟ್‌ ಇದೇ ರೀತಿಯ ಮನವಿಯನ್ನು ಈ ಹಿಂದೆ ವಜಾಗೊಳಿಸಿತ್ತಲ್ಲದೇ ನ್ಯಾಯಾಲಯದ ಆದೇಶ ಉಲ್ಲಂಘಿಸಿದವರಿಗೆ 5 ಲಕ್ಷ ರೂ. ದಂಡ ವಿಧಿಸುವುದಾಗಿ ಹೇಳಿತ್ತು. ಅಯೋಧ್ಯೆ ವಿವಾದ ಇತ್ಯರ್ಥಕ್ಕೆ ಸುಪ್ರೀಂ ನೇಮಿಸಿರುವ ತ್ರಿ ಸದಸ್ಯರ ಸಂಧಾನ ಸಮಿತಿಯು ಮೇ 3ರೊಳಗೆ ತನ್ನ ನಿರ್ಧಾರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ.
Vijaya Karnataka Web supreme




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ