ಆ್ಯಪ್ನಗರ

ಯುವತಿಯನ್ನು ಇರಿದುಕೊಂದ ಭಗ್ನಪ್ರೇಮಿ

ಪರಿಚಯದ ಯುವತಿ ಪರಪುರುಷರ ಜತೆ ಮಾತನಾಡುತ್ತಾಳೆ ಮತ್ತು ಆಧುನಿಕ ಜೀವನಶೈಲಿ ರೂಢಿಸಿಕೊಂಡಿದ್ದಾಳೆ. ತನ್ನ ಜತೆ ಮಾತನಾಡುತ್ತಿಲ್ಲ, ನಾವಿಬ್ಬರೂ ಮದುವೆಯಾಗಲು ಸಾಧ್ಯವಿಲ್ಲ ಎಂದುಕೊಂಡ ಭಗ್ನಪ್ರೇಮಿಯೊಬ್ಬ 25 ವರ್ಷದ ಯುವತಿಯನ್ನು 38 ಬಾರಿ ಇರಿದು ಕೊಂದಿದ್ದಾನೆ.

Vijaya Karnataka Web 15 Sep 2018, 6:39 pm
ಇಂದೋರ್: ಪರಿಚಯದ ಯುವತಿ ಪರಪುರುಷರ ಜತೆ ಮಾತನಾಡುತ್ತಾಳೆ ಮತ್ತು ಆಧುನಿಕ ಜೀವನಶೈಲಿ ರೂಢಿಸಿಕೊಂಡಿದ್ದಾಳೆ. ತನ್ನ ಜತೆ ಮಾತನಾಡುತ್ತಿಲ್ಲ, ನಾವಿಬ್ಬರೂ ಮದುವೆಯಾಗಲು ಸಾಧ್ಯವಿಲ್ಲ ಎಂದುಕೊಂಡ ಭಗ್ನಪ್ರೇಮಿಯೊಬ್ಬ 25 ವರ್ಷದ ಯುವತಿಯನ್ನು 38 ಬಾರಿ ಇರಿದು ಕೊಂದಿದ್ದಾನೆ.
Vijaya Karnataka Web Supriya jain


ಗುರುವಾರ ರಾತ್ರಿ ಯುವತಿ ಕೆಲಸ ಮಾಡುತ್ತಿದ್ದ ಕಚೇರಿ ಬಳಿ ಆಗಮಿಸಿದ್ದ ಆರೋಪಿ ಕಮ್ಲೇಶ್ ಸಾಹು, ಯುವತಿ ಸುಪ್ರಿಯಾ ಜೈನ್ ಹೊರಗೆ ಊಟಕ್ಕೆ ಬಂದ ಸಂದರ್ಭ ನೋಡಿ ಆಕೆಯನ್ನು ಹಿಂಬಾಲಿಸಿದ್ದ. ನಂತರ ಆಕೆಯನ್ನು ಹಿಡಿದುಕೊಂಡು ಕತ್ತಿಯಿಂದ 38 ಬಾರಿ ಇರಿದಿದ್ದಾನೆ. ಇಬ್ಬರು ಆಕೆಯ ಸಹಾಯಕ್ಕೆ ಧಾವಿಸಿದರಾದರೂ, ಅವರಿಗೆ ಬೆದರಿಕೆ ಒಡ್ಡಿದ್ದರಿಂದ ದೂರ ಸರಿದಿದ್ದಾರೆ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಬಂದಾಗ ಕಮ್ಲೇಶ್ ಆಕೆಯ ರಕ್ತಸಿಕ್ತ ದೇಹದ ಬಳಿ ಕುಳಿತಿದ್ದ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಆಕೆ ಮೃತಪಟ್ಟಿದ್ದಾಳೆ.

ಆಕೆಯನ್ನು ನಾನು ತುಂಬಾ ಪ್ರೀತಿಸುತ್ತಿದೆ. ಆಕೆಗೆ 12ನೇ ತರಗತಿಯಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದೆ. ಕೆಲಸ ದೊರೆತ ಬಳಿಕ ಪ್ರೀತಿಸೋಣ ಎಂದು ಆಕೆ ಹೇಳಿದ್ದಳು. ಆದರೆ ಕೆಲಸ ದೊರೆತ ಬಳಿಕ ನನ್ನನ್ನು ನಿರ್ಲಕ್ಷಿಸಿದ್ದಳು. ಜತೆಗೆ ಇತರ ಗೆಳೆಯರ ಹೊರಗಡೆ ಹೋಗುತ್ತಿದ್ದಳು. ಆಧುನಿಕ ಶೈಲಿಯ ಉಡುಪು ಧರಿಸುತ್ತಿದ್ದಳು, ಫೇಸ್‌ಬುಕ್‌ನಲ್ಲಿ ಅವುಗಳನ್ನು ಪೋಸ್ಟ್ ಮಾಡುತ್ತಿದ್ದಳು. ಹೀಗಾಗಿ ಆಕೆಯನ್ನು ಕೊಲೆ ಮಾಡಿದೆ ಎಂದು ಪೊಲೀಸ್ ಬಂಧನದಲ್ಲಿರುವ ಕಮಲೇಶ್ ತಿಳಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ