ಆ್ಯಪ್ನಗರ

ಏರ್ ಬ್ಲೋ ಅನಾಹುತ: ಕರುಳು ಊದಿಕೊಂಡು ಯುವಕ ಸಾವು

ಮಹಾರಾಷ್ಟ್ರದ ಕೊಲ್ಹಾಪುರದ ಅತಿಗ್ರೆ ತಾಲೂಕಿನ ಫೌಂಡ್ರಿ ಗ್ರಾಮದಲ್ಲಿನ ಫ್ಯಾಕ್ಟರಿಯೊಂದರಲ್ಲಿ ಬಳಸಲಾದ ಏರ್ ಬ್ಲೋ ಪಂಪ್‌ ಅಲ್ಲಿನ ಯುವ ಕೆಲಸಗಾರನೋರ್ವನ ಜೀವ ತೆಗೆದಿದೆ.

Maharashtra Times 20 Sep 2018, 4:08 pm
ಕೋಲ್ಹಾಪುರ: ಮಹಾರಾಷ್ಟ್ರದ ಕೊಲ್ಹಾಪುರದ ಅತಿಗ್ರೆ ತಾಲೂಕಿನ ಫೌಂಡ್ರಿ ಗ್ರಾಮದಲ್ಲಿನ ಫ್ಯಾಕ್ಟರಿಯೊಂದರಲ್ಲಿ ಬಳಸಲಾದ ಏರ್ ಬ್ಲೋ ಪಂಪ್‌ ಅಲ್ಲಿನ ಯುವ ಕೆಲಸಗಾರನೋರ್ವನ ಜೀವ ತೆಗೆದಿದೆ.
Vijaya Karnataka Web factory youth


ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕೆಲಸಗಾರರ ಮೈಮೇಲೆ ಇರುವ ಲೋಹದ ಕಣಗಳನ್ನು ತೆಗೆಯಲು ಏರ್ ಬ್ಲೋ ಪಂಪ್ ಬಳಸಲಾಗುತ್ತದೆ. ಯಂತ್ರದ ಮೂಲಕ ರಭಸವಾಗಿ ಗಾಳಿ ಹಾಯಿಸುವುದರಿಂದ ಅವರ ಮೈಯಲ್ಲಿನ ಲೋಹದ ತುಣುಕು, ಧೂಳು ಹೋಗುತ್ತದೆ. ಆದರೆ ಏರ್‌ ಬ್ಲೋ ಬಳಸುವ ಸಂದರ್ಭ ಫ್ಯಾಕ್ಟರಿಯ ನೌಕರ ಆದಿತ್ಯ ಜಾಧವ್‌ ಎಂಬ ಯುವಕನ ಗುದದ್ವಾರದ ಮೂಲಕ ಗಾಳಿ ಹಾಯಿಸಲಾಗಿದೆ.

ಇದರಿಂದ ಆತನ ಕರುಳು ಊದಿಕೊಂಡು, ಗಾಳಿ ಶೇಖರಗೊಂಡ ಕಾರಣ ಯುವಕ ಸಾವನ್ನಪ್ಪಿದ್ದಾನೆ. ಆದಿತ್ಯನ ಸಾವಿನ ಕುರಿತು ಪೊಲೀಸರಿಗೆ ನಿಖರ ಕಾರಣ ತಿಳಿಯಲು ಹಲವು ದಿನಗಳು ಬೇಕಾಗಿದ್ದು, ಮೆಡಿಕಲ್ ರಿಪೋರ್ಟ್ ಪ್ರಕಾರ ಆತನಿಗೆ ಬೇರಾವುದೇ ಕಾಯಿಲೆಯಿರಲಿಲ್ಲ. ಹಾಗಿದ್ದರೂ ಕರುಳು ಊದಿಕೊಂಡು ಸಾವನ್ನಪ್ಪಿದ್ದ ಬಗ್ಗೆ ವಿಸ್ತೃತ ತನಿಖೆ ನಡೆಸಿದಾಗ ಏರ್‌ ಬ್ಲೋದ ಅನಾಹುತ ಪತ್ತೆಯಾಗಿದೆ.

ಫ್ಯಾಕ್ಟರಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಕೂಡ ಆದಿತ್ಯದ ಮೇಲೆ ಏರ್ ಬ್ಲೋ ಮೂಲಕ ಗಾಳಿ ಹಾಯಿಸಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಏರ್ ಬ್ಲೋ ಬಳಸಿ ಗಾಳಿ ಹಾಯಿಸಿದ್ದ ನೌಕರ ಪ್ರಕರಣ ನಡೆದ ದಿನದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮೂಲ ವರದಿ: ಮಹಾರಾಷ್ಟ್ರ ಟೈಮ್ಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ