ಆ್ಯಪ್ನಗರ

ಹೊಲದಲ್ಲಿ ಮುತ್ತು ಬೆಳೆಯುವ ಎಂಜಿನಿಯರ್

ಹರಿಯಾಣದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಉದ್ಯೋಗ ಬಿಟ್ಟು ಹೊಲದಲ್ಲಿ ಮುತ್ತು ಬೆಳೆಯಲಾರಂಭಿಸಿದ್ದಾನೆ.

Navbharat Times 5 Jun 2018, 4:32 pm
ಗುರ್ಗಾಂವ್: ಹರಿಯಾಣದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಉದ್ಯೋಗ ಬಿಟ್ಟು ಹೊಲದಲ್ಲಿ ಮುತ್ತು ಬೆಳೆಯಲಾರಂಭಿಸಿದ್ದಾನೆ. ಇದರಿಂದ ಎಂಜಿನಿಯರ್ ಆಗಿ ಗಳಿಸುತ್ತಿದ್ದ ಮೊತ್ತಕ್ಕಿಂತಲೂ ದುಪ್ಪಟ್ಟು ಗಳಿಸುತ್ತಿದ್ದು, ಲಾಭದಾಯಕ ಕಾಯಕವನ್ನಾಗಿಸಿಕೊಂಡು ಇತರ ರೈತರಿಗೆ ಮಾದರಿಯಾಗಿದ್ದಾರೆ.
Vijaya Karnataka Web pearl youth


ವಿನೋದ್‌ಗೆ ಸ್ವಲ್ಪ ಜಮೀನು ಇದ್ದು, ಅದರಲ್ಲಿ ಮೀನು ಸಾಕಣೆ ಮಾಡಬೇಕು ಎನ್ನುವುದು ಆತನ ಉದ್ದೇಶವಾಗಿತ್ತು. ಆ ಬಗ್ಗೆ ಮೀನುಗಾರಿಕಾ ಇಲಾಖೆಗೆ ಹೋಗಿ ವಿಚಾರಿಸಿದಾಗ, ಆತನಲ್ಲಿರುವ ಜಮೀನಿನಲ್ಲಿ ಮೀನು ಸಾಕಣೆ ಮಾಡುವುದಕ್ಕಿಂತ ಮುತ್ತು ಬೆಳೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಅವರ ಸಲಹೆಯಂತೆ ವಿನೋದ್ ಎಂಜಿನಿಯರ್ ಕೆಲಸ ತೊರೆದು ಭುವನೇಶ್ವರಕ್ಕೆ ಹೋಗಿ ಮುತ್ತು ಬೆಳೆಯುವುದು ಹೇಗೆ ಎಂದು ಕಲಿತುಕೊಂಡರು.

ನಂತರ ವಾಪಸ್ ಬಂದು ಜಮೀನಿನಲ್ಲಿ ಮುತ್ತು ಕೃಷಿ ಕೈಗೊಂಡರು. ಅದರಿಂದ ಪ್ರಸ್ತುತ ವಿನೋದ್ ಲಕ್ಷಕ್ಕೂ ಹೆಚ್ಚು ಸಂಪಾದನೆ ಮಾಡುತ್ತಿದ್ದಾರೆ. 20 ಅಡಿ ಅಗಲ ಮತ್ತು 20 ಅಡಿ ಉದ್ದದ ಜಮೀನಿನಲ್ಲಿ ಆರಂಭಿಕ 40 ಸಾವಿರ ರೂ. ಹೂಡಿಕೆಯೊಂದಿಗೆ ಮುತ್ತು ಕೃಷಿ ನಡೆಸುತ್ತಿದ್ದು, ಕಳೆದ ವರ್ಷ 4 ಲಕ್ಷ ರೂ. ಸಂಪಾದಿಸಿದ್ದಾರೆ.

ಹರಿಯಾಣದಲ್ಲಿ ವಿನೋದ್ ಮುತ್ತು ಕೃಷಿ ನಡೆಸಿದ ಮೊದಲಿಗ ಎನ್ನಲಾಗಿದ್ದು, ಸುತ್ತಲಿನ ಹಲವು ರೈತರು ಕೂಡ ಇದರತ್ತ ಆಕರ್ಷಿತರಾಗಿದ್ದಾರೆ. ಈಗಾಗಲೇ 12 ಮಂದಿ ರೈತರು ವಿನೋದ್ ಬಳಿ ತರಬೇತಿ ಪಡೆದುಕೊಂಡಿದ್ದು, ಮುತ್ತು ಕೃಷಿ ಕೈಗೊಳ್ಳಲು ತಯಾರಾಗಿದ್ದಾರೆ.

ಮೂಲ ಹಿಂದಿ ವರದಿ: ನವಭಾರತ್ ಟೈಮ್ಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ