ಲೋಕಸಭೆ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆ ನಡೆದರೆ ಹೈಲೈಟ್ ಆಗುವುದಿಲ್ಲ ಎಂಬ ಕಾರಣಕ್ಕೆ ಅವಧಿ ಪೂರ್ಣಗೊಳ್ಳುವ ಮೊದಲೇ ವಿಧಾಸಭೆ ಚುನಾವಣೆ ಘೋಷಿಸಿದ ಹಾಲಿ ಸಿಎಂ ಚಂದ್ರಶೇಖರ ರಾವ್ ಅವರಿಗೆ ಚಂದ್ರಬಾಬು ನಾಯ್ಡು ಅವರ ಮಹಾಮೈತ್ರಿ ತಲೆ ನೋವಾಗಿದೆ. ಕಳೆದ ಬಾರಿ ಬಿಜೆಪಿ ಮತ್ತು ಟಿಡಿಪಿ ಜತೆಯಾಗಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿಹೊಗಳುತ್ತಿರುವ ಚಂದ್ರಶೇಖರ್ ರಾವ್ ಬಹುಮತ ಸಿಗದಿದ್ದರೆ ಅಧಿಕಾರ ಉಳಿಸಿಕೊಳ್ಳಲು ಚುನಾವಣೆ ನಂತರ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.
ತೆಲಂಗಾಣದಲ್ಲಿ ಕೆಸಿಆರ್ಗೆ ತಲೆನೋವಾದ ಚಂದ್ರಬಾಬು ನಾಯ್ಡು ಮಹಾಮೈತ್ರಿ!
ಮೋದಿ ಹೊಗಳುತ್ತಿರುವ ಕೆಎಸ್ಆರ್, ಚುನಾವಣೆಯಲ್ಲಿ ಬಹುಮತ ಸಿಗದಿದ್ದರೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಜತೆ ಮೈತ್ರಿಗೆ ಸ್ಕೆಚ್ ಹಾಕಿದಂತಿದೆ.
Vijaya Karnataka Web 14 Nov 2018, 2:55 pm