ಬಿಜೆಪಿಯಲ್ಲಿ ಬಿಎಸ್ವೈ ನಂತರ ಪ್ರಬಲ ನಾಯಕ ಎಂದು ಬಿಂಬಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸುತ್ತಿರುವ ಶ್ರೀರಾಮುಲು ತಮ್ಮ ಸಹೋದರಿ ಜೆ.ಶಾಂತ ಅವರನ್ನು ಗೆಲ್ಲಿಸಲೇಬೇಕಿದೆ. ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿ.ಎಸ್.ಉಗ್ರಪ್ಪ ಕಣಕ್ಕಿಳಿದಿರುವುದರಿಂದ ಭಾರಿ ಜಿದ್ದಾಜಿದ್ದಿಯ ಕಣವಾಗಿ ಬಳ್ಳಾರಿ ಗುರುತಿಸಿಕೊಂಡಿದೆ. ನೆಪ ಮಾತ್ರಕ್ಕೆ ಶಾಂತಾ, ಉಗ್ರಪ್ಪ ಸ್ಪರ್ಧಿಗಳಾದರೂ, ನೇರ ಸ್ಪರ್ಧೆಯಿರುವುದು ಶಾಸಕ ಶ್ರೀರಾಮುಲು ಮತ್ತು ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ನಡುವೆ.
ಬಳ್ಳಾರಿಯಲ್ಲಿ ಶಾಂತಾ v/s ಉಗ್ರಪ್ಪ ಸ್ಪರ್ಧೆ: ಆದರೆ ಇಲ್ಲಿರುವುದು ರಾಮುಲು Vs ಡಿಕೆಶಿ ಫೈಟ್
ಬಳ್ಳಾರಿ ಲೋಕಸಭೆ ಕ್ಷೇತ್ರ ಉಪಚುನಾವಣೆ
Vijaya Karnataka Web 27 Oct 2018, 2:04 pm