ಆ್ಯಪ್ನಗರ

ಬಿಎಸ್‌ವೈ ಟೀಮ್‌: ಯಾರಿಗೆ ಯಾವ ಖಾತೆ? ಇಲ್ಲಿದೆ ಸಂಪೂರ್ಣ ಪಟ್ಟಿ

ಹೆಚ್ಚಿನವರಿಗೆ ಖಾತೆ ಹಂಚಿಕೆಗಿಂತ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೋಲು ಕಂಡಿದ್ದ ಲಕ್ಷಣ್‌ ಸವದಿಗೆ ಡಿಸಿಎಂ ಹುದ್ದೆ ನೀಡಿದ್ದು ಒಳಗಿನ ಬೇಗುದಿಗೆ ಕಾರಣವಾಗಿದೆ.

Vijaya Karnataka Web 27 Aug 2019, 11:37 am
ಕೊನೆಗೂ ಸಿಎಂ ಯಡಿಯೂರಪ್ಪ ನೇತೃತ್ವದ ಸಂಪುಟ ಸದಸ್ಯರಿಗೆ ಖಾತೆ ಹಂಚಿಕೆಯಾಗಿದೆ. ನಿರೀಕ್ಷೆಯಂತೆ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಸಿ.ಟಿ ರವಿ, ಆರ್‌. ಅಶೋಕ್‌, ಶ್ರೀರಾಮುಲು ಸೇರಿದಂತೆ ಕೆಲವು ಬಿಜೆಪಿ ನಾಯಕರು ಖಾತೆ ಹಂಚಿಕೆ ಮತ್ತು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ನೇರವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಹೆಚ್ಚಿನವರಿಗೆ ಖಾತೆ ಹಂಚಿಕೆಗಿಂತ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೋಲು ಕಂಡಿದ್ದ ಲಕ್ಷಣ್‌ ಸವದಿಗೆ ಡಿಸಿಎಂ ಹುದ್ದೆ ನೀಡಿದ್ದು ಒಳಗಿನ ಬೇಗುದಿಗೆ ಕಾರಣವಾಗಿದೆ.
Vijaya Karnataka Web BSY


ಇತ್ತ ಸವದಿ ವಿರುದ್ಧ ಕಾಂಗ್ರೆಸ್‌ನಿಂದ ಗೆದ್ದು ಬೀಗಿದ್ದ ಮಹೇಶ್‌ ಕಮಟಳ್ಳಿ ಮೈತ್ರಿ ಸರಕಾರದ ಬಂಡಾಯ ಶಾಸಕರಾಗಿ ಗುರುತಿಕೊಂಡು ಸರಕಾರದ ಪತನಕ್ಕೆ ಕಾರಣವಾಗಿದ್ದರು. ಮಹೇಶ್‌ ಕಮಟಳ್ಳಿಗೆ ಭವಿಷ್ಯದಲ್ಲಿ ಬಿಜೆಪಿ ಸರಕಾರದಲ್ಲಿ ಮಂತ್ರಿಗಿರಿ ಕೊಡುತ್ತಾರೆ ಎಂಬ ಭರವಸೆಯೂ ಸಿಕ್ಕಿತ್ತು. ಆದರೆ ಸವದಿಗೆ ಡಿಸಿಎಂ ಸ್ಥಾನ ಮತ್ತು ಸಾರಿಗೆ ಖಾತೆ ಸಿಕ್ಕಿರುವುದರಿಂದ ಕಮಟಳ್ಳಿ ಸಹಜವಾಗೇ ಬೇಸರ ಉದ್ಭವಿಸಿದೆ.

ಇಲ್ಲಿದೆ ಬಿಎಸ್‌ವೈ ಸಂಪುಟದ ನೂತನ ಸಚಿವರ ಜವಾಬ್ದಾರಿಯ ಪಟ್ಟಿ

ಸಿಎಂ ಯಡಿಯೂರಪ್ಪ ಕಾವಲಿಗೆ 3ಡಿ ಬಲೆ ಹೆಣೆದ ಹೈಕಮಾಂಡ್‌ ಉದ್ದೇಶವೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ