ಆ್ಯಪ್ನಗರ

ಎಕ್ಸಿಟ್‌ ಪೋಲ್‌ ಹಣೆಬರಹ: 2004 ಮತ್ತು 2009ರಲ್ಲಿ ಮತಗಟ್ಟೆ ಸಮೀಕ್ಷೆ ತಪ್ಪಾಗಿತ್ತು!

2014ರಲ್ಲಿ ಎನ್‌ಡಿಎಗೆ ಭರ್ಜರಿ ಬಹುಮತ ಬರುತ್ತದೆ ಎಂದು ಎಲ್ಲ ಸಮೀಕ್ಷೆಗಳು ಸಂದೇಹಕ್ಕೆಡೆ ಇಲ್ಲದಂತೆ ಭವಿಷ್ಯ ನುಡಿದಿದ್ದವು. ಒಟ್ಟಾರೆ ಮತಗಟ್ಟೆ ಸಮೀಕ್ಷೆಗಳ ಹಣೆಬರಹ ಇಲ್ಲಿದೆ.

Vijaya Karnataka 20 May 2019, 2:47 pm
ಬೆಂಗಳೂರು: 2004 ಮತ್ತು 2009ರ ಸಾರ್ವತ್ರಿಕ ಚುನಾವಣೆಯನ್ನು ಹೊರತುಪಡಿಸಿದರೆ ಉಳಿದಂತೆ ಮತಗಟ್ಟೆ ಸಮೀಕ್ಷೆಗಳು ಯಾವ ಪಕ್ಷ /ಮೈತ್ರಿಕೂಟದ ಪರ ಜನತೆಯ ಒಲವಿದೆ ಎಂಬುದನ್ನು ಖಚಿತವಾಗಿ ಗುರುತಿಸಿವೆ. 2014ರಲ್ಲಿ ಎನ್‌ಡಿಎಗೆ ಭರ್ಜರಿ ಬಹುಮತ ಬರುತ್ತದೆ ಎಂದು ಎಲ್ಲ ಸಮೀಕ್ಷೆಗಳು ಸಂದೇಹಕ್ಕೆಡೆ ಇಲ್ಲದಂತೆ ಭವಿಷ್ಯ ನುಡಿದಿದ್ದವು. ಒಟ್ಟಾರೆ ಮತಗಟ್ಟೆ ಸಮೀಕ್ಷೆಗಳ ಹಣೆಬರಹ ಇಲ್ಲಿದೆ.
Vijaya Karnataka Web Exit polls 2019 Cartoon



ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರಕಾರ ಬರುತ್ತದೆ ಎಂದು ಹೆಚ್ಚಿನ ಮತಗಟ್ಟೆ ಸಮೀಕ್ಷೆಗಳು ಹೇಳುತ್ತಿವೆ. ಬಿಜೆಪಿ ನೇತೃತ್ವದ ಎನ್‌ಡಿಎ 300ರ ಗಡಿ ದಾಟಿ ದಾಪುಗಾಲು ಇಡುತ್ತದೆ ಎಂದಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಇಲ್ಲ, ಭಾರಿ ಫಲ ನೀಡದ ಎಸ್ಪಿ-ಬಿಎಸ್ಪಿ ಮಹಾಘಟಬಂಧನ್‌ ಎಂದೂ ಭವಿಷ್ಯ ನಡಿದಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದೊಡ್ಡ ಲಾಭದ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಮಮತಾ ಬ್ಯಾನರ್ಜಿ ಕೋಟೆಯಲ್ಲಿ ಬಿರುಕು ಸಾಧ್ಯತೆ ಎಂದಿವೆ.

ಇದೀಗ ಮುಂದಿರುವ ಪ್ರಶ್ನೆ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯುತ್ತದೆಯೇ? ಒಡಿಶಾದಲ್ಲಿ ಬಿಜೆಡಿಗೆ ಹಿನ್ನಡೆ ಆಗುತ್ತದೆಯೇ? ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಕಮಾಲ್‌ ಮಾಡಲಿದೆಯೇ? ತೆಲಂಗಾಣದಲ್ಲಿ ಕೆಸಿಆರ್‌ ಭಾರಿ ಪಾರಮ್ಯ ಮೆರೆಯಲಿದ್ದಾರೆಯೇ? ಇದಕ್ಕೆಲ್ಲ ಸ್ಪಷ್ಟ ಉತ್ತರ ಮೇ 23ಕ್ಕೆ ಸಿಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ