ಆ್ಯಪ್ನಗರ

ಮಾನವ ಹಕ್ಕು ಹೋರಾಟಗಾರರಿಗೆ ಭಾರತ ಅಸುರಕ್ಷಿತ?

ಇತ್ತೀಚೆಗೆ ಎಡಚಿಂತನೆ ಹೊಂದಿದ್ದ ಪತ್ರಕರ್ತೆ ಗೌರಿ ಲಂಕೇಶ್‌ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.

TOI.in 21 Dec 2017, 5:46 pm
ಪರಿಸರ ಸಂರಕ್ಷಣೆಗಾಗಿ, ಮಾನವ ಹಕ್ಕುಗಳ ಪರವಾಗಿ ಹೋರಾಟ ನಡೆಸುತ್ತಿರುವವರ ಹತ್ಯೆ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. 1998ರಿಂದ ಇಲ್ಲಿಯವರೆಗೆ 3,500 ಮಾನವ ಹಕ್ಕುಗಳ ಹೋರಾಟಗಾರರ ಹತ್ಯೆ ನಡೆದಿದೆ ಎಂದು ಅಮ್ನೇಷ್ಟಿ ಇಂಟರ್‌ನ್ಯಾಷನಲ್‌ ವರದಿ ಮಾಡಿದೆ. ಜೀವ ಪರ ಕಳಕಳಿಯುಳ್ಳ ಹೋರಾಟಗಾರರ ಹತ್ಯೆಗಳಾಗುತ್ತಿರುವುದು ಕಳವಳಕಾರಿ ವಿಚಾರ. ಭಾರತದಲ್ಲಿ ಕಳೆದ ವರ್ಷ 16 ಪರಿಸರ ಸಂರಕ್ಷಣಾ ಹೋರಾಟಗಾರರ ಹತ್ಯೆ ನಡೆಸಲಾಗಿದೆ. ಇತ್ತೀಚೆಗೆ ಕೊಲೆಯಾದ ಎಡಚಿಂತನೆ ಹೊಂದಿದ್ದ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆ ಪ್ರಕರಣವನ್ನು ವಿಚಾರವಾದದ ಸಂಘರ್ಷ ಎಂದೇ ಬಿಂಬಿಸಲಾಗುತ್ತಿದೆ. ಆದರೆ ಇದುವರೆಗೆ ಹತ್ಯೆ ನಡೆಸಿದವರ ಸುಳಿವು ಸಿಕ್ಕಿಲ್ಲ. ಒಟ್ಟಾರೆಯಾಗಿ ಗಮನಿಸಿದಾಗ ವಿಶ್ವದೆಲ್ಲೆಡೆ ಜೀವಪರ ಹೋರಾಟಗಾರರ ಹತ್ಯೆಗಳಾಗುತ್ತಿರುವುದು ಮುಂದುವರಿದೆ. ಆದರೆ ಭಾರತದಂತಹ ಶಾಂತಿಗೆ ಹೆಸರಾದ ರಾಷ್ಟ್ರದಲ್ಲಿ ಹೋರಾಟಗಾರರಿಗೆ ಅಸುರಕ್ಷಿತ ಎಂಬ ಅಂಶ ಕಳವಳಕಾರಿ ಎಂದೆನಿಸುತ್ತದೆ.
Vijaya Karnataka Web india unsafe for human rights defenders
ಮಾನವ ಹಕ್ಕು ಹೋರಾಟಗಾರರಿಗೆ ಭಾರತ ಅಸುರಕ್ಷಿತ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ