ಹೊಸದಿಲ್ಲಿ: ಭಾರತದ ಮೊಟ್ಟ ಮೊದಲ ಮಾನವ ಸಹಿತ ಗಗನಯಾನ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಹಸಿರು ನಿಶಾನೆ ತೋರಿದೆ. ಏಳು ದಿನಗಳ ಕಾಲ ಮೂವರು ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಗೆ ಸುಮಾರು 10,000 ಕೋಟಿ ರೂ. ಖರ್ಚು ಬರಲಿದೆ. ಈ ಯೋಜನೆಯನ್ನು ಕಳೆದ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ಘೋಷಿಸಿದ್ದರು. 2022ಕ್ಕೆ ಈ ಮಹತ್ವಾಕಾಂಕ್ಷೆಯ 'ಗಗನಯಾತ್ರೆ' ನಡೆಯಲಿದ್ದು, ಇದಕ್ಕೆ ನೆರವು ಪಡೆಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಈಗಾಗಲೇ ರಷ್ಯಾ ಮತ್ತು ಫ್ರಾನ್ಸ್ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ.
ಬಾಹ್ಯಾಕಾಶಕ್ಕೆ ಮಾನವ ಯಾನ: ಭಾರತದೊಂದಿಗೆ ಜಿದ್ದಿಗೆ ಬಿದ್ದ ಪಾಕಿಸ್ತಾನ!
ಗಗನಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಮೂವರು ಯಾನಿಗಳು 7 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇದ್ದುಕೊಂಡು ಹಲವು ಸಂಶೋಧನೆ ಮತ್ತು ಪ್ರಯೋಗಗಳನ್ನು ನಡೆಸಲಿದ್ದಾರೆ. ಇದಕ್ಕಾಗಿ ಗಗನಯಾನಿಗಳಿಗೆ ಮೂರು ವರ್ಷ ವಿಶೇಷ ತರಬೇತಿ ನೀಡಲಾಗುತ್ತದೆ. ಭಾರತದ ಗಗನಯಾನ ಯೋಜನೆಯಿಂದ ರಾಷ್ಟ್ರದಲ್ಲಿ 15 ಸಾವಿರ ಉದ್ಯೋಗಗಳು ಸೃಷ್ಟಿಸಲಿಗೆ ಎಂದು ಇಸ್ರೊ ಅಧ್ಯಕ್ಷ ಕೆ ಶಿವನ್ ತಿಳಿಸಿದ್ದಾರೆ.
ಬಾಹ್ಯಾಕಾಶದಲ್ಲೇ ಗಗನಯಾತ್ರಿಗಳು ಸವಿಯಲಿದ್ದಾರೆ ಮೈಸೂರಿನ ಇಡ್ಲಿ-ವಡೆ!
ಬಾಹ್ಯಾಕಾಶಕ್ಕೆ ಮಾನವ ಯಾನ: ಭಾರತದೊಂದಿಗೆ ಜಿದ್ದಿಗೆ ಬಿದ್ದ ಪಾಕಿಸ್ತಾನ!
ಗಗನಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ಮೂವರು ಯಾನಿಗಳು 7 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇದ್ದುಕೊಂಡು ಹಲವು ಸಂಶೋಧನೆ ಮತ್ತು ಪ್ರಯೋಗಗಳನ್ನು ನಡೆಸಲಿದ್ದಾರೆ. ಇದಕ್ಕಾಗಿ ಗಗನಯಾನಿಗಳಿಗೆ ಮೂರು ವರ್ಷ ವಿಶೇಷ ತರಬೇತಿ ನೀಡಲಾಗುತ್ತದೆ. ಭಾರತದ ಗಗನಯಾನ ಯೋಜನೆಯಿಂದ ರಾಷ್ಟ್ರದಲ್ಲಿ 15 ಸಾವಿರ ಉದ್ಯೋಗಗಳು ಸೃಷ್ಟಿಸಲಿಗೆ ಎಂದು ಇಸ್ರೊ ಅಧ್ಯಕ್ಷ ಕೆ ಶಿವನ್ ತಿಳಿಸಿದ್ದಾರೆ.
ಬಾಹ್ಯಾಕಾಶದಲ್ಲೇ ಗಗನಯಾತ್ರಿಗಳು ಸವಿಯಲಿದ್ದಾರೆ ಮೈಸೂರಿನ ಇಡ್ಲಿ-ವಡೆ!