ಆ್ಯಪ್ನಗರ

ಕರುನಾಡ ತುಂಬೆಲ್ಲ ಅರಳಿತು ಕಮಲ

ಸೋಲರಿಯದ ಸರದಾರ ಮಲ್ಲಿಕಾರ್ಜುನ ಖರ್ಗೆ, ರಾಜಕೀಯ ಚತುರ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಸೇರಿದಂತೆ ಅನೇಕ ಘಟಾನುಘಟಿ ಮೈತ್ರಿ ನಾಯಕರು ಸೋತಿರುವುದರಿಂದ ಕಾಂಗ್ರೆಸ್‌-ಜೆಡಿಎಸ್‌ ಸಂಪೂರ್ಣ ಹತಾಶೆಗೆ ಒಳಗಾಗಿದೆ.

Vijaya Karnataka Web 24 May 2019, 8:04 am
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಬ್ಬರಕ್ಕೆ ತತ್ತರಿಸಿದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಛಿದ್ರಗೊಂಡಿದೆ. ತಲಾ ಒಂದೊಂದು ಸ್ಥಾನ ಪಡೆಯುವಲ್ಲಷ್ಟೇ ಶಕ್ತವಾಗಿದೆ. ಒಂದೆಡೆ ಕೇಸರಿ ಹೊಳೆಯಲ್ಲಿ ದೋಸ್ತಿ ಕೊಚ್ಚಿ ಹೋದರೆ, ಭದ್ರಕೋಟೆ ಮಂಡ್ಯವನ್ನು ಜೆಡಿಎಸ್‌ ಕಳೆದುಕೊಂಡಿದೆ. ಜಿದ್ದಾಜಿದ್ದಿನ ಫೈಟ್‌ನಲ್ಲಿ ಸಿಎಂ ಪುತ್ರ ನಿಖಿಲ್‌ ಕುಮಾರ್‌ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ವಿರುದ್ಧ ಸೋಲು ಅನುಭವಿಸಿದ್ದಾರೆ.
Vijaya Karnataka Web Karnataka result 1


ಹಾಸನ, ಬೆಂಗಳೂರು ಗ್ರಾಮಾಂತರ ಹೊರತುಪಡಿಸಿ ಇಡೀ ರಾಜ್ಯ ಕೆಸರಿಮಯಗೊಂಡಂತೆ ಆಗಿದೆ. ಬಿಎಸ್‌ ಯಡಿಯೂರಪ್ಪ 22 ಸ್ಥಾನದ ನಿರೀಕ್ಷೆ ಇಟ್ಟುಕೊಂಡಿದ್ದರಾದರೂ ಅದನ್ನು ಮೀರಿಸಿದ ಅಚ್ಚರಿ ಫಲಿತಾಂಶ ರಾಜ್ಯದಲ್ಲಿ ವ್ಯಕ್ತವಾಗಿದೆ. ಸೋಲರಿಯದ ಸರದಾರ ಮಲ್ಲಿಕಾರ್ಜುನ ಖರ್ಗೆ, ರಾಜಕೀಯ ಚತುರ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಸೇರಿದಂತೆ ಅನೇಕ ಘಟಾನುಘಟಿ ಮೈತ್ರಿ ನಾಯಕರು ಸೋತಿರುವುದರಿಂದ ಕಾಂಗ್ರೆಸ್‌-ಜೆಡಿಎಸ್‌ ಸಂಪೂರ್ಣ ಹತಾಶೆಗೆ ಒಳಗಾಗಿದೆ.

ಹಾಸನದಲ್ಲಿ ಓರ್ವ ಮೊಮ್ಮಗ ಪ್ರಜ್ವಲ್‌ ರೇವಣ್ಣ ಗೆದ್ದ ಖುಷಿಯಿದ್ದರೆ, ಮಂಡ್ಯದಲ್ಲಿ ಮತ್ತೊಬ್ಬ ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಸೋತ ನೋವು ಸ್ವತಃ ಸೋಲಿಗಿಂತ ಹೆಚ್ಚು ದೇವೇಗೌಡರನ್ನು ಕಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ