ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಬ್ಬರಕ್ಕೆ ತತ್ತರಿಸಿದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಛಿದ್ರಗೊಂಡಿದೆ. ತಲಾ ಒಂದೊಂದು ಸ್ಥಾನ ಪಡೆಯುವಲ್ಲಷ್ಟೇ ಶಕ್ತವಾಗಿದೆ. ಒಂದೆಡೆ ಕೇಸರಿ ಹೊಳೆಯಲ್ಲಿ ದೋಸ್ತಿ ಕೊಚ್ಚಿ ಹೋದರೆ, ಭದ್ರಕೋಟೆ ಮಂಡ್ಯವನ್ನು ಜೆಡಿಎಸ್ ಕಳೆದುಕೊಂಡಿದೆ. ಜಿದ್ದಾಜಿದ್ದಿನ ಫೈಟ್ನಲ್ಲಿ ಸಿಎಂ ಪುತ್ರ ನಿಖಿಲ್ ಕುಮಾರ್ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸೋಲು ಅನುಭವಿಸಿದ್ದಾರೆ.
ಹಾಸನ, ಬೆಂಗಳೂರು ಗ್ರಾಮಾಂತರ ಹೊರತುಪಡಿಸಿ ಇಡೀ ರಾಜ್ಯ ಕೆಸರಿಮಯಗೊಂಡಂತೆ ಆಗಿದೆ. ಬಿಎಸ್ ಯಡಿಯೂರಪ್ಪ 22 ಸ್ಥಾನದ ನಿರೀಕ್ಷೆ ಇಟ್ಟುಕೊಂಡಿದ್ದರಾದರೂ ಅದನ್ನು ಮೀರಿಸಿದ ಅಚ್ಚರಿ ಫಲಿತಾಂಶ ರಾಜ್ಯದಲ್ಲಿ ವ್ಯಕ್ತವಾಗಿದೆ. ಸೋಲರಿಯದ ಸರದಾರ ಮಲ್ಲಿಕಾರ್ಜುನ ಖರ್ಗೆ, ರಾಜಕೀಯ ಚತುರ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಸೇರಿದಂತೆ ಅನೇಕ ಘಟಾನುಘಟಿ ಮೈತ್ರಿ ನಾಯಕರು ಸೋತಿರುವುದರಿಂದ ಕಾಂಗ್ರೆಸ್-ಜೆಡಿಎಸ್ ಸಂಪೂರ್ಣ ಹತಾಶೆಗೆ ಒಳಗಾಗಿದೆ.
ಹಾಸನದಲ್ಲಿ ಓರ್ವ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆದ್ದ ಖುಷಿಯಿದ್ದರೆ, ಮಂಡ್ಯದಲ್ಲಿ ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸೋತ ನೋವು ಸ್ವತಃ ಸೋಲಿಗಿಂತ ಹೆಚ್ಚು ದೇವೇಗೌಡರನ್ನು ಕಾಡುತ್ತಿದೆ.
ಹಾಸನ, ಬೆಂಗಳೂರು ಗ್ರಾಮಾಂತರ ಹೊರತುಪಡಿಸಿ ಇಡೀ ರಾಜ್ಯ ಕೆಸರಿಮಯಗೊಂಡಂತೆ ಆಗಿದೆ. ಬಿಎಸ್ ಯಡಿಯೂರಪ್ಪ 22 ಸ್ಥಾನದ ನಿರೀಕ್ಷೆ ಇಟ್ಟುಕೊಂಡಿದ್ದರಾದರೂ ಅದನ್ನು ಮೀರಿಸಿದ ಅಚ್ಚರಿ ಫಲಿತಾಂಶ ರಾಜ್ಯದಲ್ಲಿ ವ್ಯಕ್ತವಾಗಿದೆ. ಸೋಲರಿಯದ ಸರದಾರ ಮಲ್ಲಿಕಾರ್ಜುನ ಖರ್ಗೆ, ರಾಜಕೀಯ ಚತುರ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಸೇರಿದಂತೆ ಅನೇಕ ಘಟಾನುಘಟಿ ಮೈತ್ರಿ ನಾಯಕರು ಸೋತಿರುವುದರಿಂದ ಕಾಂಗ್ರೆಸ್-ಜೆಡಿಎಸ್ ಸಂಪೂರ್ಣ ಹತಾಶೆಗೆ ಒಳಗಾಗಿದೆ.
ಹಾಸನದಲ್ಲಿ ಓರ್ವ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆದ್ದ ಖುಷಿಯಿದ್ದರೆ, ಮಂಡ್ಯದಲ್ಲಿ ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸೋತ ನೋವು ಸ್ವತಃ ಸೋಲಿಗಿಂತ ಹೆಚ್ಚು ದೇವೇಗೌಡರನ್ನು ಕಾಡುತ್ತಿದೆ.