ಆ್ಯಪ್ನಗರ

ಅಷ್ಟಕ್ಕೂ ರಾಜಸ್ಥಾನ, ಮಧ್ಯಪ್ರದೇಶ & ಛತ್ತೀಸ್‌ಗಢದಲ್ಲಿ ಬಿಜೆಪಿ ಮಾಡಿದ ಅಭಿವೃದ್ಧಿಗಳೇನು?

ರಾಜಸ್ಥಾನ , ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರು ಮತ್ತು ಗ್ರಾಮೀಣ ಕಾರ್ಮಿಕರ ಹಿತಕ್ಕಾಗಿ ಅಸಲಿಗೆ ಏನು ಮಾಡಿದೆ? ಯಾವ್ಯಾವ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ? ಗ್ರಾಮೀಣ ಭಾಗದ ಜನರಿಗೆ ಅವುಗಳ ಅನುಕೂಲ ಹೇಗೆ ಆಗಿದೆ? ಇಲ್ಲಿದೆ ಡೀಟೈಲ್ಸ್‌.

Vijaya Karnataka Web 14 Dec 2018, 12:49 pm
ಕೇಂದ್ರ ಸರಕಾರ ರೈತರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ಮತ್ತು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂಬ ಮಾತಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆ, ಪ್ರಧಾನಮಂತ್ರಿ ಗ್ರಾಮೀಣ ಸಡಕ್‌ ಯೋಜನೆ, ಗ್ರಾಮೀಣ ಜನರಿಗೆ ಉದ್ಯೋಗ, ನರೇಗಾ ಮಂಜೂರು, ಗ್ರಾಮೀಣ ಜೀವನೋಪಾಯ ಯೋಜನೆ, ಕೌಶಲ್ಯಾಭಿವೃದ್ಧಿ ಹೀಗೆ ಸಾಕಷ್ಟು ಯೋಜನೆಗಳ ಲಾಭ ಆಯಾ ರಾಜ್ಯದ ಜನರಿಗೆ ಆಗಿದೆ. ಆದರೆ ಬೆಳೆಗಳ ದರದಲ್ಲಿ ಅಸ್ಥಿರತೆಯ ಕುತ್ತು ಬಿಜೆಪಿ ಸೋಲಿಗೆ ಕಾರಣ ಎನ್ನುತ್ತಾರೆ ತಜ್ಞರು.
Vijaya Karnataka Web major rural and agricultural developments rajasthan madhya pradesh and chhattisgarh
ಅಷ್ಟಕ್ಕೂ ರಾಜಸ್ಥಾನ, ಮಧ್ಯಪ್ರದೇಶ & ಛತ್ತೀಸ್‌ಗಢದಲ್ಲಿ ಬಿಜೆಪಿ ಮಾಡಿದ ಅಭಿವೃದ್ಧಿಗಳೇನು?

ರೈತರೇಕೆ ಸರಕಾರಗಳ ಮೇಲೆ ಆಕ್ರೋಶಗೊಂಡಿದ್ದಾರೆ? ಇಲ್ಲಿವೆ 10 ಕಾರಣಗಳು!


ರಾಜಸ್ಥಾನ, ಮಧ್ಯಪ್ರದೇಶ & ಛತ್ತೀಸ್‌ಗಢದ ಕೃಷಿ ಉತ್ಪಾದನೆ, ಜಿಡಿಪಿ ಪಾಲು ಹೇಗಿದೆ?

ದೇಶದ ಜಿಡಿಪಿಯಲ್ಲಿ ಕೃಷಿರಂಗದ ಪಾಲು ಕಡಿಮೆಯಾಗಿದೆ. 1990ರಲ್ಲಿ 29% ಇದ್ದುದು 2016ರಲ್ಲಿ 17%ಕ್ಕಿಳಿದಿದೆ. ಆದರೆ ಈ ವಲಯ ಈಗಲೂ ದೊಡ್ಡ ಪ್ರಮಾಣದ ಉದ್ಯೋಗದ ಮೂಲ. ಕೃಷಿ ಚಟುವಟಿಕೆ ನಡೆಯುತ್ತಿರುವ ಒಟ್ಟಾರೆ ಭೂಮಿಯಲ್ಲಿ 85%ದಷ್ಟು ಭಾಗದಲ್ಲಿ 2 ಹೆಕ್ಟೇರ್‌ಗಳಿಗಿಂತ ಕಡಿಮೆ ಜಮೀನುಳ್ಳವರು ಇದ್ದಾರೆ. ಇವರೇ ಉತ್ಪಾದನೆಯ 45%ನ್ನು ನಿರ್ಧರಿಸುವವರು. 4 ಹೆಕ್ಟೇರ್‌ಗಿಂತ ಹೆಚ್ಚು ಜಮೀನುಳ್ಳವರು 5% ಮಾತ್ರ. ಏಷ್ಯಾದ ಇತರ ದೇಶಗಳಾದ ಚೀನಾ, ವಿಯೆಟ್ನಾಂ, ಥಾಯ್ಲೆಂಡ್‌ಗಳಲ್ಲೂ ಇತರ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಉತ್ಪಾದಕತೆ ಪ್ರಮಾಣ ಕಡಿಮೆ. ಗೋಧಿ ಮತ್ತು ಅಕ್ಕಿಯ ಪ್ರಮಾಣ ಜಾಗತಿಕ ಉತ್ಪಾದನೆಯ ಸರಾಸರಿಗಿಂತ 3 ಪಟ್ಟು ಕಡಿಮೆ; ಮಾವು, ಬಾಳೆಹಣ್ಣು, ನೀರುಳ್ಳಿ ಮತ್ತು ಆಲೂಗಡ್ಡೆಗಳ ಉತ್ಪಾದನೆ ಪ್ರಮಾಣ ಇತರ ಅತ್ಯಧಿಕ ಉತ್ಪಾದನೆಗಳಿಗೆ ಹೋಲಿಸಿದರೆ ಆರೇಳು ಪಟ್ಟು ಕಡಿಮೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ