ಕಳೆದ ವಾರ ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಎಂಬ ಎನ್ಜಿಒ ಬಿಡುಗಡೆ ಮಾಡಿದ ವರದಿ ಬೆಚ್ಚಿ ಬೀಳಿಸುವಂತಿದೆ. ಭಾರತದಲ್ಲಿ ಭ್ರಷ್ಟಾಚಾರದ ಸಮಸ್ಯೆಯೇ ಪತ್ರಕರ್ತರ ಭದ್ರತೆಗೆ ಮುಳುವಾಗಿದೆ ಎಂದು ವಿವರಿಸಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಂತರ ಪತ್ರಕರ್ತರ ಭದ್ರತೆ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆದಿತ್ತು. ವಿಶ್ವಾದಾದ್ಯಂತ ಭ್ರಷ್ಟಾಚಾರ, ಅನ್ಯಾಯವನ್ನು ಹೊರಗೆಳಲು ಯತ್ನಿಸುವ ಪತ್ರಕರ್ತರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ.
ಭಾರತದ ಪತ್ರಕರ್ತರಿಗಿಲ್ಲ ಭದ್ರತೆ!
ಕಳೆದ 26 ವರ್ಷಗಳಲ್ಲಿ ಹತ್ಯೆಗೀಡಾದ ಭಾರತದ ಪತ್ರಕರ್ತರ ಸಂಖ್ಯೆ ಎಷ್ಟು ಗೊತ್ತೆ?
Vijaya Karnataka Web 7 Mar 2018, 2:48 pm