2016ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ, ಕಪ್ಪುಹಣ ನಿಯಂತ್ರಣ, ಭಯೋತ್ಪಾದನೆಗೆ ಹಣಕಾಸ ಪೂರೈಕೆಗೆ ಪ್ರಹಾರ ಇತ್ಯಾದಿ ಕಾರಣಗಳ ಹೆಸರಲ್ಲಿ 500 ರೂ. ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಐತಿಹಾಸಿಕ ಕ್ರಮ ಕೈಗೊಂಡರು. ಆ ನಂತರದ ದಿನಗಳಲ್ಲಿ ಕಂಡಿದ್ದು ಎಟಿಎಂ ಮುಂದೆ ಸಾಲುಗಟ್ಟಿದ ಜನ, ನಗದು ಹಣ ಸಿಗದೆ ನಗಲಾರದ ಸ್ಥಿತಿಗೆ ತಲುಪಿದ ಜನ, ಚಿಲ್ಲರೆ ಸಿಗದೆ ಒದ್ದಾಡುವ ಪರಿಸ್ಥಿತಿ ರಾಷ್ಟ್ರಾದ್ಯಂತ ಕಾಣಿಸಿಕೊಂಡಿತ್ತು. ಬ್ಯಾಂಕಿಂಗ್ ವ್ಯವಸ್ಥೆಗೆ ತರಲು ಇದರ ಅಗತ್ಯ ಇತ್ತು ಎಂದು ಎನ್ಡಿಎ ಸರಕಾರ ಸಮರ್ಥಿಸುತ್ತಲೇ ಬಂದಿದೆ. ಒಂದೆಡೆ ಪ್ರತಿಪಕ್ಷಗಳು ನೋಟು ಅಮಾನ್ಯತೆ ಅತಿ ದೊಡ್ಡ ಐತಿಹಾಸಿಕ ಪ್ರಮಾದ. ಲಕ್ಷಗಟ್ಟಲೆ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವಾದಿಸುತ್ತಿವೆ. ಮತ್ತೊಂದೆಡೆ 500, 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದು ಓಕೆ, ಅದರ ಬೆನ್ನಲ್ಲೇ 2,000 ರೂ. ಮುಖಬೆಲೆಯ ನೋಟನ್ನು ಬಿಡುಗಡೆಗೊಳಿಸಿದ್ದು ಯಾಕೆ? ಎಂಬ ಮಹತ್ವದ ಪ್ರಶ್ನೆಯೂ ಮುನ್ನೆಲೆ ಬಂದಿದೆ. ಈ ನಿಟ್ಟಿನಲ್ಲಿ ಅಸಲಿಗೆ ನೋಟು ನಿಷೇಧ ಕ್ರಮ ಯಾರಿಗೆ ಲಾಭವಾಗಿದೆ? ಒಂದಷ್ಟು ಕಿರುಅಂಶಗಳನ್ನು ನೋಡೋಣ ಬನ್ನಿ.
ನೋಟು ನಿಷೇಧ ಲಾಭ ಯಾರಿಗೆ? ಮೋದಿ ಅಸ್ತ್ರಗಳು, ಪ್ರತಿಪಕ್ಷಗಳ ಟೀಕಾಸ್ತ್ರಗಳು!
ಮತ್ತೊಂದೆಡೆ 500, 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದು ಓಕೆ, ಅದರ ಬೆನ್ನಲ್ಲೇ 2,000 ರೂ. ಮುಖಬೆಲೆಯ ನೋಟನ್ನು ಬಿಡುಗಡೆಗೊಳಿಸಿದ್ದು ಯಾಕೆ? ಎಂಬ ಮಹತ್ವದ ಪ್ರಶ್ನೆಯೂ ಮುನ್ನೆಲೆ ಬಂದಿದೆ.
Vijaya Karnataka Web 2 Mar 2019, 11:03 am