ಆ್ಯಪ್ನಗರ

ಮತ್ತೆ ರಾಮಾಯಣ ಎಕ್ಸ್‌ಪ್ರೆಸ್‌ ಚಾಲು: ಶ್ರೀರಾಮ ಓಡಾಡಿದ ಪವಿತ್ರ ಸ್ಥಳಗಳನ್ನು ಸುತ್ತಿ

ಶ್ರೀರಾಮ ಸಂಚರಿಸಿದ್ದ ಎನ್ನಲಾದ ಎಲ್ಲಾ ಸ್ಥಳಗಳಿಗೂ ಈ ವಿಶೇಷ ರೈಲು ಸಂಚರಿಸಲಿದೆ. 800 ಮಂದಿ ಪ್ರಯಾಣಿಸಲು ಅವಕಾಶವಿರುವ ರಾಮಾಯಣ ಎಕ್ಸ್‌ಪ್ರೆಸ್‌ ರೈಲಿಗೆ ನವೆಂಬರ್‌ 18ರಂದು ಚಾಲನೆ ದೊರೆಯಲಿದೆ.

Vijaya Karnataka Web 30 Aug 2019, 3:07 pm
ಹೊಸದಿಲ್ಲಿ: ತ್ರೇತಾಯುಗದ ಶ್ರೀ ರಾಮಚಂದ್ರ ಓಡಾಡಿದ ಪವಿತ್ರ ಸ್ಥಳಗಳಲ್ಲಿ ನೀವೂ ಹೆಜ್ಜೆ ಹಾಕಬೇಕೆ? ಹಾಗಿದ್ದರೆ ರಾಮಾಯಣ ಎಕ್ಸ್‌ಪ್ರೆಸ್‌ ರೈಲು ಹತ್ತಿ. ಶ್ರೀರಾಮ ಸಂಚರಿಸಿದ್ದ ಎನ್ನಲಾದ ಎಲ್ಲಾ ಸ್ಥಳಗಳಿಗೂ ಈ ವಿಶೇಷ ರೈಲು ಸಂಚರಿಸಲಿದೆ. 800 ಮಂದಿ ಪ್ರಯಾಣಿಸಲು ಅವಕಾಶವಿರುವ ಶ್ರೀ ರಾಮಾಯಣ ಎಕ್ಸ್‌ಪ್ರೆಸ್‌ ರೈಲಿಗೆ ನವೆಂಬರ್‌ 18ರಂದು ಚಾಲನೆ ದೊರೆಯಲಿದೆ.
Vijaya Karnataka Web ramayan express


ದಿಲ್ಲಿಯಿಂದ ಆರಂಭಗೊಳ್ಳುವ ಈ ಯಾತ್ರೆ ಕರ್ನಾಟಕದ ಹಂಪಿಯನ್ನು ಪ್ರವೇಶಿಸಲಿದೆ. ರಾಮಜನ್ಮ ಭೂಮಿ ಅಯೋಧ್ಯೆ, ಹನುಮಾನ್‌ ಗಾರ್ಹಿ, ರಾಮಕೂಟ ಮತ್ತು ಕನಕ್‌ ಭವನ ದೇಗುಲಗಳಿಗೆ ಭೇಟಿ ನೀಡಲಿದೆ. ಅಲ್ಲಿಂದ ನಂದಿ ಗ್ರಾಮ, ಸೀತಾಮರ್ಹಿ, ಜನಕಪುರಿ, ವಾರಾಣಸಿ, ಪ್ರಯಾಗ, ಶೃಂಗವರಪುರ, ಚಿತ್ರಕೂಟ, ನಾಸಿಕ್‌, ಹಂಪಿ ಮತ್ತು ರಾಮೇಶ್ವರಗಳ ದರ್ಶನ ಸಿಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ