ಆ್ಯಪ್ನಗರ

ಇಸ್ರೋ ಬಾಹುಬಲಿ ಬಗ್ಗೆ ನಿಮಗೆಷ್ಟು ಗೊತ್ತು

ಇಸ್ರೋದ ಬಾಹುಬಲಿ ಎಂದೇ ಪ್ರಸಿದ್ಧವಾಗಿರುವ ಜಿಎಸ್‌ಎಲ್‌ವಿ ಎಂಕೆ3 ಉಡ್ಡಯನ ವಾಹನದ ಮೂಲಕ ಚಂದ್ರಯಾನ -2 ಉಪಗ್ರಹವನ್ನು ಯಶಸ್ವಿಯಾಗಿ ನಿಗದಿತ ಕಕ್ಷೆಗೆ ಸೇರಿಸಿದೆ.

Vijaya Karnataka Web 22 Jul 2019, 11:29 pm
ಜುಲೈ 15ರಂದು ಉಡ್ಡಯನದ ವೇಳೆ ಕಂಡು ಬಂದಿದ್ದ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದ್ದು ಇಂದು(ಮಂಗಳವಾರ) ಮಧ್ಯಾಹ್ನ ಸರಿಯಾಗಿ 2.43ಕ್ಕೆ ವ್ಯೋಮನೌಕೆಯನ್ನು ಹೊತ್ತ 'ಬಾಹುಬಲಿ' ರಾಕೆಟ್‌ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಬಾನಂಗಳಕ್ಕೆ ಜಿಗಿಯಿತು.
Vijaya Karnataka Web moon missions KANNADA


Chandrayaan 2 Launch: ಇಸ್ರೋಗೆ ನಿಮ್ಮ ಅಭಿನಂದನೆ ಸಲ್ಲಿಸಿ

44 ಮೀಟರ್‌ ಎತ್ತರದ ಜಿಎಸ್‌ಎಲ್‌ವಿ ಮಾರ್ಕ್‌-3 ರಾಕೆಟ್‌, ದೈತ್ಯ ಗಾತ್ರದಿಂದಾಗಿ ಬಾಹುಬಲಿ ಎಂದೇ ಹೆಸರಾಗಿದೆ. ಒಟ್ಟು 13 ಪೆಲೋಡ್‌ಗಳನ್ನು ರಾಕೆಟ್‍‌ ಹೊತ್ತೊಯ್ದಿದೆ. ಒಟ್ಟು 48 ದಿನಗಳ ನಂತರ ಬಾಹುಬಲಿ ಚಂದ್ರನ ಮೇಲೆ ಲ್ಯಾಂಡ್‌ ಆಗಲಿದೆ. ರೋವರ್‌, ಲ್ಯಾಂಡರ್‌ ಸೇರಿದಂತೆ 3,850 ಕೆಜಿ ತೂಕದ ರಾಕೆಟ್‌ ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪುವ ಮೂಲಕ ವಿಶ್ವದಲ್ಲೇ ಗುರುತರ ಸಾಧನೆಯನ್ನು ಇಸ್ರೋ ಮಾಡಲಿದೆ.

ಚಂದ್ರಯಾನ 2: ಕೋಟಿ ಕನಸುಗಳೊಂದಿಗೆ ನಭಕ್ಕೆ ಜಿಗಿದ ಬಾಹುಬಲಿ

ಇದುವರೆಗೆ ಚಂದ್ರನ ದಕ್ಷಿಣ ಧ್ರುವವನ್ನು ಯಾರು ಪ್ರವೇಶಿಸಿಲ್ಲ.ಭಾರತೀಯ ಬಾಹ್ಯಾಕಾಶ ಯೋಜನೆಯ ಪಿತಾಮಹ ಡಾ. ವಿಕ್ರಮ್‌ ಸಾರಾಭಾಯಿ ಅವರ ಹೆಸರನ್ನು ನಾಮಕರಣ ಮಾಡಲಾದ 'ವಿಕ್ರಮ್‌ ಲ್ಯಾಂಡರ್‌', 27 ಕೆ.ಜಿ ತೂಕದ 'ಪ್ರಜ್ಞಾನ್‌' ಹೆಸರಿನ ರೋಬಾಟಿಕ್‌ ರೋವರ್‌ (6 ಚಕ್ರದ ವ್ಯೋಮನೌಕೆ) ಮತ್ತು ಇವೆರಡನ್ನೂ ಒಳಗೊಂಡ 'ಆರ್ಬಿಟರ್‌' ಅನ್ನು ರಾಕೆಟ್‌ ನಭಕ್ಕೆ ಹೊತ್ತೊಯ್ದಿದೆ. 'ಲ್ಯಾಂಡರ್‌' ಸಾಧನವು ವ್ಯೋಮನೌಕೆಯನ್ನು ಚಂದ್ರನ ಮೇಲೆ ಇಳಿಸಲು ನೆರವಾಗಲಿದೆ. ಚಂದ್ರನ ಮೇಲ್ಮೈ ಮೇಲೆ ಅಡ್ಡಾಡಿ, ಮಾಹಿತಿ ಸಂಗ್ರಹಿಸಿ ಭೂಮಿಗೆ ಕಳುಹಿಸುವ ಕೆಲಸವನ್ನು ರೋವರ್‌ ಮಾಡಲಿದೆ. ಸೌರಶಕ್ತಿಯನ್ನು ಬಳಸಿ ರೋವರ್‌ ದಿನಕ್ಕೆ ಅರ್ಧ ಕಿ.ಮೀ. ಚಲಿಸಬಲ್ಲದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ