ಆ್ಯಪ್ನಗರ

ನಾಲವಾರ: ಬಿರುಗಾಳಿ, ಮನೆ ಜಖಂ

ಕಳೆದ ಗುರುವಾರ ವಲಯದ ಸುತ್ತಲೂ ಬೀಸಿದ ಭಾರೀ ಬಿರುಗಾಳಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಬೆನ್ನಲ್ಲೆ ಮತ್ತೆ ಶನಿವಾರ ರಾತ್ರಿ ಇಲ್ಲಿಗೆ ಸಮೀಪದ ತುನ್ನೂರು ಗ್ರಾಮದಲ್ಲಿ ಮರ ಉರುಳಿದ ಬಿದ್ದು ಮನೆ ಗೋಡೆ ಜಖಂ ಗೊಂಡ ವರದಿಯಾಗಿದೆ.

ವಿಕ ಸುದ್ದಿಲೋಕ 23 May 2016, 4:07 pm
ನಾಲವಾರ:ಕಳೆದ ಗುರುವಾರ ವಲಯದ ಸುತ್ತಲೂ ಬೀಸಿದ ಭಾರೀ ಬಿರುಗಾಳಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದ ಬೆನ್ನಲ್ಲೆ ಮತ್ತೆ ಶನಿವಾರ ರಾತ್ರಿ ಇಲ್ಲಿಗೆ ಸಮೀಪದ ತುನ್ನೂರು ಗ್ರಾಮದಲ್ಲಿ ಮರ ಉರುಳಿದ ಬಿದ್ದು ಮನೆ ಗೋಡೆ ಜಖಂ ಗೊಂಡ ವರದಿಯಾಗಿದೆ.
Vijaya Karnataka Web
ನಾಲವಾರ: ಬಿರುಗಾಳಿ, ಮನೆ ಜಖಂ


ತುನ್ನೂರಿನ ಬಾಷಾಮಿಯ್ಯಾ ಎಂಬವರಿಗೆ ಸೇರಿದ ಮನೆಗೆ ಧಕ್ಕೆಯಾಗಿದ್ದು, ಟಿವಿ, ಫ್ಯಾನ್ ಸೇರಿದಂತೆ ಸಾಮಗ್ರಿಗಳು ಧ್ವಂಸಗೊಂಡಿವೆ. ಕಳೆದ ಗುರುವಾರವಷ್ಟೇ ಬೀಸಿದ ಬಿರುಗಾಳಿಗೆ ಸುಮಾರು 20 ಕ್ಕೂ ಅಧಿಕ ವಿದ್ಯುತ್ ಕಂಬಗಳು ಸೇರಿದಂತೆ 10 ಕ್ಕೂ ಅಧಿಕ ಮರಗಳು ನೆಲಕ್ಕೆ ಉರುಳಿದ್ದು, ಜನತೆ ಆತಂಕದಲ್ಲಿದ್ದರು. ಮತ್ತೆ ಬೀಸಿದ ಬಿರುಗಾಳಿ ಗ್ರಾಮಸ್ಥರಲ್ಲಿ ಭೀತಿ ಹೆಚ್ಚಿಸಿದೆ.

ವಿದ್ಯುತ್ ಕಂಬಗಳು ಉರುಳಿ ಬಿದ್ದು, ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಇಲ್ಲದ ಪ್ರಯುಕ್ತ ಪಂಚಾಯಿತಿಯ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಹೀಗಾಗಿ, ಗ್ರಾಮದ ಹೊರ ವಲಯದ ಹೊಳೆ ನೀರು ತರಲು ಜನ ತೆರಳುತ್ತಿದ್ದಾರೆ.

ರೊಟ್ಟಿ ತಟ್ಟಲು ಹಿಟ್ಟಿಲ್ಲ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಕಡಿತವಾಗಿ ಹಿಟ್ಟಿನ ಗಿರಣಿಗಳು ಚಾಲೂ ಆಗಿಲ್ಲ. ಹೀಗಾಗಿ, ರೊಟ್ಟಿ ತಟ್ಟಲು ಹಿಟ್ಟಿಲ್ಲದಂತೆ ಆಗಿದೆ. ಹಿಟ್ಟು ಬೀಸಿಕೊಂಡು ಬರಲು ಬೇರೆ ಗ್ರಾಮಗಳಿಗೆ ತೆರಳುವ ಸ್ಥಿತಿ ಉಂಟಾಗಿದೆ ಎಂಬುದು ಗ್ರಾಮಸ್ಥರ ನೋವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ