ಆ್ಯಪ್ನಗರ

ಮಾಹಿತಿ ನೀಡಲು ನಕಾರ: ನೀಲಳ್ಳಿ ಕಾರ್ಯದರ್ಶಿಗೆ ದಂಡ

ಮಾಹಿತಿ ಹಕ್ಕು ಅಧಿನಿಯಮದ ಅಡಿ ಮಾಹಿತಿ ಬಯಸಿದ್ದ ವ್ಯಕ್ತಿಗೆ ಮಾಹಿತಿ ನೀಡದ ಸೇಡಂ ತಾಲೂಕಿನ ನೀಲಳ್ಳಿ ಗ್ರಾಮ ಪಂಚಾಯಿತಿ ಪಿಡಿಒಗೆ ಮಾಹಿತಿ ಹಕ್ಕು ಆಯೋಗ 10 ಸಾವಿರ ರೂ. ದಂಡ ವಿಧಿಸಿದೆ.

ವಿಕ ಸುದ್ದಿಲೋಕ 11 Jul 2016, 2:49 pm

ಕಲಬುರಗಿ:ಮಾಹಿತಿ ಹಕ್ಕು ಅಧಿನಿಯಮದ ಅಡಿ ಮಾಹಿತಿ ಬಯಸಿದ್ದ ವ್ಯಕ್ತಿಗೆ ಮಾಹಿತಿ ನೀಡದ ಸೇಡಂ ತಾಲೂಕಿನ ನೀಲಳ್ಳಿ ಗ್ರಾಮ ಪಂಚಾಯಿತಿ ಪಿಡಿಒಗೆ ಮಾಹಿತಿ ಹಕ್ಕು ಆಯೋಗ 10 ಸಾವಿರ ರೂ. ದಂಡ ವಿಧಿಸಿದೆ.

ಬಸವ ವಸತಿ ಯೋಜನೆ ಅಡಿ ಆಯ್ಕೆಯಾದ ಫಲಾನುಭವಿಗಳ ವಿವರ, ಜಾತಿ, ಆದಾಯ ಪ್ರಮಾಣ ಪತ್ರ ಮತ್ತು ರೇಷನ್‌ ಕಾರ್ಡ್‌ ಪ್ರತಿ ನೀಡುವಂತೆ ಆಗ್ರಹಿಸಿ ಗ್ರಾಮದ ಖತಲಪ್ಪ ಕಟ್ಟಿಮನಿ 2014ರ ಆಗಸ್ಟ್‌ 26ರಂದು ಮಾಹಿತಿ ಕೋರಿ ಮನವಿ ಸಲ್ಲಿಸಿದ್ದರು. ಈ ಕುರಿತು ಕಾರ್ಯದರ್ಶಿ ಪ್ರಿಯಾಂಕಾ ಅವರು ಮಾಹಿತಿ ನೀಡದ ಕಾರಣ ಖತಲಪ್ಪ ನಿಗದಿತ ಅವಧಿ ಪೂರ್ಣಗೊಂಡ ನಂತರ ಮೇಲ್ಮನವಿ ಸಲ್ಲಿಸಿದ್ದರು.

Vijaya Karnataka Web
ಮಾಹಿತಿ ನೀಡಲು ನಕಾರ: ನೀಲಳ್ಳಿ ಕಾರ್ಯದರ್ಶಿಗೆ ದಂಡ


ಆದರೆ, ಮೇಲ್ಮನವಿ ವೇಳೆಯಲ್ಲೂ ಪ್ರಿಯಾಂಕಾ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅವರಿಗೆ 10 ಸಾವಿರ ರೂ. ದಂಡ ವಿಧಿಸಿ ಆಯೋಗದ ಆಯುಕ್ತರು ಆದೇಶ ಹೊರಡಿಸಿದ್ದರು. ಆದರೆ, ಈ ಆದೇಶಕ್ಕೂ ಪ್ರಿಯಾಂಕ ಸ್ಪಂದಿಸದ ಕಾರಣಕ್ಕಾಗಿ ಆಯೋಗ 2016ರ ಮೇ 23ರಂದು ಮತ್ತೊಂದು ಆದೇಶ ಹೊರಡಿಸಿ ದಂಡ ಪಾವತಿಯಲ್ಲಿ ವಿಳಂಬವಾಗಿದ್ದು, ತಕ್ಷಣ ದಂಡದ ಹಣ ವಸೂಲಿ ಮಾಡುವಂತೆ ಆಯೋಗದ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ. ಇಷ್ಟಾದರೂ ಇಂದಿಗೂ ದಂಡ ಪಾವತಿಸುವಲ್ಲಿ ಗ್ರಾಪಂ ಕಾರ್ಯದರ್ಶಿ ವಿಫಲರಾಗಿದ್ದಾರೆ ಎಂದು ಖತಲಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ