ಆ್ಯಪ್ನಗರ

ಪ್ರಶಸ್ತಿ ಆಯ್ಕೆಯಲ್ಲಿ ಲಿಂಗ ತಾರತಮ್ಯ:ಡಾ. ಗೀತಾ ನಾಗಭೂಷಣ

ರಾಜ್ಯ ಸರಕಾರದ ಪ್ರ್ರತಿಷ್ಠಿತ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಲಿಂಗ ತಾರತಮ್ಯ ಎದ್ದು ಕಾಣುತ್ತಿದೆ ಎಂದು ಗಂಭೀರವಾಗಿ ಆರೋಪಿಸಿರುವ ನಾಡೋಜ ಡಾ. ಗೀತಾ ನಾಗಭೂಷಣ, ಈ ಕುರಿತು ಚಿಂತನೆ ನಡೆಸುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.

ವಿಕ ಸುದ್ದಿಲೋಕ 11 Jul 2016, 5:16 pm
ಕಲಬುರಗಿ:ರಾಜ್ಯ ಸರಕಾರದ ಪ್ರ್ರತಿಷ್ಠಿತ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಲಿಂಗ ತಾರತಮ್ಯ ಎದ್ದು ಕಾಣುತ್ತಿದೆ ಎಂದು ಗಂಭೀರವಾಗಿ ಆರೋಪಿಸಿರುವ ನಾಡೋಜ ಡಾ. ಗೀತಾ ನಾಗಭೂಷಣ, ಈ ಕುರಿತು ಚಿಂತನೆ ನಡೆಸುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.
Vijaya Karnataka Web
ಪ್ರಶಸ್ತಿ ಆಯ್ಕೆಯಲ್ಲಿ ಲಿಂಗ ತಾರತಮ್ಯ:ಡಾ. ಗೀತಾ ನಾಗಭೂಷಣ


ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಆಯೋಜಿಸಿದ್ದ ತಿಂಗಳ ಸಮಾರಂಭ ‘ಮನದಾಳದ ಮಾತು’ ಉದ್ದೇಶಿಸಿ ಅವರು ಮಾತನಾಡಿದರು.

ಕೇವಲ ಪುರುಷ ಸಾಹಿತಿಗಳಿಗೆ ಪಂಪ ಪ್ರಶಸ್ತಿ, ಮಹಿಳಾ ಸಾಹಿತಿಗಳಿಗೆ ಅತ್ತಿಮಬ್ಬೆ ದಾನಚಿಂತಾಮಣಿ ಹೀಗೆ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಆಯ್ಕೆ ಮಾಡುವಾಗ ಲಿಂಗ ತಾರತಮ್ಯ ಮಾಡುತ್ತಿರುವುದು ಸ್ಪಷ್ಟವಿದೆ. ಈವರೆಗೆ ತಿಳಿದೋ, ತಿಳಿಯದೆಯೋ ಇಂತಹ ಸಂಪ್ರದಾಯ ನಡೆದುಕೊಂಡು ಬಂದಿದೆ. ಮುಂದಾದರೂ, ಈ ಕಳಂಕ ನಿವಾರಣೆಯತ್ತ ಚಿಂತನೆ ನಡೆಸಬೇಕು. ಪ್ರತಿಷ್ಠಿತ ಪ್ರಶಸ್ತಿಗಳಿಗೆ ಲಿಂಗ ತಾರತಮ್ಯದ ಕಳಂಕ ಇರಬಾರದು ಎಂದರು.

ವ್ಯಕ್ತಿಯ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನಲಾಗುತ್ತಿದೆ. ಯಶಸ್ಸಿನಲ್ಲಿ ಮಹಿಳೆಯ ಸಮಪಾಲೂ ಇದೆ ಎಂಬ ಅರ್ಥ ಬಾರದು. ವ್ಯಕ್ತಿಯ ಯಶಸ್ಸಿನಲ್ಲಿ ಮಹಿಳೆಗೆ ಹಿಂದಿನ ಸ್ಥಾನ ನೀಡುವ ಮೂಲಕ ಮತ್ತೆ ಆಕೆಯನ್ನು ಹಿಂದೆ ತಳ್ಳಲಾಗಿದೆ. ಇಲ್ಲಿಯೂ ಶೋಷಣೆಯಾಗಿದೆ. ವ್ಯಕ್ತಿಯ ಯಶಸ್ಸೇ ಬೆಳಕಿಗೆ ಬರುತ್ತಿದೆ. ಪುರುಷ ಸಮೂಹದ ಇಂತಹ ಮಾತುಗಳನ್ನು ಪುನರ್ ವಿಮರ್ಶಿಸುವ ಅಗತ್ಯವಿದೆ. ಆದ್ದರಿಂದ, ಮಹಿಳಾ ಸಮೂಹ ತನ್ನ ಅಸ್ತಿತ್ವದ ಕುರಿತು ಎಚ್ಚರ ಇದ್ದಷ್ಟು ಕಡಿಮೆ ಎಂದು ವಿಶ್ಲೇಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ