ಆ್ಯಪ್ನಗರ

ಪೋಲೀಸರಿಂದ ಸ್ವಚ್ಛತಾ ಕಾರ್ಯ

ಸ್ವಚ್ಛತೆಯ ಬಗ್ಗೆ ಇತರರಿಗೆ ಮಾರ್ಗದರ್ಶನ ನೀಡುವ ಮುನ್ನ ನಾವುಗಳು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಸೈದಾಪುರ ಪೋಲೀಸ್‌ ಠಾಣೆಯ ಪಿ.ಎಸ್‌.ಐ ಎನ್‌.ವೈ.ಗುಂಡುರಾವ್‌ ಅಭಿಪ್ರಾಯಪಟ್ಟರು.

Vijaya Karnataka 26 Sep 2019, 10:08 pm
ಯಾದಗಿರಿ:ಸ್ವಚ್ಛತೆಯ ಬಗ್ಗೆ ಇತರರಿಗೆ ಮಾರ್ಗದರ್ಶನ ನೀಡುವ ಮುನ್ನ ನಾವುಗಳು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಸೈದಾಪುರ ಪೋಲೀಸ್‌ ಠಾಣೆಯ ಪಿ.ಎಸ್‌.ಐ ಎನ್‌.ವೈ.ಗುಂಡುರಾವ್‌ ಅಭಿಪ್ರಾಯಪಟ್ಟರು.
Vijaya Karnataka Web
ಪೋಲೀಸರಿಂದ ಸ್ವಚ್ಛತಾ ಕಾರ್ಯ


ತಾಲೂಕಿನ ಸೈದಾಪುರ ಪಟ್ಟಣದಲ್ಲಿಪೋಲೀಸರು ಹಮ್ಮಿಕೊಂಡ ಸ್ವಚ್ಛತಾ ಕಾರ್ಯದ ನೇತೃತ್ವ ವಹಿಸಿ ಮಾತನಾಡಿ, ನಾವು ಕರ್ತವ್ಯ ನಿರ್ವಹಣೆ ಮಾಡುವ ಸ್ಥಳ ಮನೆಯಂತೆ ಸ್ವಚ್ಛಂದವಾಗಿರಬೇಕು, ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳÜಬೇಕು ಎಂದು ಪೋಲೀಸ್‌ ಸಿಬ್ಬಂದಿಗೆ ಸಲಹೆ ನೀಡಿದರು. ಮುಂದಿನ ಪೀಳಿಗೆಗೆ ಪರಿಸರದ ಕಾಳಜಿಯನ್ನು ಮೂಡಿಸುವ ಶಕ್ತಿ ನಮ್ಮಲಿದ್ದೆ ಎಂದು ತಮ್ಮ ಸಿಬ್ಬಂದಿಗೆ ಆತ್ಮವಿಶ್ವಾಸ ಮೂಡಿಸಿದರು. ಪರಿಸರಕ್ಕೆ ಅತಿ ಮಾರಕವಾಗಿರುವ ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಕರೆ ನೀಡಿದರು.

ಸ್ವಚ್ಛತಾ ಕಾರ್ಯದಲ್ಲಿಎ.ಎಸ್‌.ಐ ಭೀಮರಾಯ, ಸಕ್ರೆಪ್ಪ, ಗೋಪಾಲರೆಡ್ಡಿ, ಈರಣ್ಣ, ಗೌತಮ್‌, ಗುರುಸ್ವಾಮಿ, ಬಸವರಾಜ, ನಾಗೇಶ, ರಮೇಶ, ಪೋಲೀಸ್‌ ಇಲಾಖೆ ಸಿಬ್ಬಂದಿ ಮತ್ತು ಗೃಹ ರಕ್ಷಕದಳದ ಸಿಬ್ಬಂದಿ ಭಾಗವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ