ಆ್ಯಪ್ನಗರ

ಕಲಬುರಗಿ ಆಕಾಶವಾಣಿಗೆ ಅವಳಿ ಪುರಸ್ಕಾರ

ಆಕಾಶವಾಣಿಯ ರಾಜ್ಯ ಮಟ್ಟದ 2019 ನೇ ಸಾಲಿನ ವಾರ್ಷಿಕ ಸ್ಪರ್ಧೆಯಲ್ಲಿ ಕಲಬುರಗಿ ಆಕಾಶವಾಣಿ ಕೇಂದ್ರವು ಅವಳಿ ಪುರಸ್ಕಾರ ಪಡೆದಿದೆ. ಈ ಪುರಸ್ಕಾರಗಳನ್ನು ಈಚೆಗೆ ಬೆಂಗಳೂರಿನಲ್ಲಿನಡೆದ ಸಮಾರಂಭದಲ್ಲಿಪ್ರದಾನ ಮಾಡಲಾಯಿತು.

Vijaya Karnataka 4 Dec 2019, 10:20 pm
ಕಲಬುರಗಿ :ಆಕಾಶವಾಣಿಯ ರಾಜ್ಯ ಮಟ್ಟದ 2019 ನೇ ಸಾಲಿನ ವಾರ್ಷಿಕ ಸ್ಪರ್ಧೆಯಲ್ಲಿ ಕಲಬುರಗಿ ಆಕಾಶವಾಣಿ ಕೇಂದ್ರವು ಅವಳಿ ಪುರಸ್ಕಾರ ಪಡೆದಿದೆ. ಈ ಪುರಸ್ಕಾರಗಳನ್ನು ಈಚೆಗೆ ಬೆಂಗಳೂರಿನಲ್ಲಿನಡೆದ ಸಮಾರಂಭದಲ್ಲಿಪ್ರದಾನ ಮಾಡಲಾಯಿತು.
Vijaya Karnataka Web
ಕಲಬುರಗಿ ಆಕಾಶವಾಣಿಗೆ ಅವಳಿ ಪುರಸ್ಕಾರ


ಕಲಬುರಗಿ ಆಕಾಶವಾಣಿ ಕೇಂದ್ರ ಸಿದ್ಧಪಡಿಸಿದ 'ನಾಯಿಬಾಲ ಡೊಂಕೆ' ನಾಟಕ ನಿರ್ಮಾಣ ಮಾಡಿದ ಕಾರ್ಯಕ್ರಮ ನಿರ್ವಾಹಕರಾದ ರಾಜೇಂದ್ರ ಆರ್‌.ಕುಲಕರ್ಣಿ ಮತ್ತು ಸೋಮಶೇಖರ್‌ ಎಸ್‌. ರುಳಿ ಅವರಿಗೆ ಸಿನಿಮಾ ನಿರ್ಮಾಪಕ ಹಾಗೂ ನಿರ್ದೇಶಕ ಎಸ್‌.ನಾರಾಯಣ್‌ ಅವರು ಪ್ರಶಸ್ತಿ ಪತ್ರ, ಟ್ರೋಫಿ ನೀಡಿ ಸತ್ಕರಿಸಿದರು.

ಅಲ್ಲದೆ, ಕೇಂದ್ರ ಸರಕಾರದ ಯೋಜನೆಗಳಿಗೆ ಕೊಡಮಾಡುವ 'ಪೋಷಣ್‌ ಅಭಿಯಾನ್‌' ವಿಭಾಗದಲ್ಲಿ(ಸರ್ಟಿಫಿಕೇಟ್‌ ಆಫ್‌ ಮೆರಿಟ್‌) ಎರಡನೇ ಬಹುಮಾನ ಪಡೆದ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲರಿಗೆ ಎಸ್‌. ನಾರಾಯಣ್‌ ಪುರಸ್ಕಾರ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿಕವಯಿತ್ರಿ ವಿಮರ್ಶಕಿ ಡಾ. ಪಿ. ಚಂದ್ರಿಕಾ, ಬೆಂಗಳೂರು ಆಕಾಶವಾಣಿ ಕೇಂದ್ರದ ಮುಖ್ಯಸ್ಥರಾದ ಡಾ.ನಿರ್ಮಲಾ ಎಲಿಗಾರ್‌, ಡಾ.ಎನ್‌.ರಘು, ಮಾರುಕಟ್ಟೆ ವಿಭಾಗದ ಉಪ ಮಹಾನಿರ್ದೇಶಕರಾದ ಅನಿಲ್‌ ಕುಮಾರ್‌ ಮಂಗಲಗಿ, ವಿವಿಧ ಭಾರತಿಯ ಉಪನಿರ್ದೇಶಕರಾದ ಆರ್‌.ಕೆ.ಗೋವಿಂದರಾಜನ್‌, ಪಿಸಿಡಬ್ಲೂತ್ರ್ಯ ಮುಖ್ಯಸ್ಥ ಉದಯವೀರ್‌ ಸಿಂಗ್‌, ತಾಂತ್ರಿಕ ವಿಭಾಗದ ಎಸ್‌. ಪಿ. ಮೇತ್ರೆ, ಆಡಳಿತಾಧಿಕಾರಿ ಅಶ್ವಿನಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ