ಆ್ಯಪ್ನಗರ

ನಟನೆಯಲ್ಲಿಡಾ.ರಾಜ್‌ ಬಂಗಾರದ ಮನುಷ್ಯ

ಕನ್ನಡ ಚಿತ್ರರಂಗದಲ್ಲಿಡಾ.ರಾಜಕುಮಾರ್‌ ಒಬ್ಬ ಮೇರು ನಟನಾಗಿ ತಮ್ಮ ನಟನೆಯ ಜೊತೆ ತಮ್ಮ ಸಹ ನಟ-ನಟಿಯರೊಂದಿಗೆ ಹಾಗೂ ತಂತ್ರಜ್ಞರೊಂದಿಗೆ ತುಂಬಾ ಪ್ರೀತಿಯಿಂದ ಬೆರೆಯುತ್ತ ಮಾನವೀಯ ಮೌಲ್ಯಗಳಿಗಾಗಿ ಹೆಸರು ಮಾಡಿದ ಬಂಗಾರದ ಮನುಷ್ಯ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೊ›.ಎಚ್‌.ಎಂ.ಮಹೇಶ್ವರಯ್ಯ ಬಣ್ಣಿಸಿದರು.

Vijaya Karnataka 26 Feb 2020, 10:17 pm
ಕಲಬುರಗಿ: ಕನ್ನಡ ಚಿತ್ರರಂಗದಲ್ಲಿಡಾ.ರಾಜಕುಮಾರ್‌ ಒಬ್ಬ ಮೇರು ನಟನಾಗಿ ತಮ್ಮ ನಟನೆಯ ಜೊತೆ ತಮ್ಮ ಸಹ ನಟ-ನಟಿಯರೊಂದಿಗೆ ಹಾಗೂ ತಂತ್ರಜ್ಞರೊಂದಿಗೆ ತುಂಬಾ ಪ್ರೀತಿಯಿಂದ ಬೆರೆಯುತ್ತ ಮಾನವೀಯ ಮೌಲ್ಯಗಳಿಗಾಗಿ ಹೆಸರು ಮಾಡಿದ ಬಂಗಾರದ ಮನುಷ್ಯ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೊ›.ಎಚ್‌.ಎಂ.ಮಹೇಶ್ವರಯ್ಯ ಬಣ್ಣಿಸಿದರು.
Vijaya Karnataka Web
ನಟನೆಯಲ್ಲಿಡಾ.ರಾಜ್‌ ಬಂಗಾರದ ಮನುಷ್ಯ


ಕೇಂದ್ರಿಯ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗ ಹಾಗೂ ಕಲಬುರಗಿಯ ರಂಗಾಯಣದ ಸಂಯುಕ್ತಾಶ್ರಯದಲ್ಲಿನಡೆಯುವ 30ದಿನಗಳ ಸಿನಿಮೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ರಾಜಕುಮಾರ್‌ ಅವರ ಸಿನಿಮಾಗಳನ್ನು ನೋಡುತ್ತಾ ತಾವು ಬೆಳೆದ ಅನುಭವ ಹಂಚಿಕೊಂಡ ಮಹೇಶ್ವರಯ್ಯ, ಸಿನೆಮಾಗಳು ಕನ್ನಡ, ಸಂಸ್ಕೃತಿ ಬಿಂಬಿಸುತ್ತವೆ ಎಂದು ತಿಳಿಸಿದರು.

ಈ ಸಿನಿಮೋತ್ಸವದಿಂದ ವಿದ್ಯಾರ್ಥಿಗಳಲ್ಲಿನ ಶೈಕ್ಷಣಿಕ ಒತ್ತಡ ನಿವಾರಿಸಲು ಹಾಗೂ ಕನ್ನಡ ಸಿನಿಮಾಗಳನ್ನು ವೀಕ್ಷಿಸುವದರಿಂದ ಭಾಷೆ, ಸಂಸ್ಕೃತಿ ಗೌರವಿಸುವ ಮನೋಭಾವ ಅಳವಡಿಸಿಕೊಳ್ಳಲು ಅನುಕೂಲವಾತ್ತದೆ ಎಂದರು.

ಮುಂದಿನ ಶೈಕ್ಷಣಿಕ ವರ್ಷದಿಂದ ಸಂಗೀತ, ಜರ್ಮನ್‌, ಜಪಾನೀಸ್‌, ಅರೇಬಿಕ್‌ ಹಾಗೂ ಸ್ಪಾ್ಯನಿಶ್‌ ಭಾಷೆಗಳ ಸರ್ಟಿಫಿಕೆಟ್‌ ಕೋರ್ಸ್‌ ಆರಂಭಿಸಲಾಗುವುದು ಎಂದು ಸಹ ಅವರು ಹೇಳಿದರು.

ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ ಪೊ›.ಬಸವರಾಜ ಪಿ.ಡೊಣ್ಣೂರ ಮಾತನಾಡಿದರು. ಇದೇ ಫೆ.24ರಿಂದ ಮಾಚ್‌ 23ರವರೆಗೆ ನಡೆಯುವ 30 ದಿನಗಳ ಸಿನಿಮೋತ್ಸವದಲ್ಲಿಡಾ.ರಾಜ್‌ ಅಭಿನಯದ 22 ಸಿನಿಮಾ ಪ್ರದರ್ಶನಗೊಳ್ಳಲಿವೆ. ಮಾ.24ರಂದು ಮುಕ್ತಾಯಗೊಳ್ಳಲಿದ್ದು, ಅಂದು ಸಿನಿಮೋತ್ಸವ ಕುರಿತು ಒಂದು ದಿನದ ವಿಚಾರ ಸಂಕಿರಣ ನಡೆಯಲಿದೆ. ಈ ವಿಚಾರ ಸಂಕಿರಣದಲ್ಲಿಟಿ.ಎಸ್‌.ನಾಗಾಭರಣ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸಿಯುಕೆ ಕುಲಸಚಿವ ಮುಶ್ತಾಕ್‌ ಅಹ್ಮದ್‌ ಐ.ಪಟೇಲ್‌, ಡಾ.ಮಹಿಮಾರಾಜ್‌ ಸಿ, ಡಾ.ಪ್ರಕಾಶ ಬಾಳಿಕಾಯಿ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ದೀಪ್ತಿ ಸೇರಿದಂತೆ ವಿವಿಧ ವಿಭಾಗದ ಮುಖ್ಯಸ್ಥರು, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಚಿತ್ರರಂಗ ಆಳುತ್ತಿದ್ದ ರಾಜ್‌ ಚಿತ್ರಗಳು

50ರಿಂದ 70ರ ದಶಕದ ಮಧ್ಯದ ಚಿತ್ರಗಳು ಸಾಂಸ್ಕೃತಿಕವಾಗಿ ತುಂಬಾ ಶ್ರೀಮಂತವಾಗಿದ್ದವು. ಪ್ರಾದೇಶಿಕ ಚಿತ್ರಗಳ ಕಾಲಘಟ್ಟ ಅದಾಗಿತ್ತು ಎಂದು ಇಂಗ್ಲಿಷ್‌ ವಿಭಾಗದ ಪ್ರಾಧ್ಯಾಪಕ ಪೊ›.ಎನ್‌.ನಾಗರಾಜು ಸ್ಮರಿಸಿದರು.

ದಕ್ಷಿಣ ಭಾರತದಲ್ಲಿತೆಲುಗು ಚಿತ್ರರಂಗದಲ್ಲಿಎನ್‌.ಟಿ.ಆರ್‌, ತಮಿಳಿನಲ್ಲಿಶಿವಾಜಿ ಗಣೇಶನ್‌ ಮತ್ತು ಎಂ.ಜಿ.ಆರ್‌ ರೀತಿಯಲ್ಲಿಕನ್ನಡದಲ್ಲಿಡಾ.ರಾಜಕುಮಾರ ಆ ಕಾಲಘಟ್ಟದ ಪ್ರಮುಖ ನಟರಾಗಿದ್ದರು. ರಾಜ್‌ ಚಿತ್ರಗಳು ಚಿತ್ರರಂಗವನ್ನೇ ಆಳುತ್ತಿದ್ದವು ಎಂದು ಅವರು ನೆನಪಿಸಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ