ಕಲಬುರಗಿ: ತಾಲೂಕಿನ ಉಪಳಾಗಾಂವ್ ಗ್ರಾಮದ ಮಲ್ಲಿಕಾರ್ಜುನ ದೇವರ 5ನೇ ಜಾತ್ರಾ ಮಹೋತ್ಸದ ನಿಮಿತ್ತ ಆ.11 ರಿಂದ ಅಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಗುಡ್ಡಾಪುರ ದಾನಮ್ಮದೇವಿಯ ಮಹಾಪುರಾಣ ಏರ್ಪಡಿಸಲಾಗಿದೆ.
ಅಂದು ರಾತ್ರಿ 8ಕ್ಕೆ ನಡೆಯುವ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಚಿತ್ತಾಪುರ ತಾಲೂಕಿನ ಬೆಳಗುಂಪಾ ಬೃಹನ್ಮಠದ ಶಿವಗಂಗಾಧರ ಸ್ವಾಮಿ ಸಾನ್ನಿಧ್ಯ ವಹಿಸುವರು. ತಾವರಗೇರಾ ಸಿದ್ಧಾರೂಢ ಮಹಾಸ್ವಾಮಿ ನೇತೃತ್ವ ವಹಿಸುವರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಎಚ್.ಮಲಾಜಿ ಕಾರ್ಯಕ್ರಮ ಉದ್ಘಾಟಿಸುವರು.
ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಜಿಪಂ ಸದಸ್ಯರಾದ ವಿಜಯಲಕ್ಷ್ಮೇ ಎಸ್.ಹಾಗರಗಿ, ಶಿವರಾಜ ಎ.ಪಾಟೀಲ್ ರದ್ದೆವಾಡಗಿ ಸೇರಿದಂತೆ ಇತರರು ಪಾಲ್ಗೊಳ್ಳುವರು.
ಕೊಡೆಕಲ್ನ ಗಂಗಾಧರ ಶಾಸ್ತ್ರಿ ಅವರು ಪುರಾಣ ಹೇಳುವರು. ನಾಗರಾಜ್ ಕೋಟನೂರ ಸಂಗೀತ ಹಾಗೂ ರವಿಸ್ವಾಮಿ ಗೋಟೂರ್ ತಬಲಾ ಸಾಥ್ ನೀಡುವರು. ಪುರಾಣ ಕಾರ್ಯಕ್ರಮ ನಿತ್ಯ ರಾತ್ರಿ 8 ರಿಂದ 10ರ ವರೆಗೆ ಜರುಗಲಿದೆ ಎಂದು ಉಪಳಾಂವ ಸಕಲ ಸದ್ಭಕ್ತ ಮಂಡಳಿ ತಿಳಿಸಿದೆ.