ಆ್ಯಪ್ನಗರ

ನಮ್ಮ ಉಳಿವಿಗಾದರೂ ಗಿಡ ನೆಡಲು ಸಲಹೆ

ಮನುಷ್ಯ ದುರಾಸೆಯಿಂದಾಗಿ ಇವತ್ತು ಭೂಮಿ ಸಿಕ್ಕಾಪಟ್ಟೆ ಬಿಸಿಯಾಗಿದೆ. ಜಾಗತಿಕ ತಾಪಮಾನದಿಂದಾಗಿ ಮನುಷ್ಯ ಸೇರಿದಂತೆ ಇತರೆಲ್ಲಾ ಪ್ರಾಣಿ,ಪಕ್ಷಿಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಅಥವಾ ನಮ್ಮ ಉಳಿವಿಗಾಗಿ 1ಲಕ್ಷ ಗಿಡಗಳನ್ನು ನೆಡಬೇಕಿದೆ ಎಂದು ಮೌಂಟ್‌ಆಬುನ ಶ್ರೀನಿವಾಸ ರಾಜು ತಿಳಿಸಿದರು.

Vijaya Karnataka 3 Jun 2018, 5:30 pm
ಕಲಬುರಗಿ: ಮನುಷ್ಯ ದುರಾಸೆಯಿಂದಾಗಿ ಇವತ್ತು ಭೂಮಿ ಸಿಕ್ಕಾಪಟ್ಟೆ ಬಿಸಿಯಾಗಿದೆ. ಜಾಗತಿಕ ತಾಪಮಾನದಿಂದಾಗಿ ಮನುಷ್ಯ ಸೇರಿದಂತೆ ಇತರೆಲ್ಲಾ ಪ್ರಾಣಿ,ಪಕ್ಷಿಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಅಥವಾ ನಮ್ಮ ಉಳಿವಿಗಾಗಿ 1ಲಕ್ಷ ಗಿಡಗಳನ್ನು ನೆಡಬೇಕಿದೆ ಎಂದು ಮೌಂಟ್‌ಆಬುನ ಶ್ರೀನಿವಾಸ ರಾಜು ತಿಳಿಸಿದರು.
Vijaya Karnataka Web 1 lakh sapling campaign from eshwarya university
ನಮ್ಮ ಉಳಿವಿಗಾದರೂ ಗಿಡ ನೆಡಲು ಸಲಹೆ


ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನುಷ್ಯನ ದಾಳಿಗಳಿಂದ ಸುಂದರ ಪ್ರಕೃತಿ ನಾಶವಾಗುತ್ತಿದೆ. ಈ ನಾಶದ ದುಷ್ಪರಿಣಾಮ ತಡೆಯುವ ನಿಟ್ಟಿನಲ್ಲಿ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜಿಲ್ಲೆಯಲ್ಲಿ ಸುಮಾರು 1ಲಕ್ಷ ಗಿಡ ನೆಡುವ ಉದ್ದೇಶ ಹೊಂದಲಾಗಿದೆ ಎಂದರು.

ಕಲಬುರಗಿಯಲ್ಲಿರುವ ನಾಲ್ಕು ವಿವಿಗಳ ಆವರಣದಲ್ಲಿ ಗಿಡ ನೆಡುವ ಮೂಲಕ ಹಸರೀಕರಣಕ್ಕೆ ಚಾಲನೆ ನೀಡಲಾಗುವುದು. ಪ್ರಥಮವಾಗಿ ಸದ್ಯದಲ್ಲಿಯೇ ಉದ್ಘಾನೆಗೊಳ್ಳಲಿರುವ ಸತ್ಯಸಾಯಿ ಮಾನವ ಅಭ್ಯುದಯ ವಿವಿ ಆವರಣದಲ್ಲಿ ಸಸಿಗಳನ್ನು ನಡೆಯುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದರು.

ಈಗಾಗಲೇ ತೆಲಂಗಾಣ ಸರಕಾರ ವರ್ಷಕ್ಕೆ ಸುಮಾರು 23 ಕೋಟಿ ಗಿಡ ನೆಡುವ ಕಾರ್ಯ ಆರಂಭಿಸಿದೆ. ಇದು ಜಗತ್ತಿನಲ್ಲಿ ಯಾವ ದೇಶವೂ ಇಂತಹ ಸಾಹಸವನ್ನು ಮಾಡಿಲ್ಲ. ಇದು ನಮ್ಮ ರಾಜ್ಯ ಸರಕಾರದ ಸಹಭಾಗಿತ್ವ ವಹಿಸಲು ಸ್ಫೂರ್ತಿಯಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಕೆ. ರತ್ನಾ ಅವರು ಜನಸಂಖ್ಯೆ ಹೆಚ್ಚಾದೆಂತೆಲ್ಲಾ ನಾಶವಾಗುತ್ತಿರುವ ಪ್ರಕೃತಿ ರಕ್ಷಣೆಗಾಗಿ ಗಿಡ ನೆಡುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಕ್ಲೀನ್‌ ದಿ ಮೈಂಡ್‌ ಆ್ಯಂಡ್‌ ಗ್ರೀನ್‌ ಅರ್ಥ ಮೂಲಕ ಜಾಗೃತಿ ಮೂಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಿ.ಕೆ. ರೇಖಾ, ಬಿ.ಕೆ. ಭಾಗಿರಥಿ,, ಬಿ.ಕ. ಶರಣಕುಮಾರ ಪಾಟೀಲ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ