ಅಫಜಲಪುರ :ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಮೂಲಕ ನೆರೆ ರಾಜ್ಯಗಳಿಗೆ ಅಕ್ರಮವಾಗಿ ಹತ್ತಿ ತುಂಬಿಕೊಂಡು ಹೊರಟಿದ್ದ 10 ಲಾರಿಗಳನ್ನು ಎಪಿಎಂಸಿ ಅಧಿಕಾರಿಗಳು ವಶಪಡಿಸಿಕೊಂಡು ನಂತರ ದಂಡ ವಿಧಿಸಿ ಬಿಡುಗಡೆ ಮಾಡಿದ ಘಟನೆ ಬುಧವಾರ ನಡೆದಿದೆ.
ಅಕ್ರಮವಾಗಿ ರೈತರ ಬಳಿ ಹತ್ತಿ ಖರೀದಿಸಿ ನೆರೆ ರಾಜ್ಯಕ್ಕೆ ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಜಾಗೃತರಾದ ತಾಲೂಕು ದಂಡಾಧಿಕಾರಿ ಇಸ್ಮಾಯಿಲ್ ಮುಲ್ಕಿ ಸಿಪಾಯಿ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಮತ್ತು ಬೆಂಗಳೂರು ವಿಭಾಗದ ಕಾನೂನು ಜಾರಿಕೋಶದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಒಟ್ಟು ರೂ. 2.43 ಲಕ್ಷ ದಂಡ ವಿಧಿಸಿದ್ದಾರೆ ಎಂದು ಎಪಿಎಂಸಿ ಕಾರ್ಯದರ್ಶಿ ರಾಜಕುಮಾರ ಕೌಡಾಳ ತಿಳಿಸಿದ್ದಾರೆ.
ಹತ್ತಿ ತುಂಬಿದ್ದ ಲಾರಿಗಳ ದಾಖಲಾತಿ ಅಧಿಕೃತವಾಗಿರಲಿಲ್ಲ. ಹಾಗಾಗಿ, ಅವುಗಳನ್ನು ವಶಕ್ಕೆ ಪಡೆದು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮದಡಿ ಒಟ್ಟು ಮಾರುಕಟ್ಟೆ ಶುಲ್ಕ ಮತ್ತು ದಂಡ 60,750 ಹಾಗೂ 1,82,250 ರೂ. ಸೇರಿ ಒಟ್ಟು ರೂ. 2,43,000 ಸಂಬಂಧಿತರಿಂದ ವಸೂಲಿ ಮಾಡಿ ವಾಹನ ಬಿಡುಗಡೆ ಮಾಡಲಾಗಿದೆ ಎಂದು ಅವರು ವಿಜಯಕರ್ನಾಟಕ್ಕೆ ಮಾಹಿತಿ ನೀಡಿದ್ದಾರೆ.
ಅಕ್ರಮವಾಗಿ ರೈತರ ಬಳಿ ಹತ್ತಿ ಖರೀದಿಸಿ ನೆರೆ ರಾಜ್ಯಕ್ಕೆ ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಜಾಗೃತರಾದ ತಾಲೂಕು ದಂಡಾಧಿಕಾರಿ ಇಸ್ಮಾಯಿಲ್ ಮುಲ್ಕಿ ಸಿಪಾಯಿ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ಮತ್ತು ಬೆಂಗಳೂರು ವಿಭಾಗದ ಕಾನೂನು ಜಾರಿಕೋಶದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಒಟ್ಟು ರೂ. 2.43 ಲಕ್ಷ ದಂಡ ವಿಧಿಸಿದ್ದಾರೆ ಎಂದು ಎಪಿಎಂಸಿ ಕಾರ್ಯದರ್ಶಿ ರಾಜಕುಮಾರ ಕೌಡಾಳ ತಿಳಿಸಿದ್ದಾರೆ.
ಹತ್ತಿ ತುಂಬಿದ್ದ ಲಾರಿಗಳ ದಾಖಲಾತಿ ಅಧಿಕೃತವಾಗಿರಲಿಲ್ಲ. ಹಾಗಾಗಿ, ಅವುಗಳನ್ನು ವಶಕ್ಕೆ ಪಡೆದು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮದಡಿ ಒಟ್ಟು ಮಾರುಕಟ್ಟೆ ಶುಲ್ಕ ಮತ್ತು ದಂಡ 60,750 ಹಾಗೂ 1,82,250 ರೂ. ಸೇರಿ ಒಟ್ಟು ರೂ. 2,43,000 ಸಂಬಂಧಿತರಿಂದ ವಸೂಲಿ ಮಾಡಿ ವಾಹನ ಬಿಡುಗಡೆ ಮಾಡಲಾಗಿದೆ ಎಂದು ಅವರು ವಿಜಯಕರ್ನಾಟಕ್ಕೆ ಮಾಹಿತಿ ನೀಡಿದ್ದಾರೆ.