ಆ್ಯಪ್ನಗರ

ಜಿಲ್ಲೆ ಅಭಿವೃದ್ಧಿಗೆ ಕೇಂದ್ರದಿಂದ ಮೂರು ಕೋಟಿ

ಕೇಂದ್ರ ಸರಕಾರ ದೇಶದಲ್ಲಿ ಒಟ್ಟು 115 ಹಿಂದುಳಿದ ಜಿಲ್ಲೆಗಳೆಂದು ಗುರುತಿಸಿದ್ದು, ಈ ಪೈಕಿ ಯಾದಗಿರಿಯೂ ಒಂದಾಗಿದೆ. ಜಿಲ್ಲೆಯ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಮಂಜೂರಾತಿ ಮಾಡಿದ್ದು, ಇಲಾಖೆಗಳು ಕ್ರಿಯಾಯೋಜನೆ ರೂಪಿಸಲು ನಿರತವಾಗಿವೆæ.

Vijaya Karnataka 4 Jul 2019, 9:24 pm
ಮಲ್ಲಪ್ಪ ಸಂಕೀನ್‌ ಯಾದಗಿರಿ :ಕೇಂದ್ರ ಸರಕಾರ ದೇಶದಲ್ಲಿ ಒಟ್ಟು 115 ಹಿಂದುಳಿದ ಜಿಲ್ಲೆಗಳೆಂದು ಗುರುತಿಸಿದ್ದು, ಈ ಪೈಕಿ ಯಾದಗಿರಿಯೂ ಒಂದಾಗಿದೆ. ಜಿಲ್ಲೆಯ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಮಂಜೂರಾತಿ ಮಾಡಿದ್ದು, ಇಲಾಖೆಗಳು ಕ್ರಿಯಾಯೋಜನೆ ರೂಪಿಸಲು ನಿರತವಾಗಿವೆæ.
Vijaya Karnataka Web 3 crores from the central government for development of the district
ಜಿಲ್ಲೆ ಅಭಿವೃದ್ಧಿಗೆ ಕೇಂದ್ರದಿಂದ ಮೂರು ಕೋಟಿ


ಯಾದಗಿರಿ ಆಕಾಂಕ್ಷೆ ಜಿಲ್ಲೆಯೆಂದು ಗುರುತಿಸಲಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದ ಪರಿಣಾಮ ಕೇಂದ್ರ ಮೊದಲನೇ ಬಾರಿಗೆ 3 ಕೋಟಿ ರೂ. ಅನುದಾನ ನೀಡಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವುದು ಇಲಾಖೆಗಳ ಮೇಲಿದೆ. ಕೃಷಿ, ಎಪಿಎಂಸಿ, ಪಶು ಇಲಾಖೆ ಮತ್ತು ತೋಟಗಾರಿಕೆ ಈ ನಾಲ್ಕು ಇಲಾಖೆಗಳು ಸೇರಿ ಒಟ್ಟು 3 ಕೋಟಿ ರೂ. ಅನುದಾನ ಕೇಂದ್ರ ಇತ್ತೀಚೆಗೆ ಮಂಜೂರು ಮಾಡಿದೆ. ಈಗ ಬಂದಿರುವ ಬಜೆಟ್‌ನ್ನು ಹೇಗೆ ಉಪಯೋಗ ಮಾಡಿಕೊಳ್ಳಬೇಕು ಎಂಬ ಕುರಿತಂತೆ ನಾಲ್ಕು ಇಲಾಖೆಗಳು ಕ್ರಿಯಾಯೋಜನೆ ರೂಪಿಸುವಲ್ಲಿ ನಿರತವಾಗಿವೆ.

ಕೃಷಿಗೆ ಸಂಬಂಧಪಟ್ಟಂತೆ ಯಾವ ರೀತಿ ಕೆಲಸಗಳು ಮತ್ತು ಯೋಜನೆಗಳು ರೂಪಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂಬುದು ಇಲಾಖೆ ಚಿಂತನೆ ನಡೆಸಿದೆ. ಅಲ್ಲದೆ ತೋಟಗಾರಿಕೆ ಇಲಾಖೆ ಸಹ ಅನ್ನದಾತರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಿಯಾಯೋಜನೆ ರೂಪಿಸಿ ಮೇಲಧಿಕಾರಿಗಳಿಗೆ ಸಲ್ಲಿಸಲು ಸಿದ್ಧತೆ ನಡೆಯುತ್ತಿದೆ.

ಪಶು ಇಲಾಖೆ ಜಾನುವಾರುಗಳನ್ನು ಯಾವ ರೀತಿಯಿಂದ ನಿಯಂತ್ರಿಸಬೇಕು. ಯಾವ ಲಸಿಕೆ ತರಿಸಿಕೊಳ್ಳಬೇಕು. ಬಂದಿರುವ ಅನುದಾನದಲ್ಲಿ ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು. ಹೀಗೆ ಲೆಕ್ಕಾಚಾರದಲ್ಲಿ ನಿರತವಾಗಿದ್ದು, ಈ ಇಲಾಖೆ ಅಧಿಕಾರಿಗಳು ಸಹ ಕ್ರಿಯಾ ಯೋಜನೆ ರೂಪಿಸಲು ಈಗಾಗಲೆ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಎಪಿಎಂಸಿ ಇಲಾಖೆ ಮಾರುಕಟ್ಟೆಯಲ್ಲಿ ಯಾವ ರೀತಿಯಿಂದ ಬದಲಾವಣೆ ತರಬೇಕು, ಆಧುನಿಕ ತಂತ್ರಜ್ಞಾನ ಇನ್ನಷ್ಟು ಅಳವಡಿಸಿಕೊಳ್ಳಲು ಹೇಗೆ ಸಾಧ್ಯ ಎಂಬುದರ ಕುರಿತು ಈಗಾಗಲೇ ಅಧಿಕಾರಿಗಳು ಪ್ರಾಥಮಿಕ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಇದಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿ ಕ್ರಿಯಾ ಯೋಜನೆ ತಯಾರಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.

ನಾಲ್ಕು ಇಲಾಖೆ ಸೇರಿ ಒಟ್ಟಿಗೆ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ, ಒಂದೊಂದು ಇಲಾಖೆಗೆ ಇಂತಿಷ್ಟು ಹಣ ಎಂಬುದರ ಕುರಿತಂತೆ ಮಾಹಿತಿ ನೀಡಿಲ್ಲ. ಆಯಾ ಇಲಾಖೆಗಳು ಕ್ರಿಯಾ ಯೋಜನೆ ರೂಪಿಸಿ ಕೇಂದ್ರಕ್ಕೆ ಸಲ್ಲಿಸಿದಾಗ ಅನುದಾನ ಹಂಚಿಕೆ ಮಾಡಲಾಗುತ್ತದೆ.

ಸರ್ವ ಕ್ಷೇತ್ರದಲ್ಲಿ ಜಿಲ್ಲೆ ತೀರಾ ಹಿಂದುಳಿದಿದೆ. ಹೀಗಾಗಿಯೇ ಇದನ್ನು ಆಕಾಂಕ್ಷೆ ಜಿಲ್ಲೆಗಳ ಪಟ್ಟಿಗೆ ಕೇಂದ್ರ ಸರಕಾರ ಸೇರ್ಪಡೆ ಮಾಡಿದೆ. ಇದನ್ನು ಅನುದಾನ ಸಹ ಭರಪೂರ ನೀಡಬೇಕಿದೆ. ಒಂದು ವೇಳೆ ನಿರ್ಲಕ್ಷ ್ಯ ಮಾಡಿದರೆ ಪ್ರಗತಿ ಹೊಂದುವುದು ಕಠಿಣ ಎನಿಸುತ್ತದೆ. ಹೀಗಾಗಿ ಮುಖ್ಯವಾಹಿನಿಯಿಂದ ಜಿಲ್ಲೆ ತೀರಾ ಹಿಂದುಳಿಯುವ ಸಾಧ್ಯತೆ ಹೆಚ್ಚಳವಾಗುತ್ತದೆ.

ನಾಲ್ಕು ಇಲಾಖೆ ಸೇರಿ ಕೇಂದ್ರ ಸರಕಾರ 3 ಕೋಟಿ ರೂ. ಅನುದಾನ ನೀಡಿದೆ. ಇದಕ್ಕೆ ಸಂಬಂಧಪಟ್ಟಂತೆ ಇದೀಗ ಕ್ರಿಯಾ ಯೋಜನೆ ರೂಪಿಸುತ್ತಿದ್ದು, ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುವುದು.

- ದೇವಿಕಾ ಆರ್‌., ಜಂಟಿ ನಿರ್ದೇಶಕಿ ಕೃಷಿ ಇಲಾಖೆ, ಯಾದಗಿರಿ.

ಪ್ರಗತಿಗಾಗಿ ಕೇಂದ್ರ ಸರಕಾರ ಅನುದಾನ ನೀಡಿದೆ. ಹೀಗಾಗಿ ಇದನ್ನು ಜಿಲ್ಲಾಡಳಿತ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಪ್ರಗತಿಗೆ ಬಳಸಬೇಕು. ಇದರಿಂದ ಇನ್ನೂ ಕೇಂದ್ರ ಹೆಚ್ಚಿಗೆ ಅನುದಾನ ನೀಡಬಹುದು.

- ಬಸವರಾಜ ಪಾಟೀಲ್‌, ನಗರ ನಿವಾಸಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ