ಆ್ಯಪ್ನಗರ

58 ಕ್ವಿಂಟಲ್‌ ಅಕ್ಕಿ,ವಾಹನ ಜಪ್ತಿ

ತಾಲೂಕಿನ ಚಿತಲಿ ಬಸ್‌ ಕ್ರಾಸ್‌ ಹತ್ತಿರ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟಕ್ಕಾಗಿ ನೆರೆಯ ಮಹಾರಾಷ್ಟ್ರಕ್ಕೆ ಕೊಂಡೊಯ್ಯುತ್ತಿದ್ದಾಗ ಮಂಗಳವಾರ ಪೊಲೀಸರು ದಾಳಿ ನಡೆಸಿ ಅಕ್ಕಿ ಸಾಗಿಸುತ್ತಿದ್ದ ವಾಹನ ಮತ್ತು 1.44 ಲಕ್ಷ ರೂ. ಮೌಲ್ಯದ 58 ಕ್ವಿಂಟಲ್‌ ಅಕ್ಕಿ ಜಪ್ತಿ ಮಾಡಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Vijaya Karnataka 20 Jun 2019, 5:10 pm
ಆಳಂದ :ತಾಲೂಕಿನ ಚಿತಲಿ ಬಸ್‌ ಕ್ರಾಸ್‌ ಹತ್ತಿರ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟಕ್ಕಾಗಿ ನೆರೆಯ ಮಹಾರಾಷ್ಟ್ರಕ್ಕೆ ಕೊಂಡೊಯ್ಯುತ್ತಿದ್ದಾಗ ಮಂಗಳವಾರ ಪೊಲೀಸರು ದಾಳಿ ನಡೆಸಿ ಅಕ್ಕಿ ಸಾಗಿಸುತ್ತಿದ್ದ ವಾಹನ ಮತ್ತು 1.44 ಲಕ್ಷ ರೂ. ಮೌಲ್ಯದ 58 ಕ್ವಿಂಟಲ್‌ ಅಕ್ಕಿ ಜಪ್ತಿ ಮಾಡಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Vijaya Karnataka Web 58 quintal rice vehicle lift
58 ಕ್ವಿಂಟಲ್‌ ಅಕ್ಕಿ,ವಾಹನ ಜಪ್ತಿ


ಮಣಿಕಂಠ ರಾಠೋಡ ಗುರುಮಠಕಲ್‌, ಇಲಿಯಾಸ್‌ ಹಿರೋಳಿ ಬಂಧಿತ ಆರೋಪಿಗಳು. ಅಕ್ರಮದಲ್ಲಿ ತೊಡಗಿದ್ದ ಚಂದ್ರಕಾಂತ ಜನಾರ್ಧನ ಮಣೂರೆ, ಖಲೀಲ ಹಿರೋಳಿ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ. ಪಿಡಿತರ ಆಹಾರ ಧಾನ್ಯ ನೀಡಿದ ಫಲಾನುಭವಿಗಳಿಂದ ಗ್ರಾಮ ಮತ್ತು ವಾರದ ಸಂತೆಗಳಲ್ಲಿ ಮಾರಾಟಕ್ಕಾಗಿ ಬಂದ ಅಕ್ಕಿಯನ್ನು ಅಗ್ಗದ ದರದಲ್ಲಿ ಖರೀದಿಸಿ ಮಹಾರಾಷ್ಟ್ರದ ಉಮರ್ಗಾ ಕಡೆಗೆ ಸಾಗಾಣಿಕೆ ಮಾಡುತ್ತಿದ್ದಾಗ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಉಗ್ರಾಣ ಅಧಿಕಾರಿ ಪ್ರವೀಣಕುಮಾರ ದೂರಿನ್ವಯ ಆಳಂದ ಪೊಲೀ ಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ