ಆ್ಯಪ್ನಗರ

ಹೆತ್ತ ಕಂದಮ್ಮಗಳಿಗೆ ವಿಷ ಕೊಟ್ಟು ಸಾಯಿಸಿದ ತಂದೆ

ಹೆತ್ತ ತಂದೆಯೇ ತನ್ನ ಎರಡು ಹೆಣ್ಣು ಮಕ್ಕಳಿಗೆ ವಿಷ ಉಣಿಸಿ ತಾನೂ ರೈಲ್ವೆ ಹಳಿಗೆ ತಲೆಕೊಟ್ಟು ಸಾವನ್ನಪ್ಪಿದ ದಾರುಣ ಘಟನೆ ಶುಕ್ರವಾರ ಬೆಳಗ್ಗೆ ತಾಲೂಕಿನ ಭೈರಂಪಳ್ಳಿ ತಾಂಡಾದಲ್ಲಿನಡೆದಿದೆ.

Vijaya Karnataka 4 Jan 2020, 5:00 am
ಚಿಂಚೋಳಿ:ಹೆತ್ತ ತಂದೆಯೇ ತನ್ನ ಎರಡು ಹೆಣ್ಣು ಮಕ್ಕಳಿಗೆ ವಿಷ ಉಣಿಸಿ ತಾನೂ ರೈಲ್ವೆ ಹಳಿಗೆ ತಲೆಕೊಟ್ಟು ಸಾವನ್ನಪ್ಪಿದ ದಾರುಣ ಘಟನೆ ಶುಕ್ರವಾರ ಬೆಳಗ್ಗೆ ತಾಲೂಕಿನ ಭೈರಂಪಳ್ಳಿ ತಾಂಡಾದಲ್ಲಿನಡೆದಿದೆ.
Vijaya Karnataka Web a father who poisoned his children
ಹೆತ್ತ ಕಂದಮ್ಮಗಳಿಗೆ ವಿಷ ಕೊಟ್ಟು ಸಾಯಿಸಿದ ತಂದೆ

ರೋಹಿತಾ, ಪವಿತಾ


ಸಂಜೀವಕುಮಾರ ರಾಠೋಡ ಎಂಬಾತನೇ ಮೃತ ತಂದೆ. ರೋಹಿತಾ (4) ಪವಿತಾ (2) ಮೃತ ಮಕ್ಕಳು. ಮಕ್ಕಳಿಗೆ ಆಹಾರದಲ್ಲಿವಿಷ ಬೆರೆಸಿ ಕೊಲೆ ಮಾಡಿದ್ದಾನೆ. ಶುಕ್ರವಾರ ಬೆಳಗ್ಗೆ ತಾಂಡೂರ ಹತ್ತಿರ ರೈಲ್ವೆ ಹಳಿಗೆ ತೆಲೆ ಕೊಟ್ಟು ಸಾವಿಗೆ ಶರಣಾಗಿದ್ದಾನೆ. ತನ್ನ ಮಕ್ಕಳಿಗೆ ವಿಷ ಉಣಿಸಿರುವುದಾಗಿ ಈತ ತನ್ನ ಸಂಬಂಧಿಕರಿಗೆ ಮತ್ತು ಗೆಳೆಯರಿಗೆ ಮೊಬೈಲ್‌ನಲ್ಲಿಮಾಹಿತಿ ರವಾನಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಘಟನೆಗೆ ನಿಖರ ಕಾರಣ ಗೊತ್ತಿಲ್ಲ. ಆದರೆ ಸಂಜೀವಕುಮಾರ ಮದ್ಯ ಸೇವಿಸುತ್ತಿದ್ದ. ಹೆಂಡತಿ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಆಗಾಗ ಜಗಳ ಆಡುತ್ತಿದ್ದ. ಇದೇ ಸಿಟ್ಟಿಗಾಗಿ ಈ ಕೃತ್ಯ ಎಸಗಿರಬಹುದು ಎಂದು ಮೂಲಗಳು ಹೇಳಿವೆ.

ಪತ್ನಿಗೆ ಹಲ್ಲೆಮಾಡಿದ್ದರಿಂದ ಅವಳು ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಿದ್ದರು. ಇದೇ ಸಂದರ್ಭದಲ್ಲಿತನ್ನ ಮಕ್ಕಳಿಗೆ ವಿಷ ಉಣಿಸಿ ರಾತ್ರೋರಾತ್ರಿ ತಾಂಡಾದಿಂದ ಹೊರಟು ಪಕ್ಕದ ತೆÇಂಗಾಣದ ತಾಂಡೂರಿನಲ್ಲಿರೈಲ್ವೆ ಹಳೆಗೆ ತೆಲೆ ಕೊಟ್ಟಿ ಸಾವಿಗೆ ಶರಣಾಗಿದ್ದಾನೆ.

ಎಸ್‌ಪಿ ಎಸ್ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ. ತಾಲೂಕಿನ ಮಿರಿಯಾಣ ಪೋಲಿಸ್‌ ಠಾಣೆಯಲ್ಲಿಪ್ರಕರಣ ದಾಖಲಿಸಲು ಸೂಚಿಸಿದರು.

ಡಿವೈಎಸ್ಪಿ ಕೆ.ಬಸವರಾಜ, ಸಿಪಿಐ ಮಹಾಂತೇಶ ಪಾಟೀಲ, ಪಿಎಸ್‌ ಐ ಸಂತೋಷ ರಾಠೋಡ, ಪೋಲಿಸ್‌ ಸಿಬ್ಬಂದಿ ಮಂಜು ಇದ್ದರು.

ಚಿಂಚೋಳಿಯ ಭೈರಂಪಳ್ಳಿ ತಾಂಡಾದಲ್ಲಿಇಬ್ಬರು ಮಕ್ಕಳಿಗೆ ತಂದೆ ಸಂಜೀವಕುಮಾರ ವಿಷ ಕೊಟ್ಟು ಸಾಯಿಸಿದ್ದಾನೆ. ಘಟನೆ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ.

-ಯಡಾ ಮಾರ್ಟಿನ್‌ ಮಾರ್ಬ್‌ನ್ಯಾಂಗ್‌, ಎಸ್‌ಪಿ, ಕಲಬುರಗಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ