ಆ್ಯಪ್ನಗರ

ತವರಿನಲ್ಲಿದ್ದ ಪತ್ನಿಯನ್ನು ಕಾಣಲು ಹೊರಟ ಪತಿ ರಸ್ತೆ ಮಧ್ಯೆಯೇ ಅಸುನೀಗಿದ ಹೃದಯ ವಿದ್ರಾವಕ ಘಟನೆಯಿದು!

ಮದುವೆಯಾದ ನಂತರ ಹತ್ತಾರು ಕನಸುಗಳನ್ನು ಹೊತ್ತು ಸುಖ ಸಂಸಾರದ ಉಯ್ಯಾಲೆಯಲ್ಲಿ ತೇಲುತ್ತಿದ್ದರು. ಅವರ ಸಂಗಾತಿಯೂ ಹಾಗೆಯೇ, ನೀನಲ್ಲದೇ ನನಗೆ ಬೇರೇನಿಲ್ಲ ಎಂಬಷ್ಟೇ ಪ್ರೀತಿಯಿಂದ ತನ್ನ ಗಂಡನನ್ನು ನೋಡಿಕೊಳ್ಳುತ್ತಿದ್ದರು. ಹೀಗಿರೋವಾಗ ಕೆಲ ದಿನಗಳ ಹಿಂದಷ್ಟೇ ಮಲ್ಲಿಕಾರ್ಜುನ ಈರಣ್ಣ ಅವರ ಪತ್ನಿ ಮನೆಯವರ ನೆನಪಾಗಿ ತವರೂರಿಗೆ ಹೊರಟಿದ್ದರು. ಅತ್ತ ಪತ್ನಿ ತನ್ನ ತಾಯಿ ಮನೆಗೆ ಹೊರಟಿದ್ದರೆ ಇತ್ತ ಮಲ್ಲಿಕಾರ್ಜುನ ಮಾತ್ರ ತನ್ನ ಹೆಂಡತಿಯನ್ನು ಬಿಟ್ಟಿರಲಾರದೆ ವಿರಹ ವೇದನೆ ಅನುಭವಿಸಲು ಶುರು ಮಾಡಿದ್ದರು.

Vijaya Karnataka Web 22 Oct 2021, 1:24 pm
ಕಲಬುರಗಿ: ಇವರ ಹೆಸರು ಮಲ್ಲಿಕಾರ್ಜುನ ಈರಣ್ಣ ಬಿಜಾಪುರ. ಮೂಲತಃ ಕಲಬುರಗಿ ಜಿಲ್ಲೆಯವರಾದ ಮಲ್ಲಿಕಾರ್ಜುನ ಈರಣ್ಣ, ಕೇವಲ ಹತ್ತು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ನೂರಾರು ಆಸೆಗಳನ್ನು ಹೊತ್ತು ತನ್ನ ಸಂಗಾತಿಯೊಂದಿಗೆ ಹೊಸ ಬಾಳ್ವೆಯ ಕನಸು ಕಟ್ಟಿದ್ದ ಈರಣ್ಣ, ಇದೀಗ ಇದ್ದಕ್ಕಿದ್ದ ಹಾಗೆ ಉಸಿರು ಚೆಲ್ಲಿದ್ದಾರೆ. ಜೀವನದ ಕಡೇತನಕ ನೀನೇ ನನ್ನ ಹೆಜ್ಜೆಗೆ ಹೆಜ್ಜೆಯಾಗಿರು ಅಂತಾ ಮಾತು ಕೊಟ್ಟಿದ್ದ ತನ್ನ ಮುದ್ದಿನ ಪತ್ನಿಯನ್ನು ಅರ್ಧ ದಾರಿಯಲ್ಲೇ ಬಿಟ್ಟು ಹೊರಟು ಹೋಗಿದ್ದಾರೆ. ಇವರ ಪ್ರೀತಿಗೆ ಅದ್ಯಾರ ಕಣ್ಣು ಬಿತ್ತೋ ಏನೋ, ಅದೂ ತವರಿನಲ್ಲಿದ್ದ ತನ್ನ ಸಂಗಾತಿಯನ್ನು ನೋಡಲೆಂದು ಹಂಬಲಿಸಿ ಹೊರಟಾಗಲೇ ಮಲ್ಲಿಕಾರ್ಜುನ ಈರಣ್ಣ ಅವರ ದೇಹ ಅಪಘಾತವೊಂದರಲ್ಲಿ ತನ್ನ ಉಸಿರಾಟವನ್ನೇ ನಿಲ್ಲಿಸಿ ಬಿಟ್ಟಿದೆ.
Vijaya Karnataka Web accident


ಅಂದ್ಹಾಗೆ ಮಲ್ಲಿಕಾರ್ಜುನ ಈರಣ್ಣ ಬಿಜಾಪುರ ಅವರಿಗೆ ಈಗ ಕೇವಲ 32 ವರ್ಷವಷ್ಟೇ. ಹತ್ತು ತಿಂಗಳ ಹಿಂದಷ್ಟೇ ಯಡ್ರಾಮಿ ತಾಲೂಕಿನ ಸುಂಬಡ ಗ್ರಾಮದ ಯುವತಿಯನ್ನು ಮನಸಾರೆ ಒಪ್ಪಿ ವಿವಾಹವಾಗಿದ್ದರು. ಮದುವೆಯಾದ ನಂತರ ಹತ್ತಾರು ಕನಸುಗಳನ್ನು ಹೊತ್ತು ಸುಖ ಸಂಸಾರದ ಉಯ್ಯಾಲೆಯಲ್ಲಿ ತೇಲುತ್ತಿದ್ದರು. ಅವರ ಸಂಗಾತಿಯೂ ಹಾಗೆಯೇ, ನೀನಲ್ಲದೇ ನನಗೆ ಬೇರೇನಿಲ್ಲ ಎಂಬಷ್ಟೇ ಪ್ರೀತಿಯಿಂದ ತನ್ನ ಗಂಡನನ್ನು ನೋಡಿಕೊಳ್ಳುತ್ತಿದ್ದರು. ಹೀಗಿರೋವಾಗ ಕೆಲ ದಿನಗಳ ಹಿಂದಷ್ಟೇ ಮಲ್ಲಿಕಾರ್ಜುನ ಈರಣ್ಣ ಅವರ ಪತ್ನಿ ಮನೆಯವರ ನೆನಪಾಗಿ ತವರೂರಿಗೆ ಹೊರಟಿದ್ದರು. ಅತ್ತ ಪತ್ನಿ ತನ್ನ ತಾಯಿ ಮನೆಗೆ ಹೊರಟಿದ್ದರೆ ಇತ್ತ ಮಲ್ಲಿಕಾರ್ಜುನ ಮಾತ್ರ ತನ್ನ ಹೆಂಡತಿಯನ್ನು ಬಿಟ್ಟಿರಲಾರದೆ ವಿರಹ ವೇದನೆ ಅನುಭವಿಸಲು ಶುರು ಮಾಡಿದ್ದರು.
2 ಮಕ್ಕಳ ತಾಯಿಗೆ ಅಕ್ಕನ ಮಗನ ಜತೆ ಪ್ರೇಮ ಸಂಬಂಧ; ಬ್ಲ್ಯಾಕ್​ಮೇಲ್ ಮಾಡಿದ್ದಾಕೆಯನ್ನು ಕೊಲೆಗೈದ ಹುಡುಗ!
ಹೇಗೋ ಒಂದಷ್ಟು ದಿನ ಕಳೆದ ಮಲ್ಲಿಕಾರ್ಜುನ್, ಇನ್ನು ತನ್ನ ಹೆಂಡತಿಯನ್ನು ಬಿಟ್ಟಿರಲು ಸಾಧ್ಯವಿಲ್ಲ, ಆಕೆಯನ್ನು ತನ್ನ ಮನೆಗೆ ಕರೆತರಬೇಕು. ಆ ನೆಪದಲ್ಲಾದರೂ ಆಕೆಯನ್ನು ಕಣ್ತುಂಬ ನೋಡಬೇಕು ಎಂಬ ಹಂಬಲದಿಂದ ಗುರುವಾರ ರಾತ್ರಿ ತನ್ನ ಪತ್ನಿಯ ಮನೆಗೆ ಹೊರಟಿದ್ದರು.ಆದರೆ ಅದ್ಯಾವ ಘಳಿಗೆಯಲ್ಲಿ ಹೊರಟಿದ್ದರೋ, ಇಲ್ಲ ಈ ಪತಿ ಪತ್ನಿಯ ಪ್ರೀತಿ ಮೇಲೆ ಅದೆಂತಹ ಕೆಟ್ಟ ಕಣ್ಣು ಬಿತ್ತೋ ಏನೋ, ತನ್ನ ಪತ್ನಿಯನ್ನು ನೋಡಲು ಹೊರಟಾಗಲೇ ಮಲ್ಲಿಕಾರ್ಜುನ್ ಅಪಘಾತದಲ್ಲಿ ತೀರಿಹೋಗಿದ್ದಾರೆ. ತನ್ನ ಪತ್ನಿಯ ತವರೂರಾದ ಯಡ್ರಾಮಿ ತಾಲ್ಲೂಕಿನ ಸುಂಬಡ ಗ್ರಾಮದ ಬಳಿಯೇ ಅಪಘಾತ ಸಂಭವಿಸಿದ್ದು, ತಿರುವಿನಲ್ಲಿ ಕಾರು ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಲ್ಲಿಕಾರ್ಜುನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನ ವೇಗ ಎಷ್ಟಿತ್ತೆಂದರೆ, ಡಿಕ್ಕಿ ಹೊಡೆದ ರಭಸಕ್ಕೆ ಕಂಬ ಮುರಿದು ಕಾರು ಕಂಬದ ಮೇಲೆ ಹತ್ತಿ ನಿಂತಿದೆ. ಈ ವಿಷಯ ಬೆಳಗ್ಗೆ ಸ್ಥಳೀಯರಿಗೆ ತಿಳಿದು ಅವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
‘ಕಬ್ಬು ಕೊಡುತ್ತೇನೆ’ ಎಂದು ಪುಸಲಾಯಿಸಿ ವಿಶೇಷಚೇತನ ಯುವಕನ ಮೇಲೆ ಅತ್ಯಾಚಾರ ಎಸಗಿದ ಕಾಮುಕ!
ಇತ್ತ ಮಲ್ಲಿಕಾರ್ಜುನ್ ಅವರ ಪತ್ನಿಗೆ ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸಿಡಿಲೇ ಬಂದೆರಗಿದಂತಾಗಿದೆ. ಕನಸಿನಲ್ಲೂ ಊಹಿಸಿರದ ಹೃದಯ ವಿದ್ರಾವಕ ಘಟನೆ ಆಕೆಯ ಬಾಳಲ್ಲಿ ನಡೆದು ಹೋಗಿದೆ. ಇಬ್ಬರ ಮನೆಯಲ್ಲೂ ಸ್ಮಶಾನ ಮೌನ ಆವರಿಸಿದೆ. ಮಲ್ಲಿಕಾರ್ಜುನ್ ಏನೋ ಅಪಘಾತದಲ್ಲಿ ಪ್ರಾಣ ಚೆಲ್ಲಿದರು. ಆದರೆ ಆತನನ್ನೇ ನಂಬಿದ ಪತ್ನಿಯ ಬಾಳು ಕತ್ತಲ ಕೋಣೆಯಂತಾಗಿದೆ. ಆಕೆಗೆ ಸಾಂತ್ವನ ನೀಡಲು ಪದಗಳ ಕೊರತೆ ಕಾಣಿಸಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ