ಆ್ಯಪ್ನಗರ

ಕಲಬುರಗಿ: ಮೈಮೇಲೆ ಮರ ಬಿದ್ದು ಸ್ಥಳದಲ್ಲೇ ವ್ಯಕ್ತಿಯ ದುರ್ಮರಣ

ಕಲಬುರಗಿ ಜಿಲ್ಲೆ ಜೇವರ್ಗಿ ರಾಷ್ಟ್ರೀಯ ಹೆದ್ದಾರಿ 150ರ ಪಕ್ಕದಲ್ಲಿ ಬರುವ ಕೇಂದ್ರ ಕಾರಾಗೃಹ ಕ್ವಾರ್ಟಸ್ ನಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Vijaya Karnataka Web 3 Jun 2020, 9:47 am
ಕಲಬುರಗಿ: ಕಲಬುರಗಿ ಜಿಲ್ಲೆ ಜೇವರ್ಗಿ ರಾಷ್ಟ್ರೀಯ ಹೆದ್ದಾರಿ 150ರ ಪಕ್ಕದಲ್ಲಿ ಬರುವ ಕೇಂದ್ರ ಕಾರಾಗೃಹ ಕ್ವಾರ್ಟಸ್ ನಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ಸುಮಾರು 5.30ಕ್ಕೆ ಸಂಭವಿಸಿದೆ.
Vijaya Karnataka Web kalaburgi


ಮೃತ ವ್ಯಕ್ತಿಯನ್ನು ಗೋವಿಂದ ಚವ್ಹಾಣ್ (41) ಎಂದು ಗುರುತಿಸಲಾಗಿದೆ. ಕಾರಾಗೃಹದ ಡಿ ಗ್ರೂಪ್ ಮಹಿಳಾ ಸಿಬ್ಬಂದಿ ಪಾರುಬಾಯಿ ಅವರ ಪತಿ ಮೃತ ಗೋವಿಂದ ಚವ್ಹಾಣ್.

ಬೆಳಗ್ಗೆ 5.30ಕ್ಕೆ ಕಸ ಚೆಲ್ಲಲು ಮನೆ ಹೊರಗೆ ಬಂದಾಗ ಏಕಾಏಕಿ ಮರ ಬುಡಸಮೇತ ಉರುಳಿದೆ. ಹೀಗಾಗಿ ಗೋವಿಂದ ಮರದ ಅಡಿ ಸಿಲುಕಿದ್ದಲ್ಲದೆ, ಅತಿಯಾದ ರಕ್ತಸ್ರಾವ ಉಂಟಾಗಿದೆ. ಹೀಗಾಗಿ ಕೆಲ ನಿಮಿಷಗಳಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ