ಆ್ಯಪ್ನಗರ

ಕಲಬುರಗಿ: ಪೊಲೀಸರ ಮೇಲೆ ದಾಳಿ ನಡೆಸಿ ಎಸ್ಕೇಪ್‌ ಆಗಲು ಯತ್ನಿಸಿದ ಆರೋಪಿ ಮೇಲೆ ಶೂಟೌಟ್‌!

ತನಿಖೆ ಆರಂಭಿಸಿದ ಪೊಲೀಸರು ಕೆಲವೊಂದು ಸಾಕ್ಷ್ಯಗಳು ದೊರೆತ ಹಿನ್ನೆಲೆ ಮೊಬಿನ್‌, ಮಹ್ಮದ್ ಝಕ್ರಿಯಾ (22) ಹಾಗೂ ಮಹ್ಮದ್ ಸಾಜಿದ್ ಖಾನ್ ಅಲಿಯಾಸ್ ಸಾದಿಕ್ (22) ಎಂಬವರನ್ನು ಬಂಧಿಸಿದ್ದರು. ವಿಚಾರಣೆ ಕೂಡ ನಡೆಸಿದ್ರು. ಸ್ಥಳಕ್ಕೆ ಮಹಜರು ನಡೆಸಲು ಬುಧವಾರ ಮುಂಜಾನೆ ಕರೆದುಕೊಂಡು ಹೋಗಿದ್ದಾರೆ. ಆದರೆ ಈ ವೇಳೆ, ಮೊಬಿನ್‌ ಪೊಲೀಸ್‌ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

Vijaya Karnataka Web 7 Oct 2020, 9:57 am
ಕಲಬುರಗಿ: ನಗರದ ತಾಜ್ ಸುಲ್ತಾನ್ ಪುರ ಹೊರವಲಯದಲ್ಲಿ ನಸುಕಿನಲ್ಲಿಯೇ ಪೊಲೀಸ್ ಶೂಟೌಟ್ ನಡೆದಿದೆ. ಪೊಲೀಸ್ ವಶದಿಂದ ತಪ್ಪಿಸಿಕೊಂಡು ಉಲ್ಟಾ ಹಲ್ಲೆಗೆ ಯತ್ನಿಸಿದ ಮೊಬಿನ್ ಅಲಿಯಾಸ್ ಅಬ್ದುಲ್ ರೆಹಮಾನ್ (23) ಗುಂಡೇಟು ತಿಂದು ಆಸ್ಪತ್ರೆ ಸೇರಿದ ಆರೋಪಿ.
Vijaya Karnataka Web Mv_SAB4t


ಘಟನೆ ಹಿನ್ನೆಲೆ!
ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕನೊಬ್ಬ ತಾಜ್ ಸುಲ್ತಾನ್ ಪುರದ ಬಳಿ ತಾನು ಬಾಡಿಗೆಗೆ ಇದ್ದ ಮನೆಯ ಬಳಿ ಇಳಿ ಸಂಜೆಯ ಹೊತ್ತಲ್ಲಿ ಬಹಿರ್ದೆಸೆಗೆ ತೆರಳಿದ್ದ. ಈ ವೇಳೆ ದುಷ್ಕರ್ಮಿಗಳು ಆತನ ಬಳಿಯಿದ್ದ ಮೊಬೈಲ್ ಕಸಿದುಕೊಂಡು ಹೋಗಲು ಯತ್ನಿಸಿದ್ದರು.

ಆತ ಸುಲಭಕ್ಕೆ ಮೊಬೈಲ್ ನೀಡದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು. ಇದರಿಂದ ಗಂಭೀರ ಗಾಯಗೊಂಡಿದ್ದ ವಲಸೆ ಕಾರ್ಮಿಕ ಮೂರು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಹಿನ್ನೆಲೆ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಲಬುರಗಿಯಲ್ಲಿ ಅಗ್ನಿಶಾಮಕ ದಳ ಅಧಿಕಾರಿ ಎಸಿಬಿ ಬಲೆಗೆ, 75 ಸಾವಿರ ರೂಪಾಯಿ ವಶ

ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಕೆಲವೊಂದು ಸಾಕ್ಷ್ಯಗಳು ದೊರೆತ ಹಿನ್ನೆಲೆ ಮೊಬಿನ್‌, ಮಹ್ಮದ್ ಝಕ್ರಿಯಾ (22) ಹಾಗೂ ಮಹ್ಮದ್ ಸಾಜಿದ್ ಖಾನ್ ಅಲಿಯಾಸ್ ಸಾದಿಕ್ (22) ಎಂಬವರನ್ನು ಬಂಧಿಸಿದ್ದರು. ವಿಚಾರಣೆ ಕೂಡ ನಡೆಸಿದ್ರು. ಸ್ಥಳಕ್ಕೆ ಮಹಜರು ನಡೆಸಲು ಬುಧವಾರ ಮುಂಜಾನೆ ಕರೆದುಕೊಂಡು ಹೋಗಿದ್ದಾರೆ. ಆದರೆ ಈ ವೇಳೆ, ಮೊಬಿನ್‌ ಪೊಲೀಸ್‌ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಅಲ್ಲದೆ ಪೊಲೀಸರಿಗೆ ದಾಳಿ ನಡೆಸಲು ಮುಂದಾಗಿದ್ದಾನೆ. ಹೀಗಾಗಿ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಈ ವೇಳೆ ಆರೋಪಿಯ ಮೊಣಕಾಲಿಗೆ ಗುಂಡು ತಗುಲಿದೆ. ಘಟನೆಯಲ್ಲಿ ಓರ್ವ ಪೇದೆ ಗಾಯಗೊಂಡಿದ್ದು, ಅವರಿಗೂ ಚಿಕಿತ್ಸೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ