ಆ್ಯಪ್ನಗರ

ಅಂಗಲಾಚಿದರೂ ಬರದ ಆಂಬ್ಯುಲೆನ್ಸ್! ಕಲಬುರಗಿಯಲ್ಲಿ ಸೋಂಕಿತ ನಿವೃತ್ತ ಪೇದೆ ಸಾವು

ತನ್ನನ್ನು ಕೋವಿಡ್ ಆಸ್ಪತ್ರೆಗೆ ಕರೆದೊಯ್ದು ಭರ್ತಿ ಮಾಡುವಂತೆ ಎಷ್ಟೇ ಬಾರಿ ಅಂಗಲಾಚಿದರೂ ಆಂಬ್ಯುಲೆನ್ಸ್ ಬಾರದ ಕಾರಣಕ್ಕೆ ನಿವೃತ್ತ ಪೇದೆಯೊಬ್ಬರು ಮೃತಪಟ್ಟಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

Vijaya Karnataka Web 27 Jul 2020, 2:18 pm
ಕಲಬುರಗಿ: ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ತನ್ನನ್ನು ಕೋವಿಡ್ ಆಸ್ಪತ್ರೆಗೆ ಕರೆದೊಯ್ದು ಭರ್ತಿ ಮಾಡುವಂತೆ ಎಷ್ಟೇ ಬಾರಿ ಅಂಗಲಾಚಿದರೂ ಆಂಬ್ಯುಲೆನ್ಸ್ ಬಾರದ ಕಾರಣಕ್ಕೆ ನಿವೃತ್ತ ಪೇದೆಯೊಬ್ಬರು ಸಾವನ್ನಪ್ಪಿದ ಘಟನೆ ನಗರದ ಆಳಂದ ಚೆಕ್ ಪೋಸ್ಟ್ ಬಳಿಯ ಸಿದ್ಧರೇಶ್ವರ ನಗರದಲ್ಲಿ ಭಾನುವಾರ ನಡೆದಿದೆ.
Vijaya Karnataka Web kalaburagi
ಮೃತ ನಿವೃತ್ತ ಪೇದೆ ಸೋಮಣ್ಣ ಕಾಳೆ


ಸೋಮಣ್ಣ ಕಾಳೆ(65) ಮೃತಪಟ್ಟ ವ್ಯಕ್ತಿ. ನಾಲ್ಕು ದಿನಗಳ ಹಿಂದೆ ಕಾಳೆ ಅವರಿಗೆ ಸೋಂಕಿರುವುದಾಗಿ ವರದಿ ಬಂದಿತ್ತು. ವರದಿ ಬಂದಾಗಿನಿಂದಲೂ ಕುಟುಂಬಸ್ಥರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಬ್ಬಾರ್ ಅವರಿಗೆ ಫೋನ್ ಮಾಡಿದ್ದರು. ಆಂಬ್ಯುಲೆನ್ಸ್ ಕಳುಹಿಸಿಕೊಡುವುದಾಗಿ ಡಿಎಚ್ಒ ಕೇವಲ ಭರವಸೆ ನೀಡುತ್ತಿದ್ದರೇ ಹೊರತು; ಆಂಬ್ಯುಲೆನ್ಸ್ ಕಳಿಸಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಆಳಂದ ಮಾಜಿ ಶಾಸಕ ಬಿ.ಆರ್.ಪಾಟೀಲ್ ಎದುರು ತಮ್ಮ ಅಳಲು ತೋಡಿಕೊಂಡಿದ್ದರು. ಕೊನೆಗೆ ಬಿ..ಆರ್. ಪಾಟೀಲ್ ಡಿಎಚ್ಒಗೆ ಕರೆ ಮಾಡಿ ಆ್ಯಂಬುಲೆನ್ಸ್ ಕಳಿಸುವಂತೆ ಒತ್ತಡ ಹಾಕಿದ್ದರು. ಪಾಟೀಲ್ ಅವರ ಒತ್ತಡಕ್ಕೆ ಮಣಿದು ನಾಲ್ಕು ದಿನಗಳ ಬಳಿಕ ಆಂಬ್ಯುಲೆನ್ಸ್ ಬಂದರೂ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲಿಯೇ ಸೋಂಕಿತ ನಿವೃತ್ತ ಪೇದೆ ಸಾವನ್ನಪ್ಪಿದ್ದಾರೆ.

ಬಿ.ಆರ್.ಪಾಟೀಲ್ ಆಕ್ರೋಶ:
ಸಕಾಲಕ್ಕೆ ಬಂದು ಸೋಂಕಿತ ನಿವೃತ್ತ ಪೇದೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೆ ಆತ ಬದುಕುಳಿಯುವ ಸಾಧ್ಯತೆ ಇತ್ತು.
ಸಹಾಯವಾಣಿಯಿಂದ ಹಿಡಿದು ಡಿ.ಎಚ್.ಒ.ವರೆಗೆ ಫೋನ್ ಮಾಡಿದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದಲೇ ಪೇದೆ ಸಾವನ್ನಪ್ಪಿದ್ದಾರೆ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ