ಆ್ಯಪ್ನಗರ

ಎಐಸಿಸಿ ಅಧ್ಯಕ್ಷ ಸ್ಥಾನ: ತಳ್ಳಿಹಾಕಿದ ಖರ್ಗೆ

ಎಐಸಿಸಿ ಅಧ್ಯಕ್ಷ ಸ್ಥಾನ ನನಗೆ ದೊರೆಯಲಿದೆ ಎನ್ನುವ ವರದಿ ಆಧಾರ ರಹಿತ ಮತ್ತು ಕೇವಲ ಊಹಾಪೋಹ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

Vijaya Karnataka 11 Jun 2019, 5:00 am
ಕಲಬುರಗಿ:ಎಐಸಿಸಿ ಅಧ್ಯಕ್ಷ ಸ್ಥಾನ ನನಗೆ ದೊರೆಯಲಿದೆ ಎನ್ನುವ ವರದಿ ಆಧಾರ ರಹಿತ ಮತ್ತು ಕೇವಲ ಊಹಾಪೋಹ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
Vijaya Karnataka Web aicc chairperson rahul gandhi is continuing kharge
ಎಐಸಿಸಿ ಅಧ್ಯಕ್ಷ ಸ್ಥಾನ: ತಳ್ಳಿಹಾಕಿದ ಖರ್ಗೆ

ಸೋಮವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾಗಿ ಮುಂದುವರಿಯುವಂತೆ ರಾಹುಲ್‌ ಗಾಂಧಿ ಅವರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಸ್ಥಾನದಲ್ಲಿ ಅವರೇ ಇರಬೇಕು ಎನ್ನುವುದು ನಮ್ಮೆಲ್ಲರ ಒಟ್ಟಾಭಿಪ್ರಾಯ. ರಾಹುಲ್‌ ನೇತೃತ್ವದಲ್ಲಿ ದೇಶದ ಕಾಂಗ್ರೆಸ್‌ ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಷ ಕ್ಕೆ ಬಲ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜಕೀಯ ಪಕ್ಷ ಗಳಲ್ಲಿ ಸೋಲು ಗೆಲುವು ಸಾಮಾನ್ಯ. ಸೋತ ನಂತರ ಪಕ್ಷ ದಲ್ಲಿ ಏನೂ ಇಲ್ಲ ಅಂತ ಅಂದುಕೊಳ್ಳುವುದು ಸರಿಯಲ್ಲ. ರಾಹುಲ್‌ ಗಾಂಧಿ ಸೋಲಾಗಿದ್ದಕ್ಕೆ ಧೈರ್ಯ ಬಿಡಬಾರದು. ನಮ್ಮ ಗುರಿ ಸಾಧಿಸುವವರೆಗೆ ಎಲ್ಲ ಪ್ರಯತ್ನ ಮಾಡಲೇಬೇಕು. ನಮ್ಮ ಪಕ್ಷ ಕ್ಕೆ ರಾಹುಲ್‌ ಇರಲೇಬೇಕೆಂದು ಮನವಿ ಮಾಡಲಾಗುತ್ತಿದೆ ಎಂದರು.

ಪ್ರಗರಿಪರ ವಿಚಾರಧಾರೆಗೆ ಕೊಡಲಿ ಪೆಟ್ಟು- ಖರ್ಗೆ

ಹಿರಿಯ ಸಾಹಿತಿ ಡಾ. ಗಿರೀಶ್‌ ಕಾರ್ನಾಡ್‌ ನಿಧನದಿಂದ ಪ್ರಗತಿಪರ ವಿಚಾರಧಾರೆಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದು ಖರ್ಗೆ ದುಃಖಿಸಿದ್ದಾರೆ.

ಜೀವನದಲ್ಲಿ ಅನೇಕ ಏರು ಪೇರು ಕಂಡಿರುವ ಗಿರೀಶ್‌ ಕಾರ್ನಾಡ್‌, ಗುಬ್ಬಿ ವೀರಣ್ಣ ನಾಟಕ ಕಂಪನಿಯಿಂದ ಹಿಡಿದು ಸಿನಿಮಾದವರೆಗೂ ಸಾಕಷ್ಟು ನಿರ್ದೇಶನ,ನಟನೆ ಮಾಡಿದ್ದಾರೆ. ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಹೆಮ್ಮೆ ಕಾರ್ನಾಡ್‌ ಅವರದ್ದಾಗಿದೆ. ಕನ್ನಡಕ್ಕೆ ತಂದು ಕೊಟ್ಟವರು ಕಾರ್ನಾಡ್‌. ಇಂತಹ ಬುದ್ಧಿವಂತ ವಿಚಾರವುಳ್ಳವರ ಸ್ಮಾರಕ ಅಥವಾ ಥೇಟರ್‌ ಅಥವಾ ಗ್ರಂಥಾಲಯವನ್ನು ರಾಜ್ಯ ಸರಕಾರ ತೆರೆಯಬೇಕು. ಈ ಕುರಿತು ರಾಜ್ಯ ಸರಕಾರಕ್ಕೆ ಮನವಿ ಮಾಡುವೆ. ಆ ಮೂಲಕ ಅವರ ತತ್ವಗಳ ಮುಂದಿನ ಜನ ಸ್ಮರಿಸುತ್ತಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ