ಆ್ಯಪ್ನಗರ

ದರೋಡೆಗೆ ಹೊಂಚು, ನಾಲ್ವರ ಬಂಧನ

ಚಿಂಚನಸೂರ-ಕಲ್ಲಹಂಗರಗಾ ರಸ್ತೆಯ ಮಾಪೂರತಾಯಿ ದೇವಾಲಯದ ಕಮಾನ್‌ ಬಳಿ ದಾರಿಹೋಕರ ದರೋಡೆಗೆ ಹೊಂಚು ಹಾಕುತ್ತಾ ಕುಳಿತಿದ್ದ ನಾಲ್ವರನ್ನು ನರೋಣಾ ಪೊಲೀಸರು ಶುಕ್ರವಾರ ನಸುಕಿನಲ್ಲಿಬಂಧಿಸಿದ್ದಾರೆ.

Vijaya Karnataka 6 Dec 2019, 3:50 pm
ಕಲಬುರಗಿ:ಚಿಂಚನಸೂರ-ಕಲ್ಲಹಂಗರಗಾ ರಸ್ತೆಯ ಮಾಪೂರತಾಯಿ ದೇವಾಲಯದ ಕಮಾನ್‌ ಬಳಿ ದಾರಿಹೋಕರ ದರೋಡೆಗೆ ಹೊಂಚು ಹಾಕುತ್ತಾ ಕುಳಿತಿದ್ದ ನಾಲ್ವರನ್ನು ನರೋಣಾ ಪೊಲೀಸರು ಶುಕ್ರವಾರ ನಸುಕಿನಲ್ಲಿಬಂಧಿಸಿದ್ದಾರೆ.
Vijaya Karnataka Web ambush four arrested for robbery
ದರೋಡೆಗೆ ಹೊಂಚು, ನಾಲ್ವರ ಬಂಧನ


ಜೀವನ ಲಕ್ಷ್ಮಣ ಭಾವಿ, ಮಾಪಣ್ಣ ಬಂಡೆಪ್ಪ ಮಾವಿನಕರ್‌, ದೇವಾ ಅಲಿಯಾಸ್‌ ದೇವಿಂದ್ರ ಮಾವಿನಕರ್‌, ಸನತ್‌ ರೇವಣಸಿದ್ದಪ್ಪ ಭಾವಿ ಬಂಧಿತರು. ಇವರೆಲ್ಲರೂ ಚಿಂಚನಸೂರ ಗ್ರಾಮದವರು. ಇವರೊಂದಿಗೆ ಇದ್ದ ಸೋನಾಜಿ ಪ್ರಕಾಶ್‌ ಸಜ್ಜನ, ರೋಹಣ್‌ ಅಲಿಯಾಸ್‌ ಗುಂಡು ಪ್ರಕಾಶ್‌ ಕಾಂಬಳೆ ಮತ್ತು ಶಿವು ಚಂದಪ್ಪ ವಾಗ್ದರ್ಗಿ ಪೊಲೀಸರ ಆಗಮನ ಕಂಡು ತಕ್ಷಣ ಪರಾರಿಯಾಗಿದ್ದಾರೆ. ಬಂಧಿತರಿಂದ ಒಂದು ಮಿನಿ ಲಾರಿ ಹಾಗೂ ನಾಲ್ಕು ಮೋಟಾರ್‌ ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಿನಿ ಲಾರಿ ಕದ್ದಿದ್ದ ಭೂಪ!


ಬಂಧಿತ ನಾಲ್ವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಒಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ.

ಬಂಧಿತರ ಪೈಕಿ ಒಬ್ಬನಾಗಿರುವ ಸನತ್‌ ರೇವಣಸಿದ್ದಪ್ಪ ಭಾವಿ ಎಂಬಾತ ಡಿ.2ರಂದು ನಸುಕಿನ ವೇಳೆ ಮಾಪೂರತಾಯಿ ಕಮಾನ್‌ ಬಳಿ ನಿಂತಿದ್ದ ಮಿನಿ ಲಾರಿಯೊಂದನ್ನು ಕದ್ದು ಹೊಲದಲ್ಲಿಮುಚ್ಚಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾನೆ. ತಾನು ಕೈಗೊಂಡ ಈ ಕೃತ್ಯದಲ್ಲಿಶಿವಾ ಚಂದಪ್ಪ ವಾಗ್ದರ್ಗಿ ಹಾಗೂ ಪ್ರದೀಪ ಮರೆಪ್ಪ ಮದನಕರ್‌ ಸಹ ಸಾಥ್‌ ನೀಡಿದ್ದರು ಎಂಬ ಅಂಶವನ್ನು ಆತ ಬಹಿರಂಗಪಡಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ