ಆ್ಯಪ್ನಗರ

ಉ.ಪ್ರ. ಸೋಲಿಗೆ ರಾಹುಲ್‌ ಮೇಲೆ ಗೂಬೆ ಕೂರಿಸಬೇಡಿ: ಖರ್ಗೆ

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಹಿನ್ನಡೆಗೆ ರಾಹುಲ್ ಗಾಂಧಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ವಿಕ ಸುದ್ದಿಲೋಕ 11 Mar 2017, 2:28 pm
ಕಲಬುರಗಿ/ಚಿಕ್ಕಮಗಳೂರು: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಹಿನ್ನಡೆಗೆ ರಾಹುಲ್ ಗಾಂಧಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ರಾಹುಲ್ ಗಾಂಧಿ ನಾಯಕತ್ವ ಪಕ್ಷಕ್ಕೆ ಬೇಕೇ ಬೇಕು.ಅವರನ್ನು ಬಿಟ್ಟರೆ ಪಕ್ಷಕ್ಕೆ ದೊಡ್ಡ ಹಾನಿಯಾಗುತ್ತದೆ. ಎಲ್ಲಿ ತಪ್ಪಾಗಿದೆ ಗುರುತಿಸಿ ತಿದ್ದಿಕೊಳ್ಳುತ್ತೇವೆ ಎಂದು ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
Vijaya Karnataka Web assembly election result 2017 not blame rahul said kharge
ಉ.ಪ್ರ. ಸೋಲಿಗೆ ರಾಹುಲ್‌ ಮೇಲೆ ಗೂಬೆ ಕೂರಿಸಬೇಡಿ: ಖರ್ಗೆ


ರಾಹುಲ್ ಗಾಂಧಿ ನಾಯಕತ್ವ ಮುಂದುವರಿಯಲಿ. ಕಾಂಗ್ರೆಸ್‌ ಮುಕ್ತ ಭಾರತ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಪಕ್ಷವನ್ನು ಮುಗಿಸಬಹುದು. ರಾಜಕೀಯ ಮುಖಂಡರ ವೀರಾವೇಶದ ಮಾತಿನಿಂದ ಯಾವ ಪಕ್ಷವನ್ನೂ ಮುಗಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿಗೆ ತಿರುಗೇಟು ನೀಡಿದರು.

ಮೋದಿ ಚರಿಷ್ಮಾ ಉತ್ತರ ಪ್ರದೇಶದಲ್ಲಿ ಕೆಲಸ ಮಾಡಿದೆ. ಉತ್ತರ ಪ್ರದೇಶದ ಫಲಿತಾಂಶವನ್ನುಕನಾ೯ಟಕದ ಮುಂದಿನ ಚುನಾವಣೆಯ ಫಲಿತಾಂಶದ ಜತೆ ತುಲನೆ ಮಾಡಲಾಗದು. ಗೆಲ್ಲಲು ನಾವು ಏನು ಮಾಡಬೇಕೊ ಅದೆಲ್ಲವನ್ನು ಮಾಡುತ್ತೇವೆ. ಎಲ್ಲೆಲ್ಲಿ ತಪ್ಪುಗಳಾಗಿಯೊ ಅದೆಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ ಎಂದರು.

ರಾಜ್ಯದ ಮೇಲೆ ಪ್ರಭಾವ ಬೀರದು

ಪಂಚರಾಜ್ಯ ಚುನಾವಣೆ ಫಲಿತಾಂಶ ನಮ್ಮ ರಾಜ್ಯದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಚಿಕ್ಕಮಗಳೂರಿನ ಲಕ್ಕವಳ್ಳಿಯಲ್ಲಿ ಕಾನೂನು ಸಚಿವ ಟಿ ಬಿ ಜಯಚಂದ್ರ ಹೇಳಿದ್ದಾರೆ.

ಉತ್ತರ ಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಇರುವ ಮೋದಿ ಅಲೆ ನಮ್ಮ ರಾಜ್ಯಕ್ಕೆ ಅನ್ವಯವಾಗುತ್ತದೆ ಎಂಬ ನಂಬಿಕೆ ಇಲ್ಲ. ಮೋದಿ ಅಥವಾ ಅಮಿತ್ ಷಾ ನಮ್ಮ ರಾಜ್ಯಕ್ಕೆ ಬಂದು ಅಧಿಕಾರ ಮಾಡಲು ಸಾಧ್ಯವಿಲ್ಲ. ಸ್ಥಳೀಯ ರಾಜಕಾರಣವೇ ಬೇರೆ ರಾಷ್ಟ್ರ ರಾಜಕಾರಣವೇ ಬೇರೆ. ಇಲ್ಲಿ ಮೋದಿ ಅಥವಾ ಅಮಿತ್ ಷಾ ಬಂದು ರಾಜಕೀಯ ಮಾಡಲ್ಲ. ಸ್ಥಳೀಯ ರಾಜಕಾರಣಿಗಳು ಇಲ್ಲಿ ಅಧಿಕಾರ ಮಾಡುವವರು. ಹಾಗಾಗಿ ನಮ್ಮ ರಾಜ್ಯದಲ್ಲಿ ಮೋದಿ ಅಲೆ ಇಲ್ಲ ಎಂದು ಅವರು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

ವಿಂಗಡಣೆ ಹುನ್ನಾರ

ಉತ್ತರ ಪ್ರದೇಶದಲ್ಲಿ ಸಮಾಜವನ್ನು ಸಂಪೂರ್ಣ ವಿಂಗಡಿಸಿ ರಾಜಕೀಯ ಮಾಡೋ ಹುನ್ನಾರ ನಡೆದಿದೆ. ಜನಾಭಿಪ್ರಾಯಕ್ಕೆ ತಲೆ ಬಾಗಲೇ ಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸೋಲಿಸಲು ಎಲ್ಲ ಸೆಕ್ಯೂಲರ್ ಪಾರ್ಟಿಗಳು ಮಾಡಿರುವ ಪ್ರಯತ್ನ ವಿಫಲವಾಗಿದೆ. ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ. ಪಂಜಾಬ್ ನಲ್ಲಿ ಬಿಜೆಪಿಗೆ ತಕ್ಕ ಬುದ್ದಿ ಕಲಿಸಲಾಗಿದೆ. ಪಂಚರಾಜ್ಯಗಳ ಪೈಕಿ ಪಂಜಾಬ್, ಗೋವಾ, ಮಣಿಪುರದ ಫಲಿತಾಂಶ ಖುಷಿ ತಂದಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ