ಆ್ಯಪ್ನಗರ

ರಾಜಕೀಯದಿಂದ ದೂರ: ಯದುವೀರ್‌

ರಾಜಕಾರಣದಲ್ಲಿ ಆಸಕ್ತಿ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿದ್ದು ಜನರ ಸೇವೆ ಮಾಡುವುದಕ್ಕಿಂತ ರಾಜ ಮನೆತನದಿಂದಲೇ ಸಾಮಾಜಿಕ ಕಾರ್ಯಗಳ ಮೂಲಕ ಜನಸೇವೆ ಮಾಡಲು ಬಯಸಿರುವೆ ಎಂದು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ್‌ ಒಡೆಯರ್‌ ಹೇಳಿದರು.

Vijaya Karnataka 7 Feb 2019, 5:00 am
ಕಲಬುರಗಿ:ರಾಜಕಾರಣದಲ್ಲಿ ಆಸಕ್ತಿ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿದ್ದು ಜನರ ಸೇವೆ ಮಾಡುವುದಕ್ಕಿಂತ ರಾಜ ಮನೆತನದಿಂದಲೇ ಸಾಮಾಜಿಕ ಕಾರ್ಯಗಳ ಮೂಲಕ ಜನಸೇವೆ ಮಾಡಲು ಬಯಸಿರುವೆ ಎಂದು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ್‌ ಒಡೆಯರ್‌ ಹೇಳಿದರು.
Vijaya Karnataka Web away from politics yadweie
ರಾಜಕೀಯದಿಂದ ದೂರ: ಯದುವೀರ್‌

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಕ್ಕೆ ಬಂದರೆ ಮಾತ್ರವೇ ಜನ ಸೇವೆ ಎನ್ನುವುದೇನು ಇಲ್ಲ. ಈ ಹಿಂದಿನಿಂದಲೂ ನಮ್ಮ ರಾಜ ಮನೆತನ ಕನ್ನಡಿಗರ, ಕರ್ನಾಟಕದ ಸೇವೆಯನ್ನು ಮಾಡುತ್ತಲೇ ಇದೆ. ಅದು ಮುಂದುವರಿಯುತ್ತದೆ. ವಿಶೇಷವಾಗಿ ಯಾವುದಾದರೂ ಒಂದು ಪಕ್ಷವನ್ನು ಸೇರಿಕೊಂಡು ಕೆಲಸ ಮಾಡುವ ಉಮೇದು ಸದ್ಯಕ್ಕಿಲ್ಲ ಎಂದರು.

ಇದಕ್ಕೆ ವಿಶೇಷವಾದ ಬಣ್ಣ ಹಚ್ಚುವ ಅಗ್ಯವಿಲ್ಲ ಎನ್ನುತ್ತಲೇ ನಕ್ಕ ಮಹಾರಾಜ್‌, ರಾಜಕಾರಣಕ್ಕಿಂತ ದೊಡ್ಡ ಕೊಡುಗೆ ಸಾಮಾನ್ಯ ನಾಗರಿಕನಾಗಿ ನೀಡಬಹುದು ಎಂದರು.

ಶಾಲೆಯ ದಿನಗಳಲ್ಲಿ ಕಲಬುರಗಿ ಬಗ್ಗೆ ಓದಿದ್ದೆ. ಆದರೆ, ಯಾವತ್ತು ಈ ಭಾಗಕ್ಕೆ ಬಂದಿರಲಿಲ್ಲ. ಆದರೆ, ಇವತ್ತು ಚಿಕ್ಕವೀರೇಶ್ವರ ಸಂಸ್ಥಾನ ಮಠದ ದೆಸೆಯಿಂದಾಗಿ ಈ ಭಾಗಕ್ಕೆ ಬರುವುದು ಸಾಧ್ಯವಾಗಿದೆ. ಈ ಭಾಗದ ಜನರು ತುಂಬಾ ಮುಗ್ಧರು. ಇವರಿಗಾಗಿ ಮುಂದಿನ ದಿನಗಳಲ್ಲ ಕೆಲಸ ಮಾಡುವ ಇರಾದೆ ಇದೆ. ಈಗಾಗಲೇ ಮೈಸೂರು ನಗರದ ಸ್ವಚ್ಛ ರಾಯಭಾರಿಯಾಗಿದ್ದು ನಗರವನ್ನು ಸ್ವಚ್ಛ ಮಾಡಲಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ