ಆ್ಯಪ್ನಗರ

ಬಸವಣ್ಣ ವಿಶ್ವದ ಮೊದಲ ದಾರ್ಶನಿಕ

ಬಸವಣ್ಣ ಎಲ್ಲ ವರ್ಗಗಳ ಜನರನ್ನು ಸಂಘಟಿಸಿ ಸಾಮಾಜಿಕ, ಧಾರ್ಮಿಕ ಪರಿವರ್ತನೆ ಮಾಡಿದ ವಿಶ್ವದ ಮೊಟ್ಟ ಮೊದಲ ದಾರ್ಶನಿಕ ಎಂದು ಗೋದುತಾಯಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನೀಲಾಂಬಿಕಾ ಪೋಲಿಸ್‌ ಪಾಟೀಲ್‌ ಅಭಿಪ್ರಾಯಪಟ್ಟರು.

Vijaya Karnataka 11 Dec 2018, 5:00 am
ಕಲಬುರಗಿ: ಬಸವಣ್ಣ ಎಲ್ಲ ವರ್ಗಗಳ ಜನರನ್ನು ಸಂಘಟಿಸಿ ಸಾಮಾಜಿಕ, ಧಾರ್ಮಿಕ ಪರಿವರ್ತನೆ ಮಾಡಿದ ವಿಶ್ವದ ಮೊಟ್ಟ ಮೊದಲ ದಾರ್ಶನಿಕ ಎಂದು ಗೋದುತಾಯಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನೀಲಾಂಬಿಕಾ ಪೋಲಿಸ್‌ ಪಾಟೀಲ್‌ ಅಭಿಪ್ರಾಯಪಟ್ಟರು.
Vijaya Karnataka Web basavanna is the worlds first visionary
ಬಸವಣ್ಣ ವಿಶ್ವದ ಮೊದಲ ದಾರ್ಶನಿಕ


ನಗರದ ಬಸವ ಸಮಿತಿಯ ಅಕ್ಕನ ಬಳಗ ಹಮ್ಮಿಕೊಂಡಿದ್ದ ಲಿಂ.ಗುರುಪಾದಪ್ಪ ಶಿವಲಿಂಗಪ್ಪ ಘಂಟಿ ಸ್ಮರಣಾರ್ಥ ಅರಿವಿನ ಮನೆ 574ನೇ ದತ್ತಿ ಕಾರ್ಯಕ್ರಮದಲ್ಲಿ ಶರಣರ ವೈಚಾರಿಕ ಚಿಂತನೆಗಳ ಕುರಿತು ಅವರು ಅನುಭಾವ ನೀಡಿದರು.

ಜಗತ್ತಿನ ಮೊದಲ ಸಂಸತ್ತು ಅನುಭವ ಮಂಟಪದಲ್ಲಿ 1ಲಕ್ಷಕ್ಕಿಂತ ಹೆಚ್ಚು ಜಂಗಮರಿಗೆ, ಕಾಯಕ ಜೀವಿಗಳಿಗೆ ವೇದಿಕೆಯನ್ನು ಒದಗಿಸಿಕೊಟ್ಟು ಗಮನ ಸೆಳೆದ್ದು ಬಸವಣ್ಣನ ಪ್ರಜಾಪ್ರಭುತ್ವದ ನಿಲುವು. ಅಂತಹ ನಿಲುವಿನಿಂದ ಜಗತ್ತಿನ ಮುಂದೆ ಕಾಯಕ ಸಂಸ್ಕೃತಿಯನ್ನು ಪರಿಚಯಿಸಿದ ಅಪರೂಪದ ವ್ಯಕ್ತಿ ಎನ್ನುವುದು ಬೇರೆ ಹೇಳಬೇಕಿಲ್ಲ ಎಂದರು.

12ನೇ ಶತಮಾನದ ಶರಣರು ವೈಚಾರಿಕ ನೆಲೆಗಟ್ಟಿನ ಮೇಲೆ ವಚನಗಳನ್ನು ರಚಿಸಿದರು. ಕನ್ನಡ ಭಾಷೆಗೆ ವಿಶೇಷವಾದ ಶಕ್ತಿ, ಸತ್ವವನ್ನು ತುಂಬಿದವರು ಎಂದು ಹೇಳಿದರು.

ವಿಶ್ರಾಂತ ಪ್ರಾಂಶುಪಾಲ ಪ್ರೊ.ನಿಂಗಮ್ಮ ಪತಂಗೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮೊಳಗೆ ನಾವು ಜಾಗೃತವಾಗಿ ಸಾಮಾಜಿಕ ಚಿಂತನೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಇಂತಹ ಕಾರ್ಯಕ್ಕೆ ಶರಣರ ವಚನಗಳು, ಅವರ ದೃಷ್ಟಿಕೋನ ಮತ್ತು ನಡತೆ ಪ್ರೇರಣೆಯಾಗಬೇಕು. ಆಗ ಮಾತ್ರವೇ ನಾವು ಬಹಳ ಕಾಲದವರೆಗೆ ಶರಣರನ್ನು ಜೀವಂತ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು, ಶರಣರು ನಡೆ-ನುಡಿಗಳಲ್ಲಿ ಪರಿಶುದ್ಧ ಜೀವಿಗಳಾಗಿದ್ದರು. ಅಂತಹ ಮಹಾನ್‌ ಆದರ್ಶವ್ಯಕ್ತಿಗಳ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಬಸವ ಸಮಿತಿಯ ಉಪಾಧ್ಯಕ್ಷೆ ಡಾ. ಜಯಶ್ರೀ ದಂಡೆ, ಡಾ.ಬಿ.ಡಿ ಜತ್ತಿ ವಚನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ವೀರಣ್ಣ ದಂಡೆ, ದತ್ತಿ ದಾಸೋಹಿಗಳಾದ ಭುವನೇಶ್ವರಿ ಘಂಟಿ, ಬಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್‌.ಕೆ.ಉದ್ದಂಡಯ್ಯ ಹಾಗೂ ಇತರರು ಉಪಸ್ಥಿತರಿದ್ದರು. ಡಾ.ಶಿವಲೀಲಾ ಚಟ್ನಳ್ಳಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ