ಆ್ಯಪ್ನಗರ

ಅಸಮಾಧಾನ ಇದೆಯೋ ಇಲ್ಲವೋ ಸಂಪುಟ ವಿಸ್ತರಣೆ ಬೇಗ ಆಗಲಿ: ನಿರಾಣಿ

ರಮೇಶ್‌ ಜಾರಕಿಹೊಳಿ ಅವರ ಹತ್ತಿರ ವಿಶೇಷ ಶಕ್ತಿ ಇದೆ. ಅವರು ತುಂಬಾ ಒಳ್ಳೆಯವರು. ಅವರ ಕ್ಷೇತ್ರದಲ್ಲೇ ನನ್ನ ಸಕ್ಕರೆ ಕಾರ್ಖಾನೆಯೂ ಇದೆ, ಪಂಚಮ ಸಾಲಿ ಪೀಠ ಸ್ಥಾಪನೆ ವಿಷಯದಲ್ಲಿ ನಾನು ಒಂದೇ ಸಮುದಾಯಕ್ಕೆ ಸೀಮಿತ ಎನ್ನುವ ಆರೋಪಗಳಲ್ಲಿ ಹುರುಳಿಲ್ಲ.

Vijaya Karnataka 26 Jan 2022, 10:30 pm
ಕಲಬುರಗಿ: ಸಚಿವರಿಗೆ ಸ್ವಂತ ಜಿಲ್ಲೆಬಿಟ್ಟು ಅನ್ಯ ಜಿಲ್ಲೆಗಳಿಗೆ ಉಸ್ತುವಾರಿ ನೀಡಿರುವುದು ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯರು ಹಾಗೂ ವರಿಷ್ಠರ ನಿರ್ಧಾರ. ಬಾಗಲಕೋಟೆಯವನಾದ ನನಗೆ ಕಲಬುರಗಿ ಉಸ್ತುವಾರಿ ನೀಡಿರುವುದಕ್ಕೆ ಸಂತೋಷವಾಗಿದೆ. ಖುಷಿಯಿಂದಲೇ ಕೆಲಸ ಮಾಡುವೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.
Vijaya Karnataka Web ಮುರುಗೇಶ್‌ ನಿರಾಣಿ
ಮುರುಗೇಶ್‌ ನಿರಾಣಿ


ಕಲಬುರಗಿಯಲ್ಲಿ ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುರುಗೇಶ್‌ ನಿರಾಣಿ, ''ಬೇರೆಯವರಿಗೆ ಅಸಮಾಧಾನ ಇದೆಯೋ ಅಥವಾ ಇಲ್ಲೋ ಗೊತ್ತಿಲ್ಲ. ಅದು ಅವರಿಗೆ ಬಿಟ್ಟಿದ್ದು. ನನಗಂತೂ ಸಂತೋಷ ಇದೆ. ಎಲ್ಲರೂ ಸಹಕಾರ ಕೊಡುತ್ತಿದ್ದಾರೆ. ಹೆಚ್ಚು ಸಂತೋಷವಾಗಿರುವೆ. ಕೆಲಸ ಮಾಡಲು ಯಾವ ಜಿಲ್ಲೆಯಾದರೇನು ಎಂದರು.

ಜೆಸ್ಕಾಂ ಅವಾಂತರದಿಂದ ಕಲಬುರಗಿ ಅನ್ನದಾತ ಕಂಗಾಲು: ಬೆಳೆ ನಾಶ, ಜೀವ ನಾಶಕ್ಕೆ ಯಾರು ಹೊಣೆ?

ಸ್ವಂತ ಜಿಲ್ಲೆ ಬಿಟ್ಟು ಅನ್ಯ ಜಿಲ್ಲೆಉಸ್ತುವಾರಿ ಕೊಟ್ಟಿರುವುದಕ್ಕೆ ಕೆಲವರಿಗೆ ಅಸಮಾಧಾನ ಇದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ''ರೈಟ್‌ ಕ್ವಶ್ಚಟನ್‌ ರಾಂಗ್‌ ಪರ್ಸನ್‌ ಎಂದು ಉತ್ತರಿಸಿದರು. ಯಾರಿಗೆ ಅಸಮಾಧಾನ ಇದೆ ಅವರಿಗೆ ಕೇಳಬೇಕು. ನನಗೆ ಅಸಮಾಧಾನ ಇಲ್ಲ'' ಎಂದು ಪುನರುಚ್ಚರಿಸಿದರು.

''ಯಾರಿಗಾದರೂ ಅಸಮಾಧಾನ ಇದ್ದರೆ ಅವರನ್ನು ಕರೆದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡುತ್ತಾರೆ. ಸಂಪುಟ ವಿಸ್ತರಣೆ ಬೇಗ ಆಗಬೇಕು ಎನ್ನುವುದು ನನ್ನದೂ ಆಶಯ ಇದೆ. ಸಚಿವ ಸ್ಥಾನ ಯಾರಿಗೆ ಕೊಡಬೇಕು ಎನ್ನುವುದು ಕೇಂದ್ರ ನಾಯಕರು, ಪಕ್ಷ, ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು. ಸೂಕ್ತ ಸಮಾಲೋಚನೆ ನಡೆಸಿದ ನಂತರ ಬಿಜೆಪಿ ಹೈಕಮಾಂಡ್‌ ನಾಯಕರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ'' ಎಂದು ಮುರುಗೇಶ್‌ ನಿರಾಣಿ ಸ್ಪಷ್ಟಪಡಿಸಿದರು.

ಕಲಬುರಗಿಯಲ್ಲಿ ಅನ್ನದಾತನಿಗೆ ಕೈಕೊಟ್ಟ ಬಾಳೆ! ಕೊರೊನಾದಿಂದ ಖರೀದಿಸುವವರಿಲ್ಲದೇ ರೈತ ಕಂಗಾಲು

''ರಮೇಶ್‌ ಜಾರಕಿಹೊಳಿ ಅವರ ಹತ್ತಿರ ವಿಶೇಷ ಶಕ್ತಿ ಇದೆ. ಅವರು ತುಂಬಾ ಒಳ್ಳೆಯವರು. ಅವರ ಕ್ಷೇತ್ರದಲ್ಲೇ ನನ್ನ ಸಕ್ಕರೆ ಕಾರ್ಖಾನೆಯೂ ಇದೆ, ಪಂಚಮ ಸಾಲಿ ಪೀಠ ಸ್ಥಾಪನೆ ವಿಷಯದಲ್ಲಿ ನಾನು ಒಂದೇ ಸಮುದಾಯಕ್ಕೆ ಸೀಮಿತ ಎನ್ನುವ ಆರೋಪಗಳಲ್ಲಿ ಹುರುಳಿಲ್ಲ. ಎಲ್ಲ ಸಮುದಾಯದವರಿಗೂ ಪ್ರಾತಿನಿಧ್ಯ, ಗೌರವ ನೀಡಲಾಗುತ್ತಿದೆ'' ಎಂದು ಸಚಿವ ಮುರುಗೇಶ್‌ ನಿರಾಣಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ