ಆ್ಯಪ್ನಗರ

ಬಿಸಿಎಂ ಹಾಸ್ಟೆಲ್‌ ಅವ್ಯವಸ್ಥೆ, ವಿದ್ಯಾರ್ಥಿಗಳ ಪ್ರತಿಭಟನೆ

ಇಲ್ಲಿನ ಶೇಖ್‌ರೋಜಾ ಬಡಾವಣೆಯಲ್ಲಿರುವ ಹಿಂದುವಳಿದ ವರ್ಗಗಳ ವಿದ್ಯಾರ್ಥಿಗಳ (ಬಿಸಿಎಂ-ಮಾಡೆಲ್‌ 1) ವಸತಿ ನಿಲಯದಲ್ಲಿಅವ್ಯವಸ್ಥೆ ತುಂಬಿ ತುಳುಕುತ್ತಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Vijaya Karnataka 6 Dec 2019, 5:00 am
ಕಲಬುರಗಿ:ಇಲ್ಲಿನ ಶೇಖ್‌ರೋಜಾ ಬಡಾವಣೆಯಲ್ಲಿರುವ ಹಿಂದುವಳಿದ ವರ್ಗಗಳ ವಿದ್ಯಾರ್ಥಿಗಳ (ಬಿಸಿಎಂ-ಮಾಡೆಲ್‌ 1) ವಸತಿ ನಿಲಯದಲ್ಲಿಅವ್ಯವಸ್ಥೆ ತುಂಬಿ ತುಳುಕುತ್ತಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Vijaya Karnataka Web 5GLB3_42
ಶೇಖ್‌ರೋಜಾ ಬಡಾವಣೆಯಲ್ಲಿರುವ ಬಿಸಿಎಂ-ಮಾಡೆಲ್‌ 1 ಹಾಸ್ಟೆಲ್‌ನಲ್ಲಿಅವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.


ಹಾಸ್ಟೆಲ್‌ನಲ್ಲಿಒಂದು ತಿಂಗಳಿಂದ ವಾರ್ಡನ್‌ ಹುದ್ದೆ ಖಾಲಿ ಉಳಿದಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಊಟ ದೊರಕುತ್ತಿಲ್ಲ. ಮೇಲಾಗಿ, ಡಿ.4ರಂದು ಎಲ್ಲವಿದ್ಯಾರ್ಥಿಗಳು ಉಪವಾಸ ಇರಬೇಕಾದ ಸ್ಥಿತಿ ಕಾಡಿದೆ. ಇಷ್ಟಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಲು ಮುಂದೆ ಬಂದಿಲ್ಲಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಹಾಸಿಗೆ-ಹೊದಿಕೆ ನೀಡಿಲ್ಲ. ಕಂಪ್ಯೂಟರ್‌ಗಳು ಕೇವಲ ಹೆಸರಿಗೆ ಮಾತ್ರ ಇದ್ದು, ಒಂದೂ ಕಾರ್ಯನಿರ್ವಹಿಸುತ್ತಿಲ್ಲ. ಹಾಸ್ಟೆಲ್‌ ಸುತ್ತ ನೈರ್ಮಲ್ಯ ಕೊರತೆ ಕಾಡುತ್ತಿರುವ ಹಿನ್ನೆಲೆಯಲ್ಲಿಮೇಲಿಂದ ಮೇಲೆ ವಿದ್ಯಾರ್ಥಿಗಳ ಆರೋಗ್ಯ ಹದಗೆಡುತ್ತಿರುತ್ತದೆ. ಯುಪಿಎಸ್‌ ಕೊರತೆಯ ಕಾರಣದಿಂದಾಗಿ ರಾತ್ರಿ ವೇಳೆ ವಿದ್ಯುತ್‌ ಕೈ ಕೊಟ್ಟರೆ ವಿದ್ಯಾರ್ಥಿಗಳು ಓದಲಾಗದ ಸ್ಥಿತಿ ಕಾಡುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದರು.

ಈ ಎಲ್ಲಸಮಸ್ಯೆಗಳ ಕುರಿತು ಈ ಮೊದಲು ಸಾಕಷ್ಟು ಬಾರಿ ತಾಲೂಕು ವಿಸ್ತರಣಾಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗಿಲ್ಲ. ಮೇಲಾಗಿ, ದೂರು ನೀಡಲು ತೆರಳಿದ್ದ ವಿದ್ಯಾರ್ಥಿಗಳ ಜೊತೆಗೆ ವಿಸ್ತರಣಾಧಿಕಾರಿಗಳು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಅವರು ವಿಷಾದಿಸಿದರು.

ದೂರುಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ