ಆ್ಯಪ್ನಗರ

ಬುದ್ದಿವಂತ ನಾಯಕಿ ಕಳೆದುಕೊಂಡ ಬಿಜೆಪಿ

ಬಿಜೆಪಿ ಪಕ್ಷ ಓರ್ವ ಬುದ್ದಿವಂತ ಮತ್ತು ದಿಟ್ಟ ನಾಯಕಿಯನ್ನು ಕಳೆದುಕೊಂಡಿದೆ. ಸುಷ್ಮಾ ಸ್ವರಾಜ್‌ಅವರೊಬ್ಬ ಮಹಾನ್‌ ದೂರದೃಷ್ಟಿ ಇರುವ ಮತ್ತು ಚಿಂತನಾಶೀಲ ರಾಜಕಾರಣಿ ಆಗಿದ್ದರು ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ಅಭಿಪ್ರಾಯಪಟ್ಟರು.

Vijaya Karnataka 14 Aug 2019, 3:38 pm
ಕಲಬುರಗಿ:ಬಿಜೆಪಿ ಪಕ್ಷ ಓರ್ವ ಬುದ್ದಿವಂತ ಮತ್ತು ದಿಟ್ಟ ನಾಯಕಿಯನ್ನು ಕಳೆದುಕೊಂಡಿದೆ. ಸುಷ್ಮಾ ಸ್ವರಾಜ್‌ಅವರೊಬ್ಬ ಮಹಾನ್‌ ದೂರದೃಷ್ಟಿ ಇರುವ ಮತ್ತು ಚಿಂತನಾಶೀಲ ರಾಜಕಾರಣಿ ಆಗಿದ್ದರು ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ಅಭಿಪ್ರಾಯಪಟ್ಟರು.
Vijaya Karnataka Web bjp lost its wise women politicians
ಬುದ್ದಿವಂತ ನಾಯಕಿ ಕಳೆದುಕೊಂಡ ಬಿಜೆಪಿ


ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ದಿ. ಸುಷ್ಮಾ ಸ್ವರಾಜ್‌ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ದೇಶದಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ, ಅತ್ಯುತ್ತಮ ಸಂಸದೀಯ ಪಟುವಾಗಿ, ವಿದೇಶಾಂಗ ಮಂತ್ರಿಯಾಗಿ ಹಲವು ಪ್ರಥಮಗಳಿಗೆ ಮುನ್ನುಡಿ ಹಾಡಿದ್ದಾರೆ. ವಿದೇಶಾಂಗ ಮಂತ್ರಿಯಾಗಿದ್ದಾಗ ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರಿಗೆ ಥಟ್ಟನೆ ಸಹಾಯ ಹಸ್ತ ಚಾಚುತ್ತಿದ್ದ ಅವರ ಗುಣವನ್ನು ಇಡೀ ಜಗತ್ತಿನ ಎಲ್ಲ ರಾಷ್ಟ್ರಗಳು ಕೊಂಡಾಡಿವೆ. ಅಂತಹ ನಾಯಕಿ ಹಲವಾರು ಮಹಿಳಾ ರಾಜಕಾರಣಿಗಳಿಗೆ ಆದರ್ಶ. ಅವರನ್ನು ಕಳೆದುಕೊಂಡದ್ದು ದುಖಃ ತಂದಿದೆ ಎಂದರು.

ಕಾಶ್ಮೀರ ಪ್ರಕರಣದಲ್ಲಂತೂ ಕೊನೆಯವರೆಗೆ ದೇಶದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳು, ಕೇಂದ್ರ ಸರಕಾರ ತೆಗೆದುಕೊಳ್ಳುತ್ತಿದ್ದ ಕ್ರಮಗಳ ಕುರಿತು ಗಮನಿಸುತ್ತಲೇ ಇದ್ದ ಅವರು, ಆರೋಗ್ಯ ಸರಿ ಇಲ್ಲದೆ ಹಾಸಿಗೆಯಲ್ಲಿದ್ದರೂ, ಕಾಶ್ಮೀರಕ್ಕೆ ಹೇರಿದ್ದ 370 ಕಲಂ ತೆಗೆದು ಹಾಕಿದಾಗ ಟ್ವಿಟ್‌ ಮಾಡಿ ಖುಷಿ ವ್ಯಕ್ತಪಡಿಸಿದ್ದ ಧೀಮಂತೆ ಎಂದರು.

ಈ ವೇಳೆಯಲ್ಲಿ ಮುಖಂಡರಾದ ಚಂದು ಪಾಟೀಲ್‌, ಉಮೇಶ ಪಾಟೀಲ್‌, ಶಿವಾನಂದ ಪಾಟೀಲ ಅಷ್ಟಗಿ, ರಾಜು ವಾಡೇಕರ್‌, ಶರಣಬಸಪ್ಪ ಕಾಡಾದಿ, ಶಿವಯೋಗಿ ನಾಗನಹಳ್ಳಿ, ಸಿದ್ಧಾಜಿ ಪಾಟೀಲ್‌, ಅನಿಲ್‌ ಜಾಧವ, ವೀರಣ್ಣ ಹೋನ್ನಳ್ಳಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ