ಕಲಬುರಗಿ: ಬರುವ ನ.1ರಂದು ಬೆಂಗಳೂರಿನಲ್ಲಿ ಪರಿವರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯಾತ್ರೆಗೆ ರಾಜ್ಯದ 55 ಸಾವಿರ ಬೂತಗಳಿಂದ ತಲಾ ಮೂರು ಬೈಕ್ಗಳು ಮತ್ತು ಆರು ಜನರು ಕಡ್ಡಾಯವಾಗಿ ಭಾಗವಹಿಸಲಿದ್ದಾರೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಲ್ಲಿನ ಪಕ್ಷದ ಕಚೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮುಂದಿನ ಚುನಾವಣೆಯ ತಯಾರಿ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳ ವಿವರಣೆ ನೀಡಿದ ಅವರು, ಜಿಲ್ಲೆಯ ಒಂಬತ್ತು ವಿಧಾನ ಸಭಾ ಕ್ಷೇತ್ರಗಳ ಪ್ರತಿ ಬೂತನಿಂದಲ್ಲೂ ತಲಾ ಮೂರು ಬೈಕ್,ಆರು ಜನರು ಬರಲೇಬೇಕು, ಇದಕ್ಕೂ ಹೆಚ್ಚು ಬಂದರೆ ತಪ್ಪಿನಿಲ್ಲ ಎಂದರು.
ಪ್ರತಿ ಬೂತನಲ್ಲೂ 10 ಜನ ಪದಾಧಿಕಾರಿಗಳ ನೇಮಕ ಆಗಬೇಕು, ಆಗದಿದ್ದರೆ ಇನ್ನೂ ಸಮಯವಿದೆ, ಮಾಡಿ ಮುಗಿಸಬೇಕು.ಪರಿವರ್ತನಾ ರಾರಯಲಿ ನಂತರ ರಾಜ್ಯದ ವಿವಿಧ 10 ವಿಭಾಗ ಮಟ್ಟದ ಸಮಾವೇಶಗಳು ನಡೆಯಲಿದೆ. ಒಟ್ಟಾರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳು ಗೆಲ್ಲಬೇಕು, ಈ ನಿಟ್ಟಿನಲ್ಲಿ ಅಧ್ಯಕ್ಷ ಶಾ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದರು.
ಇನ್ನೂ ಚುನಾವಣೆ ಮುಗಿಯವವರೆಗೂ ಮನೆ, ಮಠ ಬಿಟ್ಟು ಕೆಲಸ ಮಾಡುತ್ತವೆ ಎನ್ನುವವರು ಸಹ ಸಿದ್ಧರಾಗಿ, ಅವರಿಗೆ ಕೆಲಸ ಹಂಚುತ್ತವೆ ಎಂದರು. ಲೋಕಸಭಾ, ರಾಜ್ಯಸಭಾ ಸದಸ್ಯರು,ಶಾಸಕರು ತಮ್ಮ ಕ್ಷೇತ್ರದ ಜೊತೆಗೆ ಇತರೆ ಕ್ಷೇತ್ರಗಳಲ್ಲಿನ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಹೇಳಿದರು.
ಸಭೆಯಲ್ಲಿ ಶಾಸಕರಾದ ದತ್ತಾತ್ರೇಯ ಪಾಟೀಲ್, ಬಿ.ಜಿ.ಪಾಟೀಲ್, ಮುಖಂಡರಾದ ಬಾಬುರಾವ ಚವ್ಹಾಣ, ಸುನೀಲ ವಲ್ಲಾಪುರೆ, ವಾಲ್ಮೀಕಿ ನಾಯಕ್,ಶಶೀಲ ನಮೋಶಿ, ರಾಜಗೋಪಾಲರೆಡ್ಡಿ, ಜಿಲ್ಲಾಧ್ಯಕ್ಷ ದೊಡ್ಡಪ್ಪ ಗೌಡ ಪಾಟೀಲ್, ಬಸವರಾಜ ಇಂಗಿನ್, ಶರಣಪ್ಪ ಹದನೂರು, ಸುಭಾಷ ಬಿರಾದಾರ, ರವಿ ಬಿರಾದಾರ, ಲಿಂಗರಾಜ ಬಿರಾದಾರ, ಶಾಮರಾವ ಪ್ಯಾಟಿ, ಪ್ರಕಾಶ ಜಮಾದಾರ, ರಾಜು , ಶರಣು ಸಲಗರ್, ಬಸವರಾಜ ಮತ್ತಿಮೂಡ್, ಶಶಿಕಲಾ ಟೆಂಗಳಿ, ಮಲ್ಲಿಕಾರ್ಜುನ ಎಮ್ಮೆಗನೂರ,ಡಾ.ಇಂದಿರಾ ಶಕ್ತಿ, ಸಂಗಣ್ಣ ಇಜೇರಿ, ಸಂಗಮೇಶ ರಾಜೋಳ್ಳಿ ಸೇರಿದಂತೆ ಅನೇಕರು ಇದ್ದರು.