ಆ್ಯಪ್ನಗರ

ವಿಶ್ವನಾಥ್ ಉಪಚುನಾವಣೆಗೆ ನಿಂತು ತಪ್ಪು ಮಾಡಿದರು, ಬೈರತಿ ಮಾತಿನ ಮರ್ಮವೇನು?

ಎಚ್‌.ವಿಶ್ವನಾಥ್ ಅವರ ಸದ್ಯದ ರಾಜಕೀಯ ಪರಿಸ್ಥಿತಿಗೆ ಅವರೇ ಹೊಣೆಗಾರರು ಎಂದು ಸಚಿವ ಬೈರತಿ ಬಸವರಾಜು ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು ಈ ಕುರುತಾಗಿ ಏನು ಹೇಳಿದ್ದಾರೆ ಎಂಬುವುದರ ವಿವರ ಇಲ್ಲಿದೆ.

Vijaya Karnataka Web 24 Jun 2020, 12:20 pm
ಕಲಬುರಗಿ: ಎಚ್‌.ವಿಶ್ವನಾಥ್ ಉಪಚುನಾವಣೆಗೆ ನಿಂತು ತಪ್ಪು ಮಾಡಿದರು. ಹೀಗಂದವರು ಸಚಿವ ಬೈರತಿ ಬಸವರಾಜು. ಎಮ್‌ಎಲ್‌ಸಿ ಸ್ಥಾನ ಕೈತಪ್ಪಿ ಅಸಮಾಧಾನದಲ್ಲಿರುವ ವಿಶ್ವನಾಥ್‌ ಅವರ ಇಂದಿನ ಪರಿಸ್ಥಿತಿಗೆ ಅವರೇ ಕಾರಣ ಎಂದು ಭೈರತಿ ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.
Vijaya Karnataka Web bairathi


ಕಲಬುರಗಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಉಪಚುನಾವಣೆಗೆ ಸ್ಪರ್ಧಿಸಬೇಡಿ ಎಂದು ಹೇಳಿದರೂ ಕೇಳದೆ ನಿಂತು ವಿಶ್ವನಾಥ್ ಸೋಲನ್ನು ಅನುಭವಿಸಿದರು. ಆ ಕಾರಣಕ್ಕಾಗಿ ಈಗ ಅವರಿಗೆ ವಿಧಾನ ಪರಿಷತ್ ಸ್ಥಾನವೂ ಸಿಗಲಿಲ್ಲ ಎಂದಿದ್ದಾರೆ.

ಕಲಬುರಗಿ: ಪೊಲೀಸರ ಜೊತೆ ಜನರ ಘರ್ಷಣೆ, ಆಂಬ್ಯುಲೆನ್ಸ್‌ ಜಖಂ, ಆರೋಗ್ಯ ಸಿಬ್ಬಂದಿಗೆ ಗಾಯ

ಚುನಾವಣಾ ಸ್ಪರ್ಧೆ ಮಾಡುವುದರ ಬದಲಾಗಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಸಚಿವ ಸ್ಥಾನ ನೀಡುವುದಾಗಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದರು. ಆದರೆ ಅವರ ಮಾತನ್ನು ಕೇಳದೆ ನಾನು ಚುನಾವಣೆಗೆ ನಿಂತು ಗೆದ್ದು ಬರುತ್ತೇನೆ ಎಂದಿದ್ದರು ವಿಶ್ವನಾಥ್. ಆದರೆ ಅದು ಸಾಧ್ಯವಾಗಲಿಲ್ಲ.

ಆದರೆ ಚುನಾವಣೆಯಲ್ಲಿ ಗೆಲ್ಲಲೂ ಸಾಧ್ಯವಾಗಿಲ್ಲ, ಪರಿಣಾಮ ವಿಧಾನಪರಿಷತ್ ಸ್ಥಾನವೂ ಸಿಗಲಿಲ್ಲ ಎನ್ನುವ ಮೂಲಕ ಸದ್ಯದ ವಿಶ್ವನಾಥ್ ರಾಜಕೀಯ ಸಂಕಷ್ಟದ ಪರಿಸ್ಥಿತಿಗೆ ಅವರೇ ಕಾರಣ ಎಂದಿದ್ದಾರೆ ಬೈರತಿ ಬಸವರಾಜ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ